ಕಾಶ್ಮೀರದೊಂದಿಗೆ ಜಗತ್ತು ನಿಲ್ಲದಿದ್ದರೂ ನಾವು ನಿಲ್ಲುತ್ತೇವೆ: ಇಮ್ರಾನ್
ಕಾಶ್ಮೀರ ವಿಚಾರದಲ್ಲಿ ಜಗತ್ತು ಜತೆಗಿಲ್ಲ ಎಂದು ಮತ್ತೆ ಒಪ್ಪಿದ ಪಾಕ್ ಪ್ರಧಾನಿ! ; ಪಾಕ್ ಗೆ ಮರಳಿದ ಇಮ್ರಾನ್ಗೆ ಹಾರ ತುರಾಯಿ ಹಾಕಿ ಸ್ವಾಗತ
Team Udayavani, Sep 29, 2019, 7:40 PM IST
ಇಸ್ಲಾಮಾಬಾದ್: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಬಡಬಡಿಸಿದ್ದ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್, ಇಸ್ಲಾಮಾಬಾದ್ ಗೆ ಅಮೆರಿಕ ಪ್ರವಾಸ ಮುಗಿಸಿ ಬಂದಿಳಿದಿದ್ದಾರೆ. ಇಮ್ರಾನ್ ಖಾನ್ ಇಸ್ಲಾಮಾಬಾದ್ ನಲ್ಲಿ ಬಂದಿಳಿಯುತ್ತಲೇ ಅವರಿಗೆ ಭರ್ಜರಿ ಹಾರತುರಾಯಿಯ ಸ್ವಾಗತ ಕೋರಲಾಯಿತು. ಇಮ್ರಾನ್ ಖಾನ್ ಪಿಟಿಐ ಪಕ್ಷದವರು ಘೋಷಣೆ ಕೂಗಿ, ಜೈಕಾರ ಹಾಕಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಇಮ್ರಾನ್ ಒಂದರ್ಥದಲ್ಲಿ ಕಾಶ್ಮೀರ ವಿಚಾರದಲ್ಲಿ ನಮ್ಮೊಂದಿಗೆ ಯಾರೂ ಇಲ್ಲ ಎಂಬುದನ್ನು ಒಪ್ಪಿಕೊಂಡರು. ನಮ್ಮೊಂದಿಗೆ ಯಾರೂ ನಿಲ್ಲದಿದ್ದರೂ ನಾವಂತೂ ನಿಲ್ಲುತ್ತೇವೆ ಎಂದು ಹೇಳಿದರು. ಕಾಶ್ಮೀರದ ಮಹಿಳೆಯರು, ಪುರುಷರು, ಮಕ್ಕಳು ಪಾಕಿಸ್ಥಾನೀಯರತ್ತವೇ ನೋಡುತ್ತಿದ್ದಾರೆ. ಅದಕ್ಕಾಗಿ ನಾವು ಅವರಿಗಾಗಿ ಇದ್ದೇವೆ. ನಾವು ಅಲ್ಲಾನನ್ನು ನೆಚ್ಚಿಸಲು ಈ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಜತೆಗೆ ಇಡೀ ದೇಶದ ಜನ ಪ್ರಾರ್ಥಿಸಿದ್ದರಿಂದಾಗಿ, ನನಗೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವನ್ನು ಸಮರ್ಥವಾಗಿ ಪ್ರಸ್ತಾವಿಸಲು ನೆರವಾಯಿತು ಎಂದು ಹೇಳಿದರು.
ಸೌದಿ ಅರಸ ಪ್ರಯಾಣಕ್ಕಾಗಿ ಉಚಿತವಾಗಿ ಕೊಟ್ಟ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಇಮ್ರಾನ್ ಪಾಕ್ ಗೆ ಆಗಮಿಸುವುದು ತಡವಾಗಿತ್ತು. ವಿಮಾನ ಸರಿಪಡಿಸುವುದು ವಿಳಂಬವಾದ್ದರಿಂದ ಅವರು ಸಾಮಾನ್ಯ ಪ್ರಯಾಣಿಕ ವಿಮಾನದಲ್ಲಿ ತವರಿಗೆ ಮರಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು