ಜ್ಞಾನತೇಜೋ ಬಲಂ ಬಲಂ: ಗುಣಗ್ರಾಹಿ ಪಂಜೆ , ಮುಗ್ಧ ಮುದ್ದಣ, ನಿರ್ಲಿಪ್ತ ಪಾದೆಕಲ್ಲು
ಕಾಲೇಜಿನಲ್ಲಿ 60 ವರ್ಷಕ್ಕೆ ನಿವೃತ್ತಿ ಯಾಗುವುದಿದ್ದರೆ ವಿ.ವಿ.ಯಲ್ಲಿ ಅದು 62ಕ್ಕೇರುತ್ತಿತ್ತು.
Team Udayavani
1868ರಲ್ಲಿ ಆರಂಭಗೊಂಡ ಮಂಗಳೂರಿನ ಸರಕಾರಿ ಪ್ರಾಂತೀಯ ಶಾಲೆಯಲ್ಲಿ (ಪ್ರಾವಿನ್ಶಿಯಲ್ ಸ್ಕೂಲ್) 1895ರ ಜುಲೈಯಲ್ಲಿ ಕನ್ನಡ ಪಂಡಿತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಗುಜರಾಯಿಸಿದವರು ಶಿಶು ಸಾಹಿತಿ ಪಂಜೆ ಮಂಗೇಶರಾವ್ (1874 -1937) ಮತ್ತು ಕವಿ ನಂದಳಿಕೆ ಲಕ್ಷ್ಮೀನಾರಾಯಣಪ್ಪ (ಮುದ್ದಣ) (187 0 - 1901) ಮಾತ್ರ. 1889ರಿಂದ ಮೂರು ವರ್ಷ ಉಡುಪಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾಗ ಮುದ್ದಣರಿಗೆ ಸಿಗುತ್ತಿದ್ದುದು ತಿಂಗಳಿಗೆ 10 ರೂ. ಹೊಸ ಹುದ್ದೆಗೆ ಇದ್ದದ್ದು 20 ರೂ. ಆಗ ಬಹುತೇಕ ವಿದ್ಯಾಲಯಗಳ ಮುಖ್ಯಸ್ಥರಾಗಿ ಇಂಗ್ಲೆಂಡಿನಿಂದ ಬರುತ್ತಿದ್ದರು...