ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು!
Team Udayavani, Jan 17, 2021, 8:13 AM IST
17-01-2021
ಮೇಷ: ಕ್ಲಿಷ್ಟಕರ ದಿನವು ನಿಮ್ಮ ಮುಂದಿದೆ. ಯಾವುದಕ್ಕೂ ಸಹನೆ ಕಳೆದುಕೊಳ್ಳದಿರಿ. ಇತರರಿಗೆ ಬುದ್ಧಿವಾದ ಹೇಳಲು ಹೋಗುವುದು ಸರಿಯಲ್ಲ. ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ನಿಮಗೆದುರಾಗಲಿದೆ.
ವೃಷಭ: ಗೆಳಯರಿಂದ ಉತ್ತಮ ಸಲಹೆಗಳು ಕಂಡುಬಂದಾವು. ಅವನ್ನು ಕಡೆಗಣಿಸದಿರಿ. ಸ್ವೀಕರಿಸುವುದು ಬಿಡುವುದು ನಿಮ್ಮಿಚ್ಛೆ. ವೃತ್ತಿಯಲ್ಲಿ ಯಶಸ್ಸು ಅಭಿವೃದ್ಧಿ ಕಂಡು ಬರುವುದು ಯಶಸ್ಸಿದೆ.
ಮಿಥುನ: ಕೌಟುಂಬಿಕವಾಗಿ ಅಸಹನೆ ತೋರಿಬಂದೀತು. ಗೊಂದಲದ ಪರಿಸ್ಥಿತಿ ಮುಂದುವರಿಯಲು ಅವಕಾಶ ಕೊಡದಿರಿ. ಆರ್ಥಿಕವಾಗಿ ಸಂಕಷ್ಟಗಳು ಎದುರಾದರೂ ಅದನ್ನು ಚೆನ್ನಾಗಿ ನಿಭಾಯಿಸುವ ಶಕ್ತಿಯು ನಿಮ್ಮಲ್ಲಿದೆ.
ಕರ್ಕ: ಆಪ್ತೇಷ್ಟರೊಂದಿಗೆ ಆತ್ಮೀಯ ಸಮಯವನ್ನು ಕಳೆಯುವಿರಿ. ಸಂಬಂಧಗಳಲ್ಲಿ ಸುಧಾರಣೆಯು ತೋರಿ ಬರುವುದು. ಪರಸ್ಪರರಲ್ಲಿ ಸೌಹಾರ್ದ, ಪ್ರೀತಿ ವಿಶ್ವಾಸ ತಲೆದೋರಬಹುದು. ಆತ್ಮೀಯರೊಂದಿಗೆ ಭೇಟಿಯಿದೆ.
ಸಿಂಹ: ಬದಲಾವಣೆಗೆ ಹೊಂದಿಕೊಂಡು ಹೋಗಲು ಕಲಿಯಿರಿ. ಗೆಳೆಯನೊಬ್ಬನಿಂದ ಉಪಯುಕ್ತ ಸಲಹೆಗಳು ದೊರಕಬಹುದು. ಖರ್ಚುವೆಚ್ಚಗಳನ್ನು ನಿಯಂತ್ರಿಸುವುದು ಅತೀ ಮುಖ್ಯವಾಗಿದೆ. ದುರ್ಜನರಿಂದ ದೂರವಿರಿ.
ಕನ್ಯಾ: ನೀವು ನಂಬಿದ ವ್ಯಕ್ತಿಯೊಬ್ಬರ ನಿಜಬಣ್ಣ ತೋರುವುದು. ಅವರ ಕುಟಿಲತೆಯ ಅರಿವು ನಿಮಗಾಗಲಿದೆ. ಅವರೊಂದಿಗೆ ಸಂಘರ್ಷಕ್ಕೆ ಇಳಿಯದಿರಿ. ನಿಮ್ಮ ಮರ್ಯಾದೆಗೆ ಮೂರುಕಾಸು ಆದೀತು. ಜಾಗ್ರತೆ ಇರಲಿ.
ತುಲಾ: ಗೊಂದಲದ ಪರಿಸ್ಥಿತಿಯು ಏರ್ಪಟ್ಟಿತು. ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಂಡರೆ ಉತ್ತಮ. ಕಠಿಣ ನಿರ್ಧಾರ ಮಾಡಬೇಕಾದೀತು. ಆತುರತೆ ಬೇಡ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬಂದರೂ ಕಾಳಜಿ ಇರಲಿ.
ವೃಶ್ಚಿಕ: ಮಾನಸಿಕವಾಗಿ ಅಸ್ಥಿರತೆಯು ಕಾಡಲಿದೆ. ಪ್ರಮುಖ ನಿರ್ಧಾರವನ್ನು ದೃಢತೆಯಿಂದ ತೆಗೆದುಕೊಳ್ಳಿರಿ. ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು. ಕಾರ್ಯಾರ್ಥ ಪ್ರಯಾಣವು ಕೂಡಿಬರಲಿದೆ. ದೇಹಾಯಾಸವು ತೋರಿಬರುವುದು.
ಧನು: ಆರೋಗ್ಯದಲ್ಲಿ ಏರುಪೇರು ಹೇಗೋ ಹಾಗೇ ಆರ್ಥಿಕ ಏಳುಬೀಳುಗಳು ಕಂಡುಬರಬಹುದು. ಹಾಗೆಂದು ಚಿಂತೆ ಅನಾವಶ್ಯಕ. ಪತ್ನಿಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ತೋರಿಬಂದು ಸಮಾಧಾನವಾದೀತು. ಶುಭವಿದೆ.
ಮಕರ: ಅವಿಶ್ರಾಂತ ದುಡಿತದಿಂದ ದೇಹಾಯಾಸ ತೋರಿಬಂದರೂ ಸೂಕ್ತ ಪ್ರತಿಫಲ ದೊರಕಿದುದರಿಂದ ತುಂಬಾ ಸಮಾಧಾನವಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ತೋರಿಬರುವುದು. ಮಾರ್ಗದರ್ಶನ ಪಾಲಿಸಿರಿ.
ಕುಂಭ: ನಿಮ್ಮ ಮನೆಯ ವಿಷಯದಿಂದ ನೊಂದು ಬೇಸರವಾದೀತು. ಆದರೆ ಅದನ್ನು ದೃಢತೆ ಹಾಗೂ ವಿಶ್ವಾಸದಿಂದ ಎದುರಿಸುವ ಛಾತಿ ನಿಮ್ಮಲ್ಲಿದೆ. ಮನೆಯಲ್ಲಿ ನೆಂಟರಿಷ್ಠರ ಆಗಮನವು ಸಂತೋಷ ನೀಡಲಿದೆ.
ಮೀನ: ಭಾವುಕ ಸನ್ನಿವೇಶವು ಎದುರಾಗಲಿದೆ. ದೂರದರ್ಶಿತ್ವ ಕಳಕೊಳ್ಳದಿರಿ. ಸಹನೆಯ ಅಗತ್ಯವಿದೆ. ಮಾತುಮಾತಿಗೆ ಸಿಡುಕಿ ಭಾವೋದ್ವೇಗಕ್ಕೆ ಒಳಗಾಗದಂತೆ ಸಹನೆ ಕಾಯ್ದುಕೊಳ್ಳುವದು. ಆತ್ಮವಿಶ್ವಾಸ ಅಗತ್ಯವಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ
ನಿಮ್ಮ ಗ್ರಹಬಲ: ಈ ರಾಶಿಯವರಿಗೆ ವ್ಯಾಪಾರ ವ್ಯವಹಾರ ರಂಗದಲ್ಲಿ ಅದೃಷ್ಟದ ಆಸರೆ ಸದಾ ಇರುವುದು
ಈ ರಾಶಿಯವರಿಗಿಂದು ಯಾವುದೇ ಕಾರಣಕ್ಕೂ ಇತರರಿಗೆ ಬುದ್ಧಿ ಹೇಳಲು ಹೋಗದಿರಿ!
ಇಂದಿನ ಗ್ರಹಬಲ: ಈ ರಾಶಿಯವರಿಂದು ಕಂಡಕಂಡವರ ಮೈಮೇಲೆ ಬಿದ್ದು ಗೆಳೆತನದ ಚಟದಿಂದ ದೂರವಿರಿ!
ನಿಮ್ಮ ಗ್ರಹಬಲ: ನಿಮ್ಮಿಂದ ಅನಾವಶ್ಯಕ ಖರ್ಚು ಮಾಡಿಸುವ ಗೆಳೆಯರು ದೊರೆತಾರು..!
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ “ಸ್ವಯಂ-ಆರೈಕೆ”ಯ ಉಡುಗೊರೆ
ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ
ತೀರಲಿ ಜನರ ಸಂಕಷ್ಟ : ಇಂದು ಬಿಎಸ್ವೈ 8ನೇ ಬಜೆಟ್
ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್ಚೇಂಜರ್ ಉಪಗ್ರಹ ಉಡಾವಣೆ
ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು