ಅಂದು ಶಿವಮೊಗ್ಗ ಪ್ರಾಂತ್ಯದಲ್ಲಿ ಶ್ರೀಮಂತರು, ಬ್ರಿಟಿಷರಿಗೆ ದುಸ್ವಪ್ನವಾಗಿದ್ದ ರಾಬಿನ್ ಹುಡ್ ಕನ್ನೇಶ್ವರ ರಾಮ!
ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನೇಶ್ವರ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ
ನಾಗೇಂದ್ರ ತ್ರಾಸಿ
ಶಿವಮೊಗ್ಗ ಪ್ರಾಂತ್ಯದಲ್ಲಿದ್ದ ಕನ್ನೇಶ್ವರ ರಾಮ ದರೋಡೆಕೋರನಾಗಿ ಲೂಟಿಗೈಯುತ್ತಿದ್ದ. ಈತನ ಬೆಂಬಲಿಗರು ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗತೊಡಗಿದ್ದರು.ಈ ವೇಳೆ ಸತ್ಯಾಗ್ರಹದಲ್ಲಿ ಪಾಲ್ಗೊಂಡವರನ್ನು ಕನ್ನೇಶ್ವರ ರಾಮ ಜೈಲಿಗೆ ಕರೆದೊಯ್ಯುವುದನ್ನು ತಡೆಯಲು ಅವರನ್ನು ರಕ್ಷಿಸುತ್ತಿದ್ದ. ಹೀಗೆ ಹೋರಾಟಗಾರರ ಸಂಪರ್ಕದಿಂದ ಕನ್ನೇಶ್ವರ ರಾಮನ ಸ್ವಭಾವದಲ್ಲಿ ಬದಲಾವಣೆಯಾಗಲು ಕಾರಣವಾಗುತ್ತದೆ. ತದನಂತರ ಕನ್ನೇಶ್ವರ ರಾಮ ಶ್ರೀಮಂತರನ್ನು ಲೂಟಿಗೈದು ಬಡವರಿಗೆ ಸಹಾಯ ಮಾಡುವ ರಾಬಿನ್ ಹುಡ್ ಆಗಿಬಿಟ್ಟಿದ್ದ!