ಅಳಿಯಾ ಅಂದ್ರು ಹಾನ್ಗಲ್ ನಾಗೆ ಹಲ್ವಾ ಕೊಟ್ರಾ…
Team Udayavani, Nov 7, 2021, 9:19 AM IST
ಅಮಾಸೆ: ನಮ್ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ
ಅಮಾಸೆ: ಎಲ್ಗೋಗುಮಾ ಸಾ… ಬೈ ಎಲೆಕ್ಸನ್ ರಿಸಲ್ಟ್ ಇತ್ತಲ್ವೇ ಅದ್ಕೆ ವಸಿ ರೌಂಡ್ ಹಾಕ್ಕಂಡ್ ಬರೂಮಾ ಅಂತಾ ಒಂಟೋಗಿದ್ನಿ.
ಚೇರ್ಮನ್ರು: ಹಾನ್ಗಲ್ ಯಾಕ್ಲಾ ಕಮ್ಲ ಪಾಲ್ಟಿ ಬರ್ಲಿಲ್ಲಾ
ಅಮಾಸೆ: ಮೊದ್ಲು ಹಾನಗಲ್ ನಮ್ದು, ಸಿಂದ್ಗಿ ಅವರ್ಧು ಅಂತಾ ಕೈ ಪಾಲ್ಟಿ ಹೈಕ್ಳು ಹೇಳ್ತಿದ್ರು. ಅದ್ಕೆ ಬುದ್ವಂತ ಬಸಣ್ಣೋರು ಹಾನಗಲ್ ನಾಗೆ ಟೆಂಟ್ ಹಾಕ್ಕಂಡು ನಾನ್ ನಿಮ್ ಊರ್ ಅಳಿಯಾ ಕಾಣಿ. ವಸಿ ಹೆಲ್ಪ್ ಪ್ಲೀಸ್ ಅಂತೇಳಿ ನೈನ್ ಡೇಸ್ ಅಲ್ಲೇ ಜಾಂಡಾ ಊರಿದ್ರು. ಇನ್ಚಾರ್ಜ್ ಡಾಕ್ಟ್ರು ಸುಧಾಕರಣ್ಣೋರು ಜತ್ಗೆ ಸೇರ್ಕೊಡು ವಸಿ ಅರೇಂಜ್ಮೆಂಟ್ ಮಾಡಿದ್ರು. ಆದ್ರೂ ಸಿನೇರಿಯೋ ಚೇಂಜ್ ಆಗೋಯ್ತು
ಚೇರ್ಮನ್ರು: ಬಸ್ವರಾಜ್ ಬೊಮ್ಮಾಯ್ ಸಾಹೇಬ್ರು ರಿಕ್ವೆಸ್ಟ್ ಮಾಡಿದ್ರು ಕೈ ಕೊಟ್ರಾ
ಅಮಾಸೆ: ಅಂಗಂತಾ ಕೈ ಲೀಡ್ರುಗ್ಳು ಪುಂಗ್ತಾವ್ರೆ. ಆದ್ರೆ ಗ್ರೌಂಡ್ ರಿಯಾಲಿಟಿ ಬ್ಯಾರೇ ಐತಿ. ಕಮ್ಲ ಪಾಲ್ಟಿನೋರೇ ಹಾನ್ಗಲ್ ಸೋತೋಗ್ಲಿ ಅಂತಾ ಕೋರ್ ಕಂಡಿದ್ರಂತೆ.
ಚೇರ್ಮನ್ರು: ಅಂಗಾ ಇಸ್ಯಾ
ಅಮಾಸೆ: ಹೌದೇಳಿ, ನೆಕ್ಸ್ಟ್ ಕಿತಾನೂ ನಾನೇ ಸಿಎಂ ಅಂತಾ ಬಸಣ್ಣೋರು ಹೇಳ್ದೇಟ್ಗೆ ಕಮ್ಲ ಪಾಲ್ಟಿನಾಗೆ ಶೇಕ್ ಆಗೋಬುಟ್ಟು, ಈಗ್ಲೆ ಮಾಂಜಾ ಕೊಡ್ಬೇಕು ಅಂತಾ ಅಂಡರ್ವರ್ಕ್ ಮಾಡಿದ್ರಂತೆ. ಲಾಸ್ಟ್ ತ್ರೀ ಡೇಸ್ ಕಮ್ಲ ಪಾಲ್ಟಿ ಕವರ್ನಾಗೆ ಪಿಂಕ್ ಕಲರ್ ನೋಟ್ ತೂರ್ಸಿ ಫುಲ್ ಮೀಲ್ಸ್ ಕೊಟ್ರಾ ಹಾನ್ಗಲ್ ನಾಗೆ ಹಲ್ವಾ ಕೊಟ್ಬುಟ್ರು
ಚೇರ್ಮನ್ರು: ತೆನೆ ಪಾಲ್ಟಿ ಸಿಂದ್ಗಿ ನಮ್ಗೆ ಅಂದ್ರಲ್ಲಾ
ಅಮಾಸೆ: ದೊಡ್ಗೌಡ್ರು, ಕುಮಾರಣ್ಣೋರು ಫುಲ್ ಎಫರ್ಟ್ಸ್ ಹಾಕಿದ್ರು. ಆದ್ರೂ ಕಮ್ಲ ಪಾಲ್ಟಿ ಡಾಲರ್ ಎದ್ರು ಲಾಸ್ಟ್ ನಾಗೆ ಡಲ್ ಆಗೋದ್ರಂತೆ. ಎಲ್ರೂ ಕಡ್ಗೆ ಕೈ ಪಾಲ್ಟಿಗೆ ಮಾಂಜಾ ಕೊಡ್ತೀವಿ ಅಂತಾ ಹೋದ್ರು ಎಲ್ರೂ ಕಡ್ಗೆ ದಬ್ಟಾಕಂಡ್ರು
ಚೇರ್ಮನ್ರು: ಕುಮಾರಣ್ಣೋರು ಸಿಂದ್ಗಿಮ್ಯಾಗೆ ಬರೋಸಾ ಇಟ್ಕಂಡಿದ್ರು ಅಲ್ವಾ
ಅಮಾಸೆ: ಹೌದೇಳಿ, ಆದ್ರೂ ಸಿದ್ರಾಮಣ್ಣೋರು ತೆನೆ ಪಾಲ್ಟಿ ನಿಂತಿರೋದೆ ಕಮ್ಲ ಗೆಲ್ಸೋಕೆ ಅಂತಾ ಪಸರ್ ಕೊಟ್ ಬುಟ್ರಾ. ಜಮೀರಣ್ಣೋರು ಸಾಬ್ರ ಗಲ್ಲಿನಾಗೆ ನೈಟ್ ರೌಂಡ್ಸ್ ಹಾಕ್ಬುಟ್ರಾ.
ಚೇರ್ಮನ್ರು: ಅದೇನ್ಲಾ ಸಿಎಮ್ಮು ಇಬ್ರಾಹಿಂ ಅವ್ರು ಯೂ ಟ್ಯೂಬ್ನಾಗೆ ರಿಕ್ವೆಸ್ಟ್ ಮಾಡಿದ್ರು
ಅಮಾಸೆ: ಹೌದೇಳಿ, ಅವ್ರು ಮನ್ಯಾಗೇ ಕುಂತ್ಕಂಡು, ಸಲಾಂವಲೇಕುಂ… ಅಂತಾ ಹುಕುಂ ಕೊಟ್ ಬಿಟ್ರಾ. ಆಮ್ಯಾಕೆ ಕುಮಾರಣ್ಣೋರ್ಗೆ ಫೋನ್ ಮಾಡ್ಬುಟ್ಟು ಯೂ ಟ್ಯೂಬ್ ಫೇಸ್ಬುಕ್ನಾಗೆ ಸ್ಟೇಟ್ಮೆಂಟ್ ರಿಲೀಸ್ ಮಾಡೀವ್ನಿ. ಸಾಬ್ರು ಯಾಮಾರಕ್ಕಿಲ್ಲಾ ನೋಡ್ತಿರಿ ಅಂತಾ ಹೇಳಿದ್ರು. ಆದ್ರೂ ಓಟ್ ಗಿಟ್ಟಿಲ್ಲಾ
ಚೇರ್ಮನ್ರು: ಸಿವ್ಕುಮಾರ್ ಅವ್ರು ಫುಲ್ ಜೋಶ್ನಾಗವ್ರೆ ಏನ್ ಇಸ್ಯಾ
ಅಮಾಸೆ: ಸೋನಿಯಾ ಮೇಡಂನೋರು ಫೈಟ್ ಸೀರಿಯಸ್ಲೀ ಅಂತೇಳಿದ್ರಂತೆ. ಅದ್ಕೆ ಹಾನ್ಗಲ್ಲು-ಸಿಂದ್ಗಿನಾಗೆ ಟೆನ್ ಡೇಸ್ ಸೆಟ್ಲಾಗಿ ಫುಲ್ ಎಫರ್ಟ್ ಹಾಕಿದ್ರು. ಹಾನ್ಗಲ್ ವಿಕ್ಟ್ರಿ ಆದ್ಮ್ಯಾಕೆ ಸುರ್ಜೇವಾಲಾ ಸಾಹೇಬ್ರು ಗುಡ್ ಎಫರ್ಟ್ಸ್ ಸಿವ್ಕುಮಾರ್ ಅಂತೇಳಿ ಸಾಬಾಸ್ ಕೊಟ್ರಂತೆ. ಅದ್ಕೆ ಜೋಶ್ನಾಗವ್ರೆ.
ಚೇರ್ಮನ್ರು: ರಾಜಾಹುಲಿ ಅಂಡ್ ವಿಜಯೇಂದ್ರ ಬಾಹುಬಲಿ ಎಂಟ್ರಿ ವರ್ಕ್ ಔಟ್ ಆಗಿಲ್ವಾ
ಅಮಾಸೆ: ಅವ್ರು ಬರ್ದಿದ್ರೆ ಎಲ್ರೂ ಕಡ್ಗೆವಗೆ ಪ್ರೋಗ್ರಾಂ ಅಂತಾ ಇಂಟ್ಲಿಜೆನ್ಸು ರಿಪೋರ್ಟ್ ಕೊಟ್ರಂತೆ. ನಾನ್ ಸಿಎಂ ಆದ್ಮೇಕೆ ಫಸ್ಟ್ ಬೈ ಎಲೆಕ್ಸನ್ ಅಂಗೇನಾರಾ ಆದ್ರೆ ಚಿವನೇ ಚಂಬುಲಿಂಗಾ ಅಂತೇಳಿ ಬುದ್ವಂತ ಬಸಣ್ಣೋರು ರಿಕ್ವೆಸ್ಟ್ ಮಾಡ್ಕಂಡ್ರಂತೆ. ಅವ್ರ್ ಬರ್ದಿದ್ರೆ ಸಿಂದ್ಗಿನಾಗೂ ವಗೆ ಆಗ್ತಿತ್ತಂತೆ
ಚೇರ್ಮನ್ರು: ಅದೇನ್ಲಾ ಬಿಟ್ ಕಾಯಿನ್ನು ಯವಾರ
ಅಮಾಸೆ: ಅದೆಲ್ಲಾ ನಂಕೆಲ್ಲಾ ಗೊತ್ತಾಗಾಕಿಲ್ಲಾ ಬುಡಿ. ದೊಡ್ಡೋರ್ ವ್ಯವಾರ. ಅಕೌಂಟ್ಗೆ ಮನಿ ಟ್ರಾನ್ಸ್ಫರ್ ಆಗೈತಂತೆ. ಡೆಲ್ಲಿಗಂಟಾ ರಿಪೋರ್ಟ್ ಹೋಗೈತಂತೆ. ಕುತ್ಗೇಕ್ ಬತ್ತದಂತೆ.
ಚೇರ್ಮನ್ರು: ಯಾರವ್ರೆಲಾ ಅದ್ರಾಗೆ
ಅಮಾಸೆ: ಹೇಳಂಗಿಲ್ಲಾ ಬುಡಂಗಿಲ್ಲಾ. ಎಕ್ಸ್, ಪ್ರಸೆಂಟ್ ಅಂತೆಲ್ಲಾ ಹೇಳ್ತಾವ್ರೆ. ನೋಡುಮಾ ಏನ್ ಆಯ್ತದೋ. ನನ್ ಹೆಂಡ್ರು ಬಂಗ್ಡೆ ಮೀನ್ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ…..
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ನೇಪಾಳ ಮೇಯರ್ ಪುತ್ರಿ, ಓಶೋ ಅನುಯಾಯಿ ಗೋವಾದಲ್ಲಿ ನಾಪತ್ತೆ
Sikkim Poll:ಸಿಎಂ ತಮಾಂಗ್ 2 ಕ್ಷೇತ್ರಗಳಲ್ಲಿ ಸ್ಪರ್ಧೆ,ಪತ್ನಿ ಮಾಜಿ ಸಿಎಂ ವಿರುದ್ಧ ಕಣಕ್ಕೆ
BJP: ಇದು ಪೂರ್ವ ಜನ್ಮದ ಪುಣ್ಯ: ಬಿಜೆಪಿ ಸೇರ್ಪಡೆಯಾದ ಜನಾರ್ದನ ರೆಡ್ಡಿ ಮಾತು
BJP ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ: ಜಗದೀಶ ಶೆಟ್ಟರ್ ಹರ್ಷ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!