ಕಾಶ್ಮೀರ ಕಣಿವೆ ಕಥನ; ಶಾಂತಿಯುತ ಬದುಕಿನ ಕನಸು ಕೊನರಿರುವುದೇ ದೊಡ್ಡ ಬದಲಾವಣೆ
ಲಡಾಖ್ ಅನ್ನೂ ಪ್ರತ್ಯೇಕಗೊಳಿಸಿ ಕೇಂದ್ರಾಡಳಿತ ಪ್ರದೇಶವಾಗಿಸಿತು.
Team Udayavani
-ಅರವಿಂದ ನಾವಡ
ಗೃಹ ಇಲಾಖೆಯ ಅಂಕಿ ಆಂಶಗಳ ಪ್ರಕಾರ, 2019ರಿಂದ ಸೇನಾ ಸಿಬಂದಿಯ ಗಸ್ತು, ಭಯೋತ್ಪಾದಕರ ಪತ್ತೆ ಮತ್ತು ಹತ್ಯೆಗೆ ಅನುಸರಿಸಿದ ಕಾರ್ಯತಂತ್ರಗಳಿಂದ ಭಯೋತ್ಪಾದನೆ ಚಟುವಟಿಕೆಯ ತೀವ್ರತೆ ಕಡಿಮೆಯಾಗಿದೆ. ವಿಶೇಷವಾಗಿ ಪೊಲೀಸರು, ಸೇನೆಯತ್ತ ಕಲ್ಲೆಸೆಯುವ ಪ್ರಕರಣಗಳಂತೂ ಶೇ. 85ರಷ್ಟು ಕಡಿಮೆಯಾಗಿದೆ. ಕಲ್ಲೆಸೆತ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಪಾಸ್ಪೋರ್ಟ್ ನಿರಾಕರಿಸುವ ನಿಯಮವನ್ನೂ ಜಾರಿಗೆ ತರಲಾಯಿತು. ಕಲ್ಲೆಸತದಲ್ಲಿ ಭಾಗಿಯಾಗುವವರನ್ನು, ಅದಕ್ಕೆ ಪ್ರಚೋದಿಸುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ. ಇವೆಲ್ಲದರ ಜತೆಗೆ ಕೋವಿಡ್ ಸಹ ನೆರವು ನೀಡಿದೆ...