ಕುತೂಹಲಕಾರಿ ಇತಿಹಾಸ: ದ್ವೀಪ ರಾಷ್ಟ್ರದ ಕ್ರಿಕೆಟ್ ಹಡಗು ಹೀಗೆ ಯಾಕೆ ಮುಳುಗುತ್ತಿದೆ?
ಆ ದೇಶದ ಅಭಿಮಾನಿಗಳೇ ತಮ್ಮ ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂಡೆ ಉಗುಳುತ್ತಿದ್ದಾರೆ.
ಕೀರ್ತನ್ ಶೆಟ್ಟಿ ಬೋಳ
ಶ್ರೀಲಂಕಾ ಎಂಬ ಪುಟ್ಟ ರಾಷ್ಟ್ರದ ಕ್ರಿಕೆಟ್ ಇತಿಹಾಸವೇ ಅತ್ಯಂತ ಕುತೂಹಲಕಾರಿ. ಹಲವು ಎಡರು ತೊಡರುಗಳ ಮಧ್ಯೆ ಎದ್ದು ನಿಂತು ವಿಶ್ವಕಪ್ ಜಯಸಿದ ತಂಡ, ಅಸೂಯೆ, ಬಲಿಷ್ಠರ ದಮನಕಾರಿ ನೀತಿಗಳ ವಿರುದ್ದ ನಿಂತ ಕ್ರಾಂತಿಕಾರಿ ಅರ್ಜುನ ರಣತುಂಗರಂತಹ ನಾಯಕರಿದ್ದ ತಂಡ, ಸಿಂಹಳೀಯರ ಮಧ್ಯೆ ತಮಿಳು ಹುಡುಗನೊಬ್ಬ 800 ವಿಕೆಟ್ ಪಡೆದಂತಹ ತಂಡ, ಸತತ ವಿಶ್ವಕಪ್ ಗಳಲ್ಲಿ ಫೈನಲ್ ತಲುಪಿದ ತಂಡ, ಏಕದಿನ ಕ್ರಿಕೆಟ್ ನ ಪವರ್ ಪ್ಲೇಗೆ ಹೊಸ ಭಾಷ್ಯ ಬರೆದ ತಂಡ ಇದೇ ದ್ವೀಪ ರಾಷ್ಟ್ರ ಶ್ರೀಲಂಕಾ....