ಕೃಷ್ಣಾಪುರ ಮಠದ ಹಿಂದಿನ ಹೆಸರು ನೇರಂಬಳ್ಳಿ ಮಠ


Team Udayavani, Jan 13, 2022, 7:50 AM IST

Pಕೃಷ್ಣಾಪುರ ಮಠದ ಹಿಂದಿನ ಹೆಸರು ನೇರಂಬಳ್ಳಿ ಮಠ

ಕುಂದಾಪುರ ಪೇಟೆಯಿಂದ 5 ಕಿ.ಮೀ., ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ವಕ್ಕೆ 3 ಕಿ.ಮೀ., ಅಂಕದಕಟ್ಟೆ ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ವಕ್ಕೆ 2 ಕಿ.ಮೀ. ದೂರದಲ್ಲಿ ನೇರಂಬಳ್ಳಿ ಮಠವಿದೆ. ಇಲ್ಲಿನ ಪ್ರಧಾನ ದೇವರು ಗೋಪಾಲಕೃಷ್ಣ ಮತ್ತು ಮುಖ್ಯಪ್ರಾಣ. ಮಧ್ವಾಚಾರ್ಯರ 8 ಮಂದಿ ಯತಿಶಿಷ್ಯರಲ್ಲಿ ಕೃಷ್ಣಾಪುರ ಮಠ ಪರಂಪರೆಯಲ್ಲಿ ಶ್ರೀಜನಾರ್ದನ ತೀರ್ಥರು ಮೊದಲಿನವರು. ಇವರ ಶಿಷ್ಯ ಶ್ರೀವತ್ಸಾಂಕತೀರ್ಥರು 2ನೆಯವರು. ತಪೋ ನಿಧಿಗಳಾದ ಇವರಿಗೆ ಸ್ವಪ್ನ ಸೂಚನೆಯಂತೆ ಸಿಕ್ಕಿದ ದೇವರ ವಿಗ್ರಹವೇ ಗೋಪಾಲಕೃಷ್ಣ. ಬಸ್ರೂರಿನ ರಾಜ ನೇರವಾಗಿ ಉಂಬಳಿ ಬಿಟ್ಟ ಕಾರಣ ನೇರಂಬಳ್ಳಿ ಎಂಬ ಹೆಸರು ಬಂದಿದೆ.

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮುಂದಿನ ಪರ್ಯಾಯ ಪೂಜೆಯನ್ನು ನಿರ್ವಹಿಸಲಿರುವ ಸರದಿ ಕೃಷ್ಣಾಪುರ ಮಠದ್ದು. ಈ ಮಠವನ್ನು ಹಿಂದೆ ಕರೆಯುತ್ತಿದ್ದುದು ನೇರಂಬಳ್ಳಿ ಮಠವೆಂದು. ಇದು ಇರುವುದು ಕುಂದಾಪುರ ತಾಲೂಕಿನಲ್ಲಿ. ಹಂಗಳೂರು ಗ್ರಾ.ಪಂ. ವ್ಯಾಪ್ತಿಯ ನೇರಂಬಳ್ಳಿ ಗ್ರಾಮದಲ್ಲಿ ಈ ಪ್ರಾಚೀನ ಮಠವಿದೆ.

ನೇರಂಬಳ್ಳಿ ಮಠದ ಪ್ರಾಚೀನತೆ ಯನ್ನು ಮಠದ ಆವರಣದಲ್ಲಿರುವ ಆರು ಪುರಾತನ ವೃಂದಾವನಗಳು ಸಾರುತ್ತಿವೆ. ಮಠದ 2ನೇ ಯತಿ ಶ್ರೀವತ್ಸಾಂಕತೀರ್ಥರ ವೃಂದಾವನ ಇಲ್ಲಿದೆ.

ಉಡುಪಿ ಪ್ರದೇಶದಲ್ಲಿ ಮಧ್ವಾಚಾರ್ಯರ ಪ್ರಶಿಷ್ಯರೊಬ್ಬರ ವೃಂದಾವನ ಸಿಗುವುದು ಇವರದು ಮಾತ್ರ.ಇವರ ಬಳಿಕ ಕ್ರಮವಾಗಿ ಶ್ರೀವಾಗೀಶತೀರ್ಥರು, ಶ್ರೀಲೋಕೇಶ ತೀರ್ಥರು, ಶ್ರೀಲೋಕನಾಥ ತೀರ್ಥರು, ಶ್ರೀಲೋಕಪೂಜ್ಯ ತೀರ್ಥರು, ಶ್ರೀವಿದ್ಯಾ ರಾಜತೀರ್ಥರ ವೃಂದಾವನಗಳು ಇಲ್ಲಿವೆ. ಮಧ್ವಾಚಾರ್ಯರ ನೇರ ಯಾವ ಶಿಷ್ಯರ ವೃಂದಾವನಗಳೂ ನಮಗೆ ಸಿಗುವುದಿಲ್ಲ.

ಪ್ರಾಯಃ ಆ ಕಾಲದಲ್ಲಿ ನದಿಯಲ್ಲಿ ವಿಸರ್ಜಿಸುತ್ತಿದ್ದರೆಂಬ ಮಾತಿದೆ. 2ನೆಯವರಿಂದ ಹಿಡಿದು ಅನಂತರ 7 ಯತಿಗಳವರೆಗಿನ ವೃಂದಾವನಗಳು ಒಂದೇ ಕಡೆ ಕಾಣ ಸಿಗುವುದು ಇಲ್ಲಿ ಮಾತ್ರ. 8ನೆಯವರ ವೃಂದಾವನ ಶ್ರೀಕೃಷ್ಣಮಠದ ವೃಂದಾವನ ಸಮುಚ್ಚಯದಲ್ಲಿದೆ.

ಈಗ ಕೃಷ್ಣಾಪುರ ಮಠವೆಂದು ಕರೆಯುತ್ತಾರೆ. ಪ್ರಾಯಃ ಶ್ರೀವಾದಿರಾಜ ಸ್ವಾಮಿಗಳ ಅನಂತರ ಬೇರೆ ಬೇರೆ ಮಠಗಳು ಸಂಸ್ಥಾಪನೆಗಳಾಗಿ ಬೆಳೆದು ಬಂದವು. ಹೀಗೆ ಕೃಷ್ಣಾಪುರ ಮಠದ ಹೆಸರು ಚಾಲ್ತಿಗೆ ಬಂದಿರಬಹುದು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.