ಮಾತಿಗಿಂತ ಮೌನವೇ ಲೇಸು. ಆಕಸ್ಮಿಕ ಧನಾನುಕೂಲ: ಹೇಗಿದೆ ನಿಮ್ಮ ಇಂದಿನ ಗ್ರಹಬಲ ?
Team Udayavani, Feb 17, 2021, 7:33 AM IST
ಮೇಷ: ನೂತನ ಕಾರ್ಯಾರಂಭ, ವ್ಯಾಪಾರ, ವ್ಯವಹಾರಗಳ ಚಿಂತನೆ ಕಾರ್ಯಗತವಾಗುತ್ತದೆ. ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆಯಿಂದ ಸುಖ, ಶಾಂತಿ ಅನುಭವಕ್ಕೆ ಬರುವುದು. ಸಹನೆಯ ಅಗತ್ಯವಿದೆ.
ವೃಷಭ: ವಿದ್ಯಾರ್ಥಿಗಳ ಮನೋಕಾಮನೆ ಪೂರ್ಣಗೊಂಡಾವು. ಆರ್ಥಿಕವಾಗಿ ಎಷ್ಟೇ ಖರ್ಚು-ವೆಚ್ಚಗಳಿದ್ದರೂ ನಿರಂತರ ಧನಾಗಮನದಿಂದ ತೊಂದರೆ ಕಂಡುಬಾರದು. ಮನಸ್ಸಲ್ಲಿ ಎಣಿಸಿದ ಕಾರ್ಯಗಳೆಲ್ಲಾ ನೆರವೇರಲಿದೆ.
ಮಿಥುನ: ಅನಿರೀಕ್ಷಿತವಾಗಿ ಕಾರ್ಯಸಾಧನೆಯಾಗಿ ನಿಮಗೆ ಅಚ್ಚರಿ ತಂದೀತು. ಅವಿವಾಹಿತರ ವೈವಾಹಿಕ ಸಂಘಟನೆಗೆ ಪೂರಕವಾದ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲವು ಕಂಡುಬರುವುದು.
ಕರ್ಕ: ಕೊಟ್ಟ ಸಾಲ ಮರಳುವಿಕೆಯಾಗಿ ವೃತ್ತಿರಂಗದ ಮಜಲನ್ನು ಬದಲಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ತೋರಿಬಂದು ಸಮಾಧಾನವಾದೀತು. ಆರ್ಥಿಕವಾಗಿ ಹಲವು ಖರ್ಚುವೆಚ್ಚಗಳು ತೋರಿಬಂದಾವು.
ಸಿಂಹ: ಗೃಹದಲ್ಲಿ ಬಂಧುಗಳ ಆಗಮನ ಹಾಗೂ ಕುಟುಂಬದಲ್ಲಿ ದೇವತಾ ಕಾರ್ಯಗಳು ನಡೆದು ಸಂತಸವಾದೀತು. ನಿರುದ್ಯೋಗಿಗಳಿಗೆ ಈಗ ಉದ್ಯೋಗವು ದೊರಕಲಿದೆ. ಸ್ವಲ್ಪ ಪ್ರಯತ್ನ ಮಾಡಿರಿ. ಮುಂದಿನ ಯೋಜನೆಗೆ ನಾಂದಿ.
ಕನ್ಯಾ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆಗೆ ಪ್ರಶಂಸೆ ಸಲ್ಲಲಿದೆ. ಆದರೂ ಸಹೋದ್ಯೋಗಿಗಳೊಂದಿಗೆ ತುಂಬಾ ಜಾಗ್ರತೆಯಿಂದ ವ್ಯವಹರಿಸಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕೂಡಿಬಂದು ಶುಭಕಾರ್ಯ ನಡೆಯಲಿದೆ.
ತುಲಾ: ಇಂದಿನ ಸ್ಥಿತಿಯಲ್ಲಿ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅವಶ್ಯಕತೆ ಇದೆ. ಸಂಚಾರ ಆರೋಗ್ಯ ಜಾಗ್ರತೆ ಮಾಡುವುದು. ಹಿತೈಷಿ, ಹಿರಿಯರ ಮಾರ್ಗದರ್ಶನವನ್ನು ಪಾಲಿಸಿರಿ. ಸದುಪಯೋಗ ನಿಮ್ಮದಾಗಿರಲಿ.
ವೃಶ್ಚಿಕ: ಶೈಕ್ಷಣಿಕ ಕ್ಷೇತ್ರ ಹಾಗೂ ನ್ಯಾಯಾಲಯದ ವೃತ್ತಿಯವರಿಗೆ ವಿಶೇಷ ಲಾಭದಾಯಕ ಆದಾಯವಿರುತ್ತದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ ಉತ್ತಮ ಆದಾಯ ಕಂಡುಬರುವುದು. ವೃತ್ತಿರಂಗದಲ್ಲಿ ಸುಧಾರಿಸಿಕೊಂಡು ಹೋಗಿರಿ.
ಧನು: ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ಆಗಾಗ ಕಾರ್ಯವೈಫಲ್ಯದ ಅನುಭವವಾದರೂ ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ನೌಕರ ವರ್ಗಕ್ಕೆ ಹಣದ ಮುಗ್ಗಟ್ಟು ಕಂಡುಬಂದೀತು. ಅತೀ ಜಾಗ್ರತೆ ಮಾಡಿರಿ.
ಮಕರ: ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ದೊರಕಲಿದೆ. ಅನಾವಶ್ಯಕವಾಗಿ ಖರ್ಚು-ವೆಚ್ಚಗಳೇ ಅಧಿಕವಾಗಲಿದೆ. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾದೆ ತಪ್ಪದು. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ.
ಕುಂಭ: ಪ್ರಯತ್ನಬಲವಿದ್ದರೂ ವಿಘ್ನದಿಂದಲೇ ಯಶಸ್ಸು ದೊರಕಲಿದೆ. ಆದಾಯದಲ್ಲಿ ಏರುಪೇರು
ಕಂಡುಬಂದೀತು. ಹೊಟೇಲ್ ಉದ್ಯಮದವರಿಗೆ ಸ್ವಲ್ಪ ಆದಾಯವು ಹೆಚ್ಚು ದೊರಕಲಿದೆ. ದುಡಿಮೆ ಕಠಿಣವಾದೀತು.
ಮೀನ: ಧನಾಗಮನಕ್ಕೆ ವಿಫುಲ ಅವಕಾಶಗಳಿದ್ದರೂ ನಿಮ್ಮ ಕಠಿಣ ಪ್ರಯತ್ನಬಲ, ಆತ್ಮವಿಶ್ವಾಸ ಕೂಡ ಫಲ ನೀಡಲಿದೆ. ಗೃಹದಲ್ಲಿ ಮಂಗಲಕಾರ್ಯದ ಮಾತುಕತೆ ಫಲ ನೀಡಲಿದೆ. ಮಾತಿಗಿಂತ ಮೌನವೇ ಲೇಸು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
MUST WATCH
ಹೊಸ ಸೇರ್ಪಡೆ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ