ಮಾತಿಗಿಂತ ಮೌನವೇ ಲೇಸು. ಆಕಸ್ಮಿಕ ಧನಾನುಕೂಲ: ಹೇಗಿದೆ ನಿಮ್ಮ ಇಂದಿನ ಗ್ರಹಬಲ ?


Team Udayavani, Feb 17, 2021, 7:33 AM IST

astrology

ಮೇಷ: ನೂತನ ಕಾರ್ಯಾರಂಭ, ವ್ಯಾಪಾರ, ವ್ಯವಹಾರಗಳ ಚಿಂತನೆ ಕಾರ್ಯಗತವಾಗುತ್ತದೆ. ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆಯಿಂದ ಸುಖ, ಶಾಂತಿ ಅನುಭವಕ್ಕೆ ಬರುವುದು. ಸಹನೆಯ ಅಗತ್ಯವಿದೆ.

ವೃಷಭ: ವಿದ್ಯಾರ್ಥಿಗಳ ಮನೋಕಾಮನೆ ಪೂರ್ಣಗೊಂಡಾವು. ಆರ್ಥಿಕವಾಗಿ ಎಷ್ಟೇ ಖರ್ಚು-ವೆಚ್ಚಗಳಿದ್ದರೂ ನಿರಂತರ ಧನಾಗಮನದಿಂದ ತೊಂದರೆ ಕಂಡುಬಾರದು. ಮನಸ್ಸಲ್ಲಿ ಎಣಿಸಿದ ಕಾರ್ಯಗಳೆಲ್ಲಾ ನೆರವೇರಲಿದೆ.

ಮಿಥುನ: ಅನಿರೀಕ್ಷಿತವಾಗಿ ಕಾರ್ಯಸಾಧನೆಯಾಗಿ ನಿಮಗೆ ಅಚ್ಚರಿ ತಂದೀತು. ಅವಿವಾಹಿತರ ವೈವಾಹಿಕ ಸಂಘಟನೆಗೆ ಪೂರಕವಾದ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲವು ಕಂಡುಬರುವುದು.

ಕರ್ಕ: ಕೊಟ್ಟ ಸಾಲ ಮರಳುವಿಕೆಯಾಗಿ ವೃತ್ತಿರಂಗದ ಮಜಲನ್ನು ಬದಲಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ತೋರಿಬಂದು ಸಮಾಧಾನವಾದೀತು. ಆರ್ಥಿಕವಾಗಿ ಹಲವು ಖರ್ಚುವೆಚ್ಚಗಳು ತೋರಿಬಂದಾವು.

ಸಿಂಹ: ಗೃಹದಲ್ಲಿ ಬಂಧುಗಳ ಆಗಮನ ಹಾಗೂ ಕುಟುಂಬದಲ್ಲಿ ದೇವತಾ ಕಾರ್ಯಗಳು ನಡೆದು ಸಂತಸವಾದೀತು. ನಿರುದ್ಯೋಗಿಗಳಿಗೆ ಈಗ ಉದ್ಯೋಗವು ದೊರಕಲಿದೆ. ಸ್ವಲ್ಪ ಪ್ರಯತ್ನ ಮಾಡಿರಿ. ಮುಂದಿನ ಯೋಜನೆಗೆ ನಾಂದಿ.

ಕನ್ಯಾ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆಗೆ ಪ್ರಶಂಸೆ ಸಲ್ಲಲಿದೆ. ಆದರೂ ಸಹೋದ್ಯೋಗಿಗಳೊಂದಿಗೆ ತುಂಬಾ ಜಾಗ್ರತೆಯಿಂದ ವ್ಯವಹರಿಸಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕೂಡಿಬಂದು ಶುಭಕಾರ್ಯ ನಡೆಯಲಿದೆ.

ತುಲಾ: ಇಂದಿನ ಸ್ಥಿತಿಯಲ್ಲಿ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅವಶ್ಯಕತೆ ಇದೆ. ಸಂಚಾರ ಆರೋಗ್ಯ ಜಾಗ್ರತೆ ಮಾಡುವುದು. ಹಿತೈಷಿ, ಹಿರಿಯರ ಮಾರ್ಗದರ್ಶನವನ್ನು ಪಾಲಿಸಿರಿ. ಸದುಪಯೋಗ ನಿಮ್ಮದಾಗಿರಲಿ.

ವೃಶ್ಚಿಕ: ಶೈಕ್ಷಣಿಕ ಕ್ಷೇತ್ರ ಹಾಗೂ ನ್ಯಾಯಾಲಯದ ವೃತ್ತಿಯವರಿಗೆ ವಿಶೇಷ ಲಾಭದಾಯಕ ಆದಾಯವಿರುತ್ತದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ ಉತ್ತಮ ಆದಾಯ ಕಂಡುಬರುವುದು. ವೃತ್ತಿರಂಗದಲ್ಲಿ ಸುಧಾರಿಸಿಕೊಂಡು ಹೋಗಿರಿ.

ಧನು: ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ಆಗಾಗ ಕಾರ್ಯವೈಫ‌ಲ್ಯದ ಅನುಭವವಾದರೂ ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ನೌಕರ ವರ್ಗಕ್ಕೆ ಹಣದ ಮುಗ್ಗಟ್ಟು ಕಂಡುಬಂದೀತು. ಅತೀ ಜಾಗ್ರತೆ ಮಾಡಿರಿ.

ಮಕರ: ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ದೊರಕಲಿದೆ. ಅನಾವಶ್ಯಕವಾಗಿ ಖರ್ಚು-ವೆಚ್ಚಗಳೇ ಅಧಿಕವಾಗಲಿದೆ. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾದೆ ತಪ್ಪದು. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ.

ಕುಂಭ: ಪ್ರಯತ್ನಬಲವಿದ್ದರೂ ವಿಘ್ನದಿಂದಲೇ ಯಶಸ್ಸು ದೊರಕಲಿದೆ. ಆದಾಯದಲ್ಲಿ ಏರುಪೇರು

ಕಂಡುಬಂದೀತು. ಹೊಟೇಲ್‌ ಉದ್ಯಮದವರಿಗೆ ಸ್ವಲ್ಪ ಆದಾಯವು ಹೆಚ್ಚು ದೊರಕಲಿದೆ. ದುಡಿಮೆ ಕಠಿಣವಾದೀತು.

ಮೀನ: ಧನಾಗಮನಕ್ಕೆ ವಿಫ‌ುಲ ಅವಕಾಶಗಳಿದ್ದರೂ ನಿಮ್ಮ ಕಠಿಣ ಪ್ರಯತ್ನಬಲ, ಆತ್ಮವಿಶ್ವಾಸ ಕೂಡ ಫ‌ಲ ನೀಡಲಿದೆ. ಗೃಹದಲ್ಲಿ ಮಂಗಲಕಾರ್ಯದ ಮಾತುಕತೆ ಫ‌ಲ ನೀಡಲಿದೆ. ಮಾತಿಗಿಂತ ಮೌನವೇ ಲೇಸು.

ಟಾಪ್ ನ್ಯೂಸ್

Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.