ಇಂದಿನ ಗ್ರಹಬಲ: ಆರ್ಥಿಕವಾಗಿ ಏರುಪೇರು ಒಮ್ಮೊಮ್ಮೆ ಆತಂಕ ಪರಿಸ್ಥಿತಿಯನ್ನು ತಂದೊಡ್ಡಲಿದೆ!
Team Udayavani, May 1, 2021, 7:21 AM IST
01-05-2021
ಮೇಷ: ಸಾಂಸಾರಿಕವಾಗಿ ದುಃಖ, ಮನಸ್ತಾಪ, ಮಾನಸಿಕ ವ್ಯಥೆ ಎಲ್ಲವೂ ಒಂದೊಂದಾಗಿ ನಿವಾರಣೆಯಾಗಲಿದೆ. ನಿಮ್ಮ ಖಚಿತ ನಿರ್ಧಾರಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಏರುಪೇರು ಕಾಣಬಹುದು.
ವೃಷಭ: ಆರ್ಥಿಕವಾಗಿ ಸ್ವಲ್ಪ ಕಡಿಮೆ ವ್ಯವಹಾರಗಳು ಕಂಡುಬರುವುದು. ಆದರೂ ಅಧೈರ್ಯ ಪಡುವುದು ಬೇಡ. ನಿಮ್ಮ ಭರವಸೆ, ವಿಶ್ವಾಸಗಳು ನಿಮ್ಮನ್ನು ಕಾಪಾಡಲಿದೆ. ಅಧೈರ್ಯದ ಹೆಜ್ಜೆ ಬೇಡ. ಮುನ್ನಡೆಯುವುದು.
ಮಿಥುನ: ನಿರುದ್ಯೋಗಿಗಳಿಗೆ ತಪ್ಪಿದ ಅವಕಾಶಗಳು ಪುನಃ ಲಭಿಸಲಿದೆ. ದಾಂಪತ್ಯದಲ್ಲಿ ಸಿಹಿಯು ಹೆಚ್ಚಲಿದೆ. ಅಧಿಕ ತಿರುಗಾಟವು ಕಂಡುಬರುವುದು. ದೇಹಾಯಾಸವು ಕಂಡು ಬರುವುದು. ಕಾರ್ಯರಂಗದಲ್ಲಿ ಮುನ್ನಡೆ.
ಕರ್ಕ: ವಿದ್ಯಾಭ್ಯಾಸಿಗಳು ಹೆಚ್ಚಿನ ಪ್ರಗತಿ ಸಾಧಿಸಲಿದ್ದೀರಿ. ಅಧಿಕ ಪರಿಶ್ರಮವು ಬೇಕಾಗುವುದು. ನಿಮ್ಮ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಕಾಣಲಿದೆ. ಪುತ್ರನ ಪ್ರಗತಿ ಕಂಡು ಸಂತಸವಾಗಲಿದೆ. ಶುಭಕಾರ್ಯಕ್ಕೆ ನಾಂದಿ ಹಾಡಿರಿ.
ಸಿಂಹ: ದೂರ ಸಂಚಾರದ ಕೆಲಸ ಕಾರ್ಯಗಳು ಸ್ವಲ್ಪ ಹಿನ್ನಡೆ ಕಂಡಾವು. ಭೂಸಂಬಂಧಿ ವ್ಯವಹಾರಗಳು ಲಾಭಕರವಾದಾವು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕೃತಾರ್ಥರಾದಾರು. ಅದರೊಂದಿಗೆ ಉದ್ಯೋಗದ ಸಿಹಿ ವಾರ್ತೆ ಇದೆ.
ಕನ್ಯಾ: ವೃತ್ತಿರಂಗದಲ್ಲಿ ವ್ಯಕ್ತಿ ವಿಕಾಸ, ಸ್ವಜನ, ಬಂಧುವರ್ಗದವರ ಸಹಕಾರ ನಿಮ್ಮ ಮುನ್ನಡೆಗೆ ಕಾರಣವಾಗಲಿದೆ. ಹಿರಿಯರಿಂದ ಬಳುವಳಿಯಾಗಿ ಸ್ವಲ್ಪ ಹಣವೂ ಕೈ ಸೇರಲಿದೆ. ಮನೆಯಲ್ಲಿ ಪತ್ನಿ, ಮಕ್ಕಳಿಂದ ಸಂತಸವಿದೆ.
ತುಲಾ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಾಗೂ ಇನ್ನಿತರ ಕಾರ್ಯಗಳಲ್ಲೂ ಸಹ ಅಧಿಕ ರೀತಿಯಲ್ಲಿ ಧನವ್ಯಯ ಉಂಟಾಗಲಿದೆ. ತುಲನೆ ಮಾಡಿ ಜೀವನ ನಡೆಸುವ ಅಗತ್ಯವಿದೆ. ಅದರಿಂದ ಸಮತೋಲನ ಸಾಧಿಸುವಿರಿ. ಶುಭವಿದೆ.
ವೃಶ್ಚಿಕ: ಆರ್ಥಿಕವಾಗಿ ಏರುಪೇರು ಒಮ್ಮೊಮ್ಮೆ ಆತಂಕ ಪರಿಸ್ಥಿತಿಯನ್ನು ತಂದೊಡ್ಡಲಿದೆ. ಬಂಧುಜನರಿಂದ ಕಿರುಕುಳ ಅನುಭವಿಸಿ ಬೇಸರವಾದೀತು. ಮೌನಕ್ಕಿಂತ ಮಾತು ಲೇಸು ಎಂಬಂತೆ ವರ್ತಿಸಿರಿ. ಒಳ್ಳೆಯದಾದೀತು.
ಧನು: ಕಾರ್ಯ ಒತ್ತಡದಿಂದ ಮನಸ್ಸಿಗೆ ಸಮಾಧಾನವಿರದು. ಮಿತ್ರರು ವಿಮುಖರಾದಾರು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಅಡಚಣೆ ಕಂಡಾರು. ಮಿತ್ರರೊಂದಿಗೆ ಕಲಹ, ಮನಸ್ತಾಪಗಳು ಉಂಟಾಗಲಿದೆ. ಮುಂದುವರಿಯಿರಿ.
ಮಕರ: ವಾಹನ, ಸ್ಥಿರಾಸ್ತಿ ವ್ಯವಹಾರ ಮುಂತಾದವುಗಳಲ್ಲಿ ಪ್ರಗತಿ ಕಾಣುವಿರಿ. ಹಾಗೂ ಮುನ್ನಡೆಯಲು ಅವಕಾಶವನ್ನು ಗಳಿಸುವಿರಿ. ನೀವು ಚಿಂತಿಸಿದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾದೀತು.
ಕುಂಭ: ಮನೋವಿಕಾರತೆ, ಅಸ್ಥಿರತೆ, ಉದ್ವೇಗಕ್ಕೆ ಕಾರಣವಾಗಬಹುದು. ಚಿಂತಿತ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ವಿಳಂಬಗತಿಯಲ್ಲಿ ನಡೆದೀತು. ದೈವಾನುಗ್ರಹದಿಂದ ವೃತ್ತಿರಂಗದಲ್ಲಿ ಮುಂಭಡ್ತಿ ಇದೆ.
ಮೀನ: ವೃತ್ತಿರಂಗದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಂಡುಬರುವುದು. ನೀವು ಉತ್ತಮ ಕೆಲಸ ಮಾಡಿದರೂ ನಿಮಗೆ ಅಪಮಾನ, ಅವಮಾನಗಳು ಎದುರಾಗಲಿದೆ. ನಿರೀಕ್ಷಿತ ಕಾರ್ಯಸಾಧನೆಯಿಂದ ಸಂತೃಪ್ತಿ ಕಾಣುವಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ
MUST WATCH
ಹೊಸ ಸೇರ್ಪಡೆ
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್