ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ಸಂಪೆಕಟ್ಟೆಯ ಮಾದರಿ ಕೃಷಿಕ ಗಣಪತಿ ಕೆ.ಎನ್
ಹಲವಾರು ಕೃಷಿ ಉತ್ಪನ್ನಗಳನ್ನು ಬೆಳೆಸುತ್ತಾ ತಮ್ಮ ಸಾವಯವ ಕೃಷಿಯಲ್ಲಿ ಯಶಸ್ಸನ್ನೂ ಕಂಡುಕೊಂಡಿದ್ದಾರೆ.
ಆದರ್ಶ ಕೊಡಚಾದ್ರಿ
ಸಾವಯವ ಕೃಷಿಯನ್ನು ಹೆಚ್ಚಿಸುವುದರ ಜೊತೆಗೆ ರಾಸಾಯನಿಕ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಸಂಸ್ಥೆ ಇದಾಗಿದೆ. ಶೋಧವು ಸಾವಯವ ಕೃಷಿಯನ್ನು ಕುರಿತು ಜಾಗೃತಿ ಮೂಡಿಸಿ ಕೃಷಿಕರಿಗೆ ಉತ್ತೇಜನ ನೀಡುವ ಮತ್ತು ಕೃಷಿಗೆ ಅಗತ್ಯವಿರುವ ಉಪಕರಣಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಪ್ರತಿಯೊಬ್ಬ ಕೃಷಿಕನೂ ,ಸಾವಯವ ಕೃಷಿಯತ್ತ ವಾಲಲು ಸಹಾಯ ಮಾಡುತ್ತದೆ .ಈ ಸಂಘವು ಕೆಲ ಸದಸ್ಯರ ಗುಂಪನ್ನು ಹೊಂದಿದ್ದು, ರೈತರಿಗೆ ಅವಶ್ಯಕ ಸೌಲಭ್ಯಗಳನ್ನು ನೀಡುವ ಮೂಲಕ ರೈತರು ಬೆಳೆದ ಬೆಳೆಗಳನ್ನು ಕಾಲಕಾಲಕ್ಕೆ ಪರೀಕ್ಷಿಸಿ ನಂತರ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಕೊಂಡುಕೊಳ್ಳುವ ವ್ಯವಸ್ಥೆ ಹೊಂದಿದೆ...