ಇಂದಿನ ಗ್ರಹಬಲ: ಯತ್ನಿತ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ
Team Udayavani, Apr 27, 2021, 7:24 AM IST
27-04-2021
ಮೇಷ: ಶುಭಕಾರ್ಯಗಳಿಗೆ ವಿಘ್ನಭೀತಿ ಇದ್ದರೂ ಆತ್ಮವಿಶ್ವಾಸ ಹಾಗೂ ಪ್ರಯತ್ನ ಬಲದಿಂದ ಕಾರ್ಯಸಿದ್ದಿಯಾಗಲಿದೆ. ಸಾಂಸಾರಿಕವಾಗಿ ಅನಗತ್ಯ ವಿವಾದವೊಂದು ಎದುರಾಗಲಿರುವ ಸಾಧ್ಯತೆ ಕಂಡು ಬರುವುದು. ಅವಕಾಶದಿಂದ ಕಾರ್ಯಸಿದ್ಧಿ ಇದೆ.
ವೃಷಭ: ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಬೇಕಾಗುತ್ತದೆ. ಆತ್ಮೀಯರ ಅನಾರೋಗ್ಯ ನಿಮಿತ್ತ ಆಸ್ಪತ್ರೆಯ ಸಂದರ್ಶನ ಸಾಧ್ಯತೆ ಇರುತ್ತದೆ. ಕಿರು ಪ್ರಯಾಣದ ಅವಕಾಶದಿಂದ ಕಾರ್ಯಸಿದ್ದಿ ಇದೆ ಸಾಂಸಾರಿಕವಾಗಿ ಉದ್ವಿಗ್ನತೆ ಕಂಡು ಬಂದೀತು.
ಮಿಥುನ: ಹಂತಹಂತವಾಗಿ ಏಳಿಗೆ ಹಾಗೂ ಅಭಿವೃದ್ಧಿ ಕಂಡು ಬರುವುದು. ಧನಪ್ರಾಪ್ತಿ ಇದ್ದರೂ ಖರ್ಚು ಅಷ್ಟೇ ಇರುವುದು. ಭೂಸಂಪತ್ತಿನ ಅಭಿವೃದ್ಧಿ ಕಾರ್ಯ, ಜಯ ಲಭ್ಯವಾಗಲಿದೆ. ಆರೋಗ್ಯದಲ್ಲಿ ಅಭಿವೃದ್ದಿ ಇರುತ್ತದೆ.
ಕರ್ಕ: ಒಂದೆಡೆ ಅಧಿಕ ರೀತಿಯಲ್ಲಿ ಖರ್ಚು ವೆಚ್ಚಗಳು ಕಂಡು ಬಂದರೂ ಇನ್ನೊಂದೆಡೆ ಧನಾಗಮನವು ಇದ್ದೇ ಇರುತ್ತದೆ. ಯತ್ನಿತ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದು ಸಂತಸ.
ಸಿಂಹ: ರಾಜಕೀಯ ವರ್ಗದವರಿಗೆ ಅಧಿಕಾರದ ಉಳಿವಿಗಾಗಿ ಹೋರಾಟದ ಅನಿವಾರ್ಯತೆ ಕಂಡು ಬರುವುದು. ವೃತ್ತಿರಂಗದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸಬೇಕಾದ ಸಂದಿಗªತೆ ಕಂಡು ಬರುವುದು. ಮುನ್ನಡೆ ಇದೆ.
ಕನ್ಯಾ: ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರುಕುಳವು ಕಂಡು ಬಂದೀತು. ದೈಹಿಕ ಶ್ರಮದ ಕಾರ್ಯವು ದುಡುಕು ವರ್ತನೆಯಿಂದ ಮುಖಭಂಗದ ಪ್ರಸಂಗವಿರುತ್ತದೆ. ಸಹೋದ್ಯೋಗಿಗಳೊಂದಿಗೆ ವಿರೋಧ ಕಂಡು ಬಂದೀತು.
ತುಲಾ: ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಮಕ್ಕಳ ಕಿರಿಕಿರಿ ತಪ್ಪದು. ಆರ್ಥಿಕವಾಗಿ. ಅನಿರೀಕ್ಷಿತವಾಗಿ ಒದಗಿ ಬರುವ ನೆರವು ನೆಮ್ಮದಿ ತಂದೀತು . ಆಗಾಗ ವ್ಯಾಪಾರ, ವ್ಯವಹಾರಗಳಲ್ಲಿ ಏರುಪೇರು ತೋರಿ ಬಂದೀತು. ಮುನ್ನಡೆ ಇದೆ.
ವೃಶ್ಚಿಕ: ವೃತ್ತಿರಂಗದಲ್ಲಿ ನಿರೀಕ್ಷಿತ ಬಾಹ್ಯ ನೆರವು ಲಭಿಸಲಿದೆ. ಕುಟುಂಬದಲ್ಲಿ ಶುಭಮಂಗಲ ಕಾರ್ಯಕ್ಕೆ ಸಂಬಂಧ ಪಟ್ಟ ಚಟುವಟಿಕೆಗಳಿಂದ ಸಂಭ್ರಮಿಸುವಂತಾದೀತು. ಆಪ್ತ ವಲಯದಲ್ಲಿ ಮಾನ್ಯತೆ ಲಭಿಸಲಿದೆ.
ಧನು: ಋಣ ಪರಿಹಾರಾರ್ಥ ಆರ್ಥಿಕ ಪ್ರಗತಿಪರ ಕಾರ್ಯಗಳ ಪ್ರಯತ್ನ ನಡೆಯಲಿವೆ. ಆತ್ಮೀಯರಿಂದ ನಿರುದ್ಯೋಗಿಗಳ ಪ್ರಯತ್ನವು ಸಫಲವಾಗಲಿದೆ. ಅನಿರೀಕ್ಷಿತವಾಗಿ ಒದಗಿ ಬರುವ ನೆರವು ಕಷ್ಟಕ್ಕೆ ಬಂದೀತು.
ಮಕರ: ಮನಸ್ಸಿನಲ್ಲಿ ನಾನಾ ರೀತಿಯಲ್ಲಿ ಸಂಶಯಗಳು ಎದ್ದೀತು. ಕೌಟುಂಬಿಕ ಪೀಡೆ, ಮನೋವ್ಯಾಕುಲತೆ, ಚಿಂತೆ ಬಂಧು ಮಿತ್ರರೊಳಗೆ ಕಲಹ, ಭಿನ್ನಾಭಿಪ್ರಾಯಗಳಿಂದ ಅಹಿತಕರ ವಾತಾವರಣವು ಕ್ಲೇಶ ತಂದೀತು. ಜಾಗ್ರತೆ ಮಾಡಿರಿ.
ಕುಂಭ: ನ್ಯಾಯಾಲಯದ ವ್ಯಾಜ್ಯಗಳಿಂದ ತೊಂದರೆ ಇತ್ಯಾದಿಗಳು ಆಗಾಗ ಕಂಡು ಬಂದಾವು. ಹೊರಗಿನ ವ್ಯವಹಾರಗಳಲ್ಲಿ ಮುನ್ನಡೆ ಕಂಡು ಬಂದು ಲಾಭಾದಿಗಳಿರುತ್ತವೆ. ಆರ್ಥಿಕವಾಗಿ ಋಣಭಾಧೆಯು ಮುಕ್ತಾಯವಾಗಲಿದೆ.
ಮೀನ: ಆಕಸ್ಮಿಕವಾಗಿ ಆತ್ಮೀಯರ ಮಿಲನದಿಂದ ಸಂತೋಷ ಸಿಗಲಿದೆ. ವಿಲಾಸ ಪ್ರಿಯತೆ ಇತ್ಯಾದಿಗಳಿರುತ್ತದೆ. ದೂರ ಸಂಚಾರ ಹಾಗೂ ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಒಂಟಿ ತನವು ಕಾಡಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ