ಈ ರಾಶಿಯವರಿಗಿಂದು ಆಹಾರ ವ್ಯತ್ಯಯದಿಂದ ಆರೋಗ್ಯ ಸಮಸ್ಯೆಯು ತೋರಿ ಬಂದೀತು, ಕಾಳಜಿ ವಹಿಸಿರಿ
Team Udayavani, Feb 28, 2021, 7:48 AM IST
28-02-2021
ಮೇಷ: ಅನಿರೀಕ್ಷಿತ ಶುಭ ಸಮಾಚಾರದಿಂದ ಕಾರ್ಯ ಸಿದ್ಧಿಯಾಗಲಿದೆ. ಕಾರ್ಯರಂಗದಲ್ಲಿ ನಿಮ್ಮ ಸ್ವಯಂ ಪ್ರಜ್ಞೆಯೂ ಪ್ರಯತ್ನ ಬಲಕ್ಕೆ ಒತ್ತು ನೀಡಿದ್ದಲ್ಲಿ ಯಶಸ್ಸು ಕೂಡಿ ಬರಲಿದೆ. ಸಣ್ಣ ವಿಚಾರದಲ್ಲಿ ಉದ್ವೇಗ ಮಾಡದಿದ್ದರೆ ಉತ್ತಮ.
ವೃಷಭ: ನಿರುದ್ಯೋಗದಿಂದ ಅಲೆದು ಬೇಸತ್ತ ನಿಮಗೆ ಉದ್ಯೋಗ ದೊರೆತು ಸಂತಸವಾಗಲಿದೆ. ಹಣಕಾಸಿನ ವಿಚಾರದಲ್ಲಿ ಆತಂಕಕ್ಕೆ ಕಾರಣರಾಗದಿರಿ. ನೀವು ನಿಮ್ಮವರು ಎಂದೆಣಿಸಿದವರು ಕೈಚೆಲ್ಲಿ ಕೂತಾರು. ಬೇಸರಿಸದಿರಿ.
ಮಿಥುನ: ಕ್ರಯವಿಕ್ರಯದಲ್ಲಿ ತುಸು ಲಾಭ ಕಂಡು ಬರಲಿದೆ. ಅದರಿಂದ ಉತ್ಸಾಹ ದೊರಕೀತು. ಎಣಿಕೆಗಳೆಲ್ಲಾ ಈಡೇರುವುದರಿಂದ ಧೈರ್ಯ ಪ್ರಯತ್ನ ಬಲದಿಂದ ಕಾರ್ಯ ಸಾಧಿಸುವಿರಿ. ಹೊಸ ವ್ಯಾಪಾರ ವ್ಯವಹಾರ ಈಗ ಬೇಡ.
ಕರ್ಕ: ಹೊಸ ಉದ್ಯಮ ಯಾ ವ್ಯವಹಾರಕ್ಕೆ ಕೈ ಹಾಕಿದ್ದಲ್ಲಿ ಸ್ವಲ್ಪ ಸ್ವಲ್ಪ ಲಾಭಾಂಶ ಕಂಡು ಬಂದು ನಿಧಾನವಾಗಿ ಏರುಗತಿಯನ್ನು ಕಾಣಲಿದೆ. ಆಗಾಗ ಭಿನ್ನಾಭಿಪ್ರಾಯದಿಂದ ಸಾಂಸಾರಿಕ ಸುಖ ಕಿರಿಕಿರಿ ಎನಿಸಲಿದೆ. ತಾಳ್ಮೆ ಇರಲಿ.
ಸಿಂಹ: ವಿವಾಹೇತರರಿಗೆ ವೈವಾಹಿಕ ಜೋಡಣೆಯು ಸಂತಸ ತಂದೀತು. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿಯು ಕಂಡು ಬರುವುದು. ಆದರೆ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಅತೀಸಹನೆ ನಿಮಗಿಂದು ಬೇಕು.
ಕನ್ಯಾ: ಉದ್ಯೋಗ ಹಾಗೂ ಕಾರ್ಯರಂಗದಲ್ಲಿ ಖಚಿತ ಹಾಗೂ ಸಮರ್ಪಕ ನಿಲುವು ಮುನ್ನಡೆಗೆ ಸಾಧಕವಾಗಲಿದೆ. ಸಾಂಸಾರಿಕವಾಗಿ ಆತ್ಮೀಯರು ಮಧ್ಯಸ್ಥಿಕೆ ವಹಿಸಬೇಕಾದ ಸಂದಿಗ್ಧತೆ ತೋರಿ ಬಂದೀತು. ಜಾಗ್ರತೆ ಮಾಡಿರಿ.
ತುಲಾ: ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ಕಂಡು ಬಂದೀತು. ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬೇಕೇಬೇಕು.
ವೃಶ್ಚಿಕ: ಆಹಾರ ವ್ಯತ್ಯಯದಿಂದ ಆರೋಗ್ಯ ಸಮಸ್ಯೆಯು ತೋರಿ ಬಂದೀತು. ಕಾಳಜಿ ವಹಿಸಿರಿ. ಹಿರಿಯರ ಅಭಿಪ್ರಾಯ ಭೇದದಿಂದ ಶುಭಮಂಗಲ ಕಾರ್ಯಗಳು ವಿಳಂಬವಾಗಲಿದೆ. ಗೃಹದಲ್ಲಿ ಅತೀ ಹೆಚ್ಚಿನ ಖರ್ಚು ತೋರಿ ಬಂದೀತು.
ಧನು: ಅವಕಾಶಗಳು ಕೂಡಿ ಬರಲು ನಿಧಾನವಾದರೂ ನಿಶ್ಚಿತ ರೂಪದಲ್ಲಿ ನಿಮಗೆ ಅಭಿವೃದ್ಧಿ ತೋರಿಬರುತ್ತದೆ. ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ತಂದೀತು.
ಮಕರ: ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಗಮನ ಹರಿಸಬೇಕಾಗುತ್ತದೆ. ಅವಿವಾಹಿತರ ಪ್ರಯತ್ನ ಬಲಕ್ಕೆ ಕಂಕಣ ಭಾಗ್ಯ ಪ್ರಾಪ್ತಿಯಾಗಲಿದೆ. ಅನಾವಶ್ಯಕವಾಗಿ ಸಮಯ ವ್ಯರ್ಥವಾಗದಂತೆ ಕಾಳಜಿ ವಹಿಸುವುದು.
ಕುಂಭ: ದಾಂಪತ್ಯದಲ್ಲಿ ಸ್ವಲ್ಪ ಸಮಾಧಾನ ಕಂಡು ಬರಲಿದೆ. ಪತ್ನಿಯ ಸಹಕಾರವು ನಿಮಗೆ ದೊರಕುವುದು. ಬರಬೇಕಾದ ಹಣವು ಕೈ ಸೇರಲಿದೆ. ಮಿತ್ರರಿಂದ ಸಹಕಾರವು ಕೂಡಿ ಬರುವುದು. ನೂತನ ದಂಪತಿಗಳಿಗೆ ಸಿಹಿ ಸುದ್ದಿ ಇದೆ.
ಮೀನ: ಕೌಟುಂಬಿಕವಾಗಿ ಬಂಧು ಭಾಂದವರ ಸಹಕಾರ ನಿಮಗಿದ್ದರೂ ವಿಶ್ವಾಸ ಅತೀ ಇಡದಿರಿ. ಅವಿವಾಹಿತರ ಪ್ರಯತ್ನ ಬಲಕ್ಕೆ ಕಂಕಣ ಭಾಗ್ಯ ಲಭಿಸಲಿದೆ. ಸ್ವಲ್ಪ ಸಮಾಧಾನ ಚಿತ್ತದಿಂದ ಆಲೋಚಿಸಿದರೆ ಉತ್ತಮ ಫಲವಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ