ಬೇಡಿದ್ದನ್ನು ನೀಡುವ ಕ್ಷಿಪ್ರ ಪ್ರಸಾದಿನಿ ಶ್ರೀಮಾತೆ
Team Udayavani
ಕಲಿಯುಗದಲ್ಲಿ ಆಶ್ವಿನ ಮಾಸದ ಶರದ್ ನವರಾತ್ರಿ ಶ್ರೇಷ್ಠ. ಶರದೀಯ ನವರಾತ್ರಿಯಲ್ಲಿ ದುರ್ಗೆಯು ಮಹಿಷಾಸುರನನ್ನು ವಧಿಸಿದಳು ಎಂಬ ಕಥೆ ಜನಜನಿತ. ಆದರೆ ವಿವಿಧ ಗ್ರಂಥಗಳು ಹೇಳುವಂತೆ, ದುರ್ಗೆಯು ಮಹಿಷನನ್ನು ವಿವಿಧ ರೂಪಗಳನ್ನು ಧರಿಸಿ ವಧಿಸಿದಳು. ರಂಭಾಕಲ್ಪದಂತೆ, ದುರ್ಗೆಯು ಹದಿನೆಂಟು ಕರಗಳುಳ್ಳ ಉಗ್ರಚಂಡಿ ರೂಪದಿಂದ ವಧಿಸಿದಳು. ನೀಲಲೋಹಿತ ಕಲ್ಪದನ್ವಯ ಹದಿನಾರು ಕೈಗಳ ಭದ್ರಕಾಳಿ ರೂಪಿಯಾದಳು.