ಇಂದಿನ ಗ್ರಹಬಲ: ಬಂಡವಾಳದ ವೈವಾಹಿಟಿನಲ್ಲಿ ಪಾಲುಗಾರನಿಂದ ಮೋಸಕ್ಕೆಡೆಯಿದೆ!


Team Udayavani, Apr 2, 2021, 7:40 AM IST

ಇಂದಿನ ಗ್ರಹಬಲ: ಬಂಡವಾಳದ ವೈವಾಹಿಟಿನಲ್ಲಿ ಪಾಲುಗಾರನಿಂದ ಮೋಸಕ್ಕೆಡೆಯಿದೆ!

02-04-2021

ಮೇಷ: ಧನ ಸಂಗ್ರಹದ ಕೊರತೆ ಆಗಾಗ ಕಾಣಿಸಿಕೊಂಡು ಕಾರ್ಯಾನುಕೂಲಕ್ಕೆ ವಿಳಂಬವಾದೀತು. ವೃತ್ತಿರಂಗದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಲ್ಲಿ ಯಶಸ್ಸು ನಿಮ್ಮದಾಗಲಿದೆ. ಪತ್ನಿಯ ತವರು ಮನೆಯ ವಾಸ ಏಕಾಕಿತನದ ಅನುಭವವಾದೀತು.

ವೃಷಭ: ವಿದ್ಯೆಯಲ್ಲಿ ಮಕ್ಕಳಿಗೆ ಯಶಸ್ಸು ದೊರೆತು ಸಂತಸವಾಗಲಿದೆ. ಶೇರು ಕಮಿಶನ್‌ ವ್ಯವಹಾರ ಗಳಲ್ಲಿ ಹೂಡಿಕೆಗಳು ಉತ್ತಮ ಫ‌ಲ ನೀಡದು. ವ್ಯಾಪಾರ, ವ್ಯವಹಾರಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಆಗಾಗ ಅಸಮಾಧಾನಕ್ಕೆ ಕಾರಣವಾಗಲಿದೆ.

ಮಿಥುನ: ಆದಾಯವನ್ನು ಮೀರಿ ಖರ್ಚು ಕಂಡು ಬರಲಿದೆ. ಹೆಚ್ಚಿನ ಜಾಗ್ರತೆ ವಹಿಸುವುದು. ಗೃಹಿಣಿಗೆ ಸಂಭ್ರಮದ ಸಮಯವಿದು. ವಿಲಾಸೀ ವಸ್ತುಗಳ ಖರೀದಿ, ಬೆಳ್ಳಿ ಬಂಗಾರ, ಒಡವೆ ವಸ್ತುಗಳ ಖರೀದಿ ತಂದೀತು. ಆರೋಗ್ಯವು ಉತ್ತಮ.

ಕರ್ಕ: ಅವಿವಾಹಿತರಿಗೆ ನೂತನ ಸಂಬಂಧದ ಮಾತುಕತೆ ನಾಂದಿಯಾದೀತು. ಹಿರಿಯರ ಆಶೀರ್ವಾದ ಇದೆ. ಆರೋಗ್ಯದ ಕೊರತೆ ಆಗಾಗ ಕಾಣಿಸಿಕೊಂಡರೂ ದೈವಾನುಗ್ರಹದಿಂದ ವಿಶೇಷ ಭೀತಿಗೆ ಕಾರಣವಾಗದು.

ಸಿಂಹ: ಪುರೋಹಿತ, ಅರ್ಚಕ, ದೇವತಾ, ವೈದಿಕ ವೃತ್ತಿ ಯವರಿಗೆ ವಿಶೇಷ ಆದಾಯ ತಂದುಕೊಡಲಿದೆ. ಹಲವು ಅಡೆತಡೆ ಆತಂಕಗಳು ಎದುರಾಗಲಿದೆ. ಬಿಡುವಿಲ್ಲದ ಕಾರ್ಯ ಒತ್ತಡದಿಂದ ಆರೋಗ್ಯವು ಹಾನಿಯಾದೀತು. ಸಾಂಸಾರಿಕವಾಗಿ ಸುಖೀಗಳು.

ಕನ್ಯಾ: ಸಾಂಸಾರಿಕ ಸಮಸ್ಯೆಗಳು ಆಗಾಗ ಕಂಡು ಬಂದು ತಲೆಕೆಡಿಸಲಿದೆ. ನೂತನ ವೃತ್ತಿ, ಉದ್ಯೋಗ ಲಾಭವಾಗಲಿದೆ. ಬಂಡವಾಳದ ವೈವಾಹಿಟಿನಲ್ಲಿ ಪಾಲುಗಾರನಿಂದ ಮೋಸಕ್ಕೆಡೆಯಿದೆ . ಜಾಗ್ರತೆ ಮಾಡಿರಿ. ದೈಹಿಕವಾಗಿ ಆರೋಗ್ಯದ ಕೊರತೆ ಕಾಣಿಸಲಿದೆ.

ತುಲಾ:ವ್ಯಾಪಾರ, ವ್ಯವಹಾರದಲ್ಲಿ ಸಾಲ ವಾಪಾಸಾತಿಯಿಂದ ಸಮಾಧಾನ ತಂದೀತು. ಸರಕಾರೀ ಕೆಲಸ ಕಾರ್ಯ ಗಳು ಸುಗಮವಾಗಿ ನಡೆಯಲಿದೆ. ಧನದ ಚಿಂತೆಗೆ ಅವಕಾಶವಿಲ್ಲ. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಂಡಾವು.

ವೃಶ್ಚಿಕ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆಯು ಸಮಾಧಾನ ತಂದೀತು. ಆರ್ಥಿಕವಾಗಿ ನಾನಾ ರೀತಿಯ ವಿನಿಯೋಗಕ್ಕಾಗಿ ಹಣ ಖರ್ಚಾಗಲಿದೆಯಾದರೂ ಧನಾಗಮನವು ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಲಿದೆ.

ಧನು: ಗೃಹದಲ್ಲಿ ವಿಲಾಸೀ ವಸ್ತುಗಳ ಆಗಮನವಿದೆ. ಹಿರಿಯರ ವಿರೋಧದಿಂದ ಬಾಡಿದ್ದ ಪ್ರೇಮಾಂಕುರ ಪುನಃ ಹ ಚಿಗುರಲಿದೆ. ವೈದ್ಯಕೀಯ ವೃತ್ತಿಯವರಿಗೆ ಹೆಚ್ಚಿನ ಸಂಪತ್ತು ಹರಿದು ಬರಲಿದೆ. ದೇವತಾಕಾರ್ಯ ಶುಭಕಾರ್ಯಗಳಿಗಿದು ಸಕಾಲ.

ಮಕರ: ಕಾರ್ಯರಂಗದಲ್ಲಿ ಪ್ರತಿಷ್ಠಿತರ ಸಹಯೋಗದಿಂದ ಪ್ರಗತಿಯಿದೆ. ನೌಕರ ವರ್ಗಕ್ಕೆ ಸಮಾಧಾನದಿಂದ ಮುಂದುವರಿಯುವಂತಾದೀತು. ಆದರೂ ಪ್ರಭಾವೀ ವ್ಯಕ್ತಿಗಳ ಹಸ್ತಕ್ಷೇಪದ ಬಗ್ಗೆ ಜಾಗ್ರತೆ ವಹಿಸಿರಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ.

ಕುಂಭ: ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ರಾಜಕೀಯ ವಲಯದ ಕಾರ್ಯಕರ್ತರಿಗೆ ಮುನ್ನಡೆಯುವ ಅವಕಾಶಗಳು ಒದಗಿ ಬರುತ್ತವೆ. ಸಾಂಸಾರಿಕವಾಗಿ ಆಗಾಗ ಸದಸ್ಯರ ಆರೋಗ್ಯದ ಚಿಂತೆ ತಪ್ಪಿದಲ್ಲ .

ಮೀನ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ತೋರಿಬಂದು ಸ್ವಾಭಿಮಾನದ ಪ್ರಶ್ನೆಯಾಗಲಿದೆ. ಅಲೆದಾಟಗಳು ಅಧಿಕವಾಗಿ ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಆಪ್ತರ ಸಲಹೆಗಳಿಗೆ ಗಮನ ನೀಡಿರಿ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.