“ಪಾಕ್ನಂಥ ದೇಶಗಳಿಂದ ವಿಶ್ವಶಾಂತಿ ಸಾಧ್ಯವಿಲ್ಲ’
Team Udayavani, Sep 12, 2020, 6:05 AM IST
ಸಾಂದರ್ಭಿಕ ಚಿತ್ರ
ವಿಶ್ವಸಂಸ್ಥೆ: “ಪಾಕಿಸ್ಥಾನದಲ್ಲಿ ಹಿಂಸಾಚಾರದ ಸಂಸ್ಕೃತಿ ಇನ್ನೂ ಮುಂದುವರಿದಿದೆ. ಧಾರ್ಮಿಕ ಅಲ್ಪಸಂಖ್ಯಾಕರ ಮೇಲಿನ ದೌರ್ಜನ್ಯಗಳಂಥ ಘಟನೆ ಅಲ್ಲಿ ಪದೇ ಪದೆ ಜರಗುತ್ತಿವೆ. ಆ ದೇಶದಲ್ಲಿ ಮಾನವ ಹಕ್ಕುಗಳು ಪಾಲನೆ ಶೋಚನೀಯ ಸ್ಥಿತಿಯಲ್ಲಿದೆ. ಇಂಥ ದೇಶಗಳ ಸ್ಥಿತಿಯಿಂದ ವಿಶ್ವಶಾಂತಿಯನ್ನು ಸಾಧಿಸುವುದಾದರೂ ಹೇಗೆ?’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಪೌಲೋಮಿ ತ್ರಿಪಾಠಿ ಕಿಡಿಕಾರಿದ್ದಾರೆ.
ಗುರುವಾರ, “ಶಾಂತಿಯ ಸಂಸ್ಕೃತಿ’ ಎಂಬ ವಿಷಯದ ಆಧಾರದಲ್ಲಿ ವಿಶ್ವಸಂಸ್ಥೆಯ 74ನೇ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ ಪಾಕಿಸ್ಥಾನದ ರಾಯಭಾರಿ ಮುನೀರ್ ಅಕ್ರಮ್, ಭಾರತದಂಥ ರಾಷ್ಟ್ರ ಬಾಬ್ರಿ ಮಸೀದಿಯನ್ನು ಕೆಡವಿ ಅಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಇಂಥ ಸನ್ನಿವೇಶಗಳಿಂದ ಶಾಂತಿ ನಿರೀಕ್ಷಿಸಲು ಸಾಧ್ಯವೇ” ಎಂದು ಟೀಕಿಸಿದರು.
ಇದಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಿದ ತ್ರಿಪಾಠಿ ಮೇಲಿನಂತೆ ಗುಡುಗಿದರು. ಅಲ್ಲದೆ, “”ಉಗ್ರವಾದದಿಂದಾಗಿ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ, ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಉಗ್ರವಾದ ಪಿಡುಗನ್ನು ನಿವಾರಿಸಲು ಇಚ್ಛಾಶಕ್ತಿಯನ್ನು ರೂಪಿಸಬೇಕು” ಎಂದು ಅವರು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು