ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಸಾಮಾಜಿಕವಾಗಿ ಜನಾನುರಾಗ ಲಭಿಸಲಿದೆ!
Team Udayavani, Jan 26, 2021, 8:31 AM IST
26-01-2021
ಮೇಷ: ವೃತ್ತಿರಂಗದಲ್ಲಿ ಅಭಿವೃದ್ಧಿದಾಯಕವಾದ ಬೆಳವಣಿಗೆಗಳು ಕಂಡುಬಂದರೂ ತುಸು ಬದಲಾವಣೆಗೆ ನೀವು ಸಿದ್ಧರಾಗಬೇಕಾದೀತು. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಸಮರ್ಪಣಾ ಭಾವ ಇರತಕ್ಕದ್ದು.
ವೃಷಭ: ಅವಿವಾಹಿತರು ಬಂದ ಸಂಬಂಧಗಳನ್ನು ಸದುಪಯೋಗಿಸಿಕೊಂಡಲ್ಲಿ ಮಾತ್ರ ವೈವಾಹಿಕ ಭಾಗ್ಯವು ಕೈಗೂಡಲಿದೆ. ವೃತ್ತಿರಂಗದಲ್ಲಿ ಹಿತಶತ್ರುಗಳ ಕಿರುಕುಳದಿಂದ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದು ಬೇಸರವಾದೀತು.
ಮಿಥುನ: ನಿಮ್ಮ ನಿರ್ಧಾರಗಳು ಅಚಲವಾಗಿರದೆ ಋಣಾತ್ಮಕ ಚಿಂತೆಗಳು ನಿಮ್ಮನ್ನು ಕಾಡಲಿದೆ. ಸಾಮಾಜಿಕವಾಗಿ ಜನಾನುರಾಗ ಲಭಿಸಲಿದೆ. ವೃತ್ತಿರಂಗದ ಯೋಜನೆಯೊಂದು ಸಾಕಾರಗೊಳ್ಳಲಿದೆ. ಅಧಿಕ ಖರ್ಚು ಬರಲಿದೆ.
ಕರ್ಕ: ಹಂತ ಹಂತವಾಗಿ ಶತ್ರುಬಾಧೆಯು ಕಡಿಮೆಯಾಗಲಿದೆ. ಅಲೆದಾಟವಿದ್ದರೂ ಕಾರ್ಯಸಿದ್ಧಿಯಾಗಲಿದೆ. ಅನಿರೀಕ್ಷಿತವಾಗಿ ವಿಶೇಷ ಪ್ರಯಾಣವು ನಿಮಗೆ ಶುಭ ತಂದೀತು. ದೇವತಾನುಗ್ರಹಕ್ಕಾಗಿ ಪ್ರಾರ್ಥಿಸುವುದು.
ಸಿಂಹ: ಗೃಹದಲ್ಲಿ ಸಣ್ಣ ಸಣ್ಣ ಮನಸ್ತಾಪದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ತಾಳ್ಮೆ ಸಹನೆ ಅಗತ್ಯವಿದೆ. ಚಿಂತೆಯನ್ನು ಬದಿಗೊತ್ತಿರಿ. ವೃತ್ತಿರಂಗದಲ್ಲಿ ತಟಸ್ಥ ಧೋರಣೆ ಫಲಕಾರಿಯಾಗಲಿದೆ. ಸಂತೋಷದಿಂದಿರಿ.
ಕನ್ಯಾ: ನವದಂಪತಿಗಳಿಗೆ ಸಂತಾನಭಾಗ್ಯದ ಕುರುಹು ಕಂಡುಬಂದು ಸಂತಸವಾಗಲಿದೆ. ಅಧ್ಯಯನದಲ್ಲಿ ಸಮರ್ಪಣಾ ಮನೋಭಾವ ಸಾರ್ಥಕ್ಯ ತಂದು ಕೊಡಲಿದೆ. ವಾತ, ಪಿತ್ತ, ಕಫದ ಬಾಧೆಯು ಕಾಡಲಿದೆ.
ತುಲಾ: ಹೊಸತನ ಕಾರ್ಯಸಾಧನೆಗೆ ಪೂರಕವಾಗಲಿದೆ. ಸಾಂಸಾರಿಕವಾಗಿ ಸಂತಸದ ವಾತಾವರಣ ಉತ್ಸಾಹಿಕರನ್ನಾಗಿ ಮಾಡಲಿದೆ. ವೈವಾಹಿಕ ಭಾಗ್ಯ ಫಲ ನೀಡಲು ಹೊಂದಾಣಿಕೆಯ ಅಗತ್ಯವಿದೆ. ಚಂಚಲತೆ ಕಾಡಬಹುದು.
ವೃಶ್ಚಿಕ: ಆರೋಗ್ಯಭಾಗ್ಯವು ಹಂತಹಂತವಾಗಿ ಸುಧಾರಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವು ಬಾಳಿಗೆ ಭದ್ರತೆಯನ್ನು ನೀಡಲಿದೆ. ಕಾರ್ಯರಂಗದಲ್ಲಿ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಂಡು ಹೋಗಬಹುದಾಗಿದೆ.
ಧನು: ಬೇಸಾಯ, ಕೃಷಿಯ ಅಭಿರುಚಿಯನ್ನು ಹೆಚ್ಚಿಸಿಕೊಂಡು ಕಠಿಣ ಪರಿಶ್ರಮದಿಂದ ದುಡಿದಲ್ಲಿ ಹೆಚ್ಚಿನ ಲಾಭವು ನಿಮಗೆ ದೊರಕಲಿದೆ. ಕೋರ್ಟು ಕಚೇರಿ ವ್ಯವಹಾರಗಳು ಅಸಾಧ್ಯವಾದುದನ್ನು ಸಾಧ್ಯ ಮಾಡಿಸಲಿದೆ.
ಮಕರ: ಹೂಡಿಕೆಗಳು ತಕ್ಕಮಟ್ಟಿಗೆ ಲಾಭಕರವಾಗಿ ಕಂಡುಬಂದಾವು. ಶತ್ರುಬಾಧೆ-ನಿವಾರಣೆಯಾದರೂ ಹಿತಶತ್ರುಗಳ ಬಾಧೆ ಇರದು. ಆರ್ಥಿಕವಾಗಿ ಕಿರಿಕಿರಿಯನ್ನು ಅನುಭವಿಸುವಿರಿ. ಕಾಳಜಿ ಮುಖ್ಯವಾಗಿದೆ.
ಕುಂಭ: ವೃತ್ತಿರಂಗದಲ್ಲಿ ಆಗಾಗ ಏರುಪೇರುಗಳು ತೋರಿಬಂದರೂ ಅದನ್ನು ಸಹಿಸಿ ಮುನ್ನಡೆದರೆ ಉತ್ತಮ. ಯಾವುದೇ ವಾದ ವಿವಾದಗಳಿಗೆ ಸಿಲುಕದಿರಿ. ಹಿರಿಯರ ಆರೋಗ್ಯಕ್ಕಾಗಿ ಅಲೆದಾಟವು ತೋರಿಬರುವುದು.
ಮೀನ: ಕುಟುಂಬ ವರ್ಗದಲ್ಲಿ ಸಹಮತವಿರದೆ ಕೆಲಸಕಾರ್ಯಗಳು ವಿಳಂಬಗತಿ ಪಡೆದಾವು. ಕಾರ್ಯಕ್ಷೇತ್ರದಲ್ಲಿ ಬುದ್ಧಿಜೀವಿಗಳಿಗೆ ಮುಖಭಂಗವಾದೀತು. ರಾಜಕೀಯರಂಗದಲ್ಲಿ ವಂಚನೆಗೆ ಆಸ್ಪದವಿರುತ್ತದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ
Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ
Horoscope Today: ಈ ರಾಶಿಯವರಿಗೆ ಅಕಸ್ಮಾತ್ ಧನಾಗಮ ಯೋಗ ಇರಲಿದೆ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ