ಅನಿಷ್ಟಗಳ ನಿರ್ಮೂಲನೆ, ಸರ್ವಾಭೀಷ್ಟಗಳ ಆವಾಹನೆ; ದೀಪಾವಳಿ ಹಬ್ಬದ ಆಶಯ
ಮರುದಿವಸದ ಅಮಾವಾಸ್ಯೆ ಅದು ಲಕ್ಷ್ಮೀ ದೇವಿಯ ಪೂರ್ಣ ಸಾನಿಧ್ಯಭೂಯಿಷ್ಠವಾದುದು.
Team Udayavani
- ವಿ| ಪಂಜ ಭಾಸ್ಕರ ಭಟ್
ರೈತಾಪಿ ಜನರೂ ಸಾಮಾನ್ಯವಾಗಿ ನವರಾತ್ರಿಯಿಂದ ಆರಂಭಿಸಿ ದೇವರಿಗೆ ನಡೆಸುವ ಪೂಜಾದಿ ಗಳಲ್ಲಿ ಅವಲಕ್ಕಿಯನ್ನು ಉಪಯೋಗಿಸಿದರೆ ವಿಜಯ ದಶಮಿಯ ಅನಂತರ ಅವಲಕ್ಕಿಯ ಉಪಯೋಗ ವನ್ನು ನಿಲ್ಲಿಸಿಬಿಡುತ್ತಾರೆ. ಅನಂತರ ಅವಲಕ್ಕಿ ಯನ್ನು ಉಪಯೋಗಿಸಿವುದು ನರಕ ಚತುರ್ದಶಿಯಂದು ದೇವರ ಸಮರ್ಪ ಣೆಗೆಂದು ಸಿದ್ಧಪಡಿಸುವ ಪಂಚ ಕಜ್ಜಾಯದ ಮೂಲಕವೇ. ಆ ದಿವಸ ಹೊಸ ಭತ್ತದಿಂದ ಸಿದ್ಧಪಡಿಸಿದ ಪಂಚಕಜ್ಜಾಯವನ್ನು ದೇವರಿಗೆ ಸಮರ್ಪಿಸಿ ಅನಂತರ ಹೊಸತಾದ ಅವಲಕ್ಕಿಯನ್ನು ಉಪಯೋಗಿಸುವ ಪದ್ಧತಿ ತುಳುನಾಡಿನಲ್ಲಿದೆ. ನರಕ ಚತುರ್ದಶಿಯ ಮರುದಿವಸ ಅಥವಾ ರಾತ್ರಿ ಅಮಾವಾಸ್ಯೆ ತಿಥಿ ಯಾವತ್ತು ವ್ಯಾಪ್ತತೆಯನ್ನು ಹೊಂದುತ್ತದೋ ಅದೇ ದಿವಸ ಊರ ದೇವರಿಗೆ ದೀಪಗಳನ್ನಿಟ್ಟು ರಂಗಪೂಜಾದಿಗಳನ್ನು ನಡೆಸಿ ಊರವರೆಲ್ಲ ಗ್ರಾಮ ದೇವರಿಗೆ ದೀಪಾವಳಿಯ ಹಬ್ಬವನ್ನು ಸಮರ್ಪಿಸಿದ ಅನಂತರ ತಮ್ಮ ಮನೆಗಳಲ್ಲಿ ಹಬ್ಬದ ಸಿದ್ಧತೆಗೆ ತೊಡಗುತ್ತಾರೆ...