ಈ ರಾಶಿಯವರಿಗಿಂದು ಯಾವುದೇ ಕಾರಣಕ್ಕೂ ಇತರರಿಗೆ ಬುದ್ಧಿ ಹೇಳಲು ಹೋಗದಿರಿ!
Team Udayavani, Mar 6, 2021, 8:16 AM IST
06-03-2021
ಮೇಷ: ಏಕಾಂತದಲ್ಲಿ ಕುಳಿತು ಏಕಾಂಗಿಯಾಗಿ ಯೋಚಿಸುವಾಗ ನಿಮಗೆ ನಿಮ್ಮ ಮೌಲ್ಯದ ಅರಿವಾಗ ಲಿದೆ. ಮುಖ್ಯವಾಗಿ ಮನೆಯಲ್ಲಿ ಪತ್ನಿಯಿಂದ ಕಿರಿಕಿರಿ ಕಂಡುಬರಲಿದೆ. ಮನಸ್ಸು ಕೆಟ್ಟು ಹೋದೀತು. ಅತೀ ಚಿಂತೆ ಒಳ್ಳೆಯದಲ್ಲ.
ವೃಷಭ: ಹೃದಯದ ಭಾವವೇ ಆದ್ಯತೆ ಪಡೆಯುತ್ತದೆ. ಆಪ್ತರೊಬ್ಬರ ಕುರಿತಂತೆ ಯೋಚಿಸಿ ಅತೀ ಭಾವುಕರಾಗಿ ವರ್ತಿಸುವಿರಿ. ಇದರ ಅವಶ್ಯಕತೆ ಇವರಿಗೆ ಇರದು. ನಿಮ್ಮ ಯೋಚನೆಗಳು ನಿಮಗೆ ಸೀಮಿತವಾಗಿದ್ದರೆ ಉತ್ತಮ.
ಮಿಥುನ: ಸುಗಮ ದಿನ ಇಂದು. ಸಣ್ಣ ಪ್ರಮಾಣದ ಪ್ರಯಾಣ ಕೂಡಿಬರಲಿದೆ. ಸಂತೋಷದ ವಾತಾವರಣವಿರುತ್ತದೆ. ಇತರರೊಂದಿಗೆ ಉತ್ತಮ ಸಂವಹನ ಸಾಧಿಸುವುದರಲ್ಲಿ ವಿಫಲರಾಗುವಿರಿ. ಆರೋಗ್ಯ ಸಮಸ್ಯೆಯು ಕಾಡಲಿದೆ.
ಕರ್ಕ: ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ಒದಗಬಹುದು. ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಿರಿ. ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಕಂಡುಬರಲಿದೆ. ಯಾರ ಮಾತಿಗೂ ಹೆಚ್ಚು ತಲೆ ಕೊಡದಿರಿ. ಕರ್ತವ್ಯ ಮುಖ್ಯ.
ಸಿಂಹ: ಅನಿರೀಕ್ಷಿತ ವರ್ತನೆಯ ಮೂಲಕ ಇತರರಲ್ಲಿ ಅಸಹನೆ ಮೂಡಿಸುವಿರಿ. ಯಾರೊಂದಿಗೂ ಅತೀ ಸಲುಗೆ ಬೇಡ. ಶಾಂತಿ ಕಾಯ್ದುಕೊಳ್ಳಿರಿ. ಇತರರೊಂದಿಗೆ ಸ್ನೇಹಪೂರ್ವಕವಾಗಿ ಬೆರೆಯಲು ಕಲಿಯಿರಿ. ನಿಷ್ಠೆ ಇರಲಿ.
ಕನ್ಯಾ: ಬಿಡುವಿಲ್ಲದ ದಿನವಾಗಿದೆ. ಆರ್ಥಿಕ ಸ್ಥಿತಿಯು ಏರುಪೇರಾಗಲಿದೆ. ಬದುಕಿನ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿರಿ. ಆರ್ಥಿಕ ಪರಿಸ್ಥಿತಿಯು ಸಂಕೀರ್ಣವಾಗಬಹುದು. ಕೌಟುಂಬಿಕವಾಗಿ ಸೌಹಾರ್ದ ಕೆಡಬಹುದು.
ತುಲಾ: ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕಾನೂನಿನ ಚೌಕಟ್ಟು ನಿಮ್ಮನ್ನು ತೊಡಕಿಗೆ ಸಿಲುಕಿಸಬಹುದು. ಅಸಹನೆಯ ವರ್ತನೆಯು ನಿಮ್ಮಿಂದ ಹೊರಹೊಮ್ಮಿತು ಜಾಗ್ರತೆ. ಗೃಹ ನಿವೇಶನ ಖರೀದಿ ಇದೆ.
ವೃಶ್ಚಿಕ: ಪ್ರಮುಖ ವಿಷಯಗಳನ್ನು ಇತ್ಯರ್ಥ ಪಡಿಸಲು ಸೂಕ್ತದಿನವಲ್ಲ . ಆರ್ಥಿಕ ಸಂಕಷ್ಟ ತೋರಿಬರಬಹುದು.ಖರ್ಚುವೆಚ್ಚದಲ್ಲಿ ಹೆಚ್ಚಳ ಕಂಡುಬರಲಿದೆ. ಸಂಬಂಧಗಳು ಗಟ್ಟಿಯಾಗಿ ಮನಸ್ಸು ಪ್ರಪುಲ್ಲವಾಗಲಿದೆ.
ಧನು: ಕೌಟುಂಬಿಕವಾಗಿ ಸ್ವಲ್ಪ ಏರುಪೇರುಗಳು ಕಂಡು ಬಂದಾವು. ಅದನ್ನು ಜಾಣತನದಿಂದ ಸುಧಾರಿಸುವುದು ಅಗತ್ಯವಿದೆ. ಪತ್ನಿಯ ಮನಸ್ಸು ಅರಿತು ಮುನ್ನಡೆಯಿರಿ. ಸುಖ, ಶಾಂತಿ, ಸಹನೆ, ತಾಳ್ಮೆ ಸಂಸಾರದಲ್ಲಿ ಅಗತ್ಯ.
ಮಕರ: ಯಾವುದೇ ಕಾರಣಕ್ಕೂ ಸಹನೆ ಕಳೆದು ಕೊಳ್ಳದಿರಿ. ಇತರರಿಗೆ ಬುದ್ಧಿ ಹೇಳಲು ಹೋಗದಿರಿ. ನಿಮ್ಮ ಮೇಲೆ ಅಪವಾದ ಹೊರಿಸಿಯಾರು. ಗೆಳೆಯರೊಂದಿಗೆ ಅತೀ ಸಲುಗೆ ಬೇಡ. ಹಾಗೆಯೇ ಅವರನ್ನು ಕಡೆಗಣಿಸದಿರಿ.
ಕುಂಭ: ವೃತ್ತಿಪರರಿಗೆ ಯಶಸ್ಸು ಕಂಡುಬರಲಿದೆ. ಕೌಟುಂಬಿಕವಾಗಿ ಅಸಹನೆ ಮೂಡಿ ಬರಲಿದೆ. ಗೊಂದಲದ ಪರಿಸ್ಥಿತಿ ಕಂಡುಬಂದೀತು. ಸಂಬಂಧದಲ್ಲಿ ಸುಧಾರಣೆ ಕಂಡುಬರಲಿದೆ. ಪರಸ್ಪರರೊಳಗೆ ಸೌಹಾರ್ದವಿದೆ.
ಮೀನ: ನೀವು ನಂಬಿದ ವ್ಯಕ್ತಿಯೊಬ್ಬರು ನಿಜ ಬಣ್ಣ ತೋರಿಸಲಿದ್ದಾರೆ. ಅವರ ಕುಟಿಲತೆ ಅರಿವಿಗೆ ಬರಲಿದೆ. ಯಾವ ವಿಷಯಕ್ಕೂ ಸಂಘರ್ಷಕ್ಕೆ ಇಳಿಯದಿರಿ. ಗೊಂದಲದ ಸ್ಥಿತಿಗೆ ಒಳಗಾಗುವಿರಿ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಿರಿ.
ಎನ್ ಎಸ್ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫಲ
Daily horoscope;ಅಧಿಕ ಶುಭಫಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ
Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ
Daily horoscope: ಈ ರಾಶಿಯ ಗೃಹಿಣಿಯರ ಆದಾಯ ಹೆಚ್ಚಳವಾಗಲಿದೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ