2019ರ ಚುನಾವಣೋತ್ತರ ಮೈತ್ರಿಯಿಂದಲೇ ಸರಕಾರ: ಯೆಚೂರಿ

ಹೊಸದಿಲ್ಲಿ : "2019ರ ಮಹಾ ಚುನಾವಣೆಗೆ ಮುನ್ನ ರಾಜಕೀಯ ನಾಯಕರು ಯಾವುದೇ ಬಗೆಯ ರಂಗವನ್ನು ರಚಿಸಲು ಸ್ವತಂತ್ರರಿದ್ದಾರೆ; ಆದರೆ ಲೋಕಸಭಾ ಚುನಾವಣೋತ್ತರ ಮೈತ್ರಿ ಮಾತ್ರವೇ ಸರಕಾರ ರಚಿಸುತ್ತದೆ' ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹೇಳಿದ್ದಾರೆ.
"ಯಾರಿಗೂ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ' ಎಂದು ಯೆಚೂರಿ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯನ್ನು ಸೋಲಿಸಲು "ಫೆಡರಲ್ ಫ್ರಂಟ್'' ರಚಿಸುವ ಬಗ್ಗೆ ನೀಡಿದ ಹೇಳಿಕೆಯನ್ನು ಉಲ್ಲೇಖೀಸಿದರು.
"ಮುಂದೇನಾಗುವುದೆಂದು ನಾವು ಕಾದು ನೋಡೋಣ. ಜನರಿಗೆ ಅವರದ್ದೇ ಆದ ಆಶೋತ್ತರಗಳು, ಲೆಕ್ಕಾಚಾರಗಳು ಇರುತ್ತವೆ; ಯಾರಿಗೂ ಅವರ ಪ್ರಜಾಸತ್ತಾತ್ಮಕ ಹಕ್ಕನ್ನು ನಿರಾಕರಿಸುವಂತಿಲ್ಲ; ನೆನಪಿಡಿ - ಭಾರತದಲ್ಲಿ ಚುನಾವಣೋತ್ತರದಲ್ಲಿ ರಚಿಸಲ್ಪಟ್ಟ ರಂಗಗಳೇ ಸರಕಾರ ರಚಿಸಿವೆ' ಎಂದು ಯೆಚೂರಿ ಹೇಳಿದರು.