ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಈಗ ಐಎಎಸ್ ಅಧಿಕಾರಿ
ಶುಭಂ ಗುಪ್ತಾ ಎದೆಗುಂದದ ಛಲಗಾರ. ಅಂದುಕೊಂಡಿದ್ದ ಕೆಲಸ ಮುಗಿಯೋವರೆಗೆ ವಿಶ್ರಮಿಸದ ಶ್ರಮಗಾರ.
ಗಣೇಶ್ ಹಿರೇಮಠ
ಸಾಧಿಸುವ ಛಲವೊಂದಿದ್ದರೆ ಸಾಕು ಎಂತಹ ಕಷ್ಟ-ಕಾರ್ಪಣ್ಯಗಳು ಎದುರಾದರೂ ಸಾಧನೆಯ ಶಿಖರವನ್ನೇರಬಹುದು. ಗುರಿ ತಲುಪಲು ಬಡತನ ಅಡ್ಡಿಯಾಗದು ಎನ್ನುವ ಮಾತು ಸಾಕಷ್ಟು ಸಾರಿ ಸಾಬೀತಾಗಿದೆ. ಈ ಮೇಲಿನ ಮಾತುಗಳಿಗೆ ಸಾಕ್ಷಿ ಎಂಬಂತೆ ಕಾಣುತ್ತಿದ್ದಾರೆ ನಮ್ಮ ಕಣ್ಮುಂದೆ ಇರುವ ಈ ಸಾಧಕ. ಹೌದು, ಈತ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದವ. ಚಪ್ಪಲಿ ಅಂಗಡಿಯಲ್ಲಿ ಬೆವರು ಸುರಿಸಿ ದುಡಿದವ, ಶಾಲೆಗಾಗಿ ದಿನನಿತ್ಯ ಹತ್ತಾರೂ ಕಿ.ಮೀ ಪಯಣಿಸಿದವ. ಈತನ ಪಾಲಿಗೆ ಬಡತನ ಎನ್ನುವುದು ಒಂದು ಸಮಸ್ಯೆಯೇ ಆಗಲಿಲ್ಲ. ಕಷ್ಟ ಪಟ್ಟು ಓದಿ ಕಿರಿಯ ವಯಸ್ಸಿನಲ್ಲಿಯೇ ಯುಪಿಎಸ್ಸಿ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡವ...