ನಿಮ್ಮ ಗ್ರಹಬಲ: ಈ ರಾಶಿಯ ವಿವಾಹಾಪೇಕ್ಷಿಗಳಿಗೆ ಇಂದು ಉತ್ತಮ ಕನ್ಯೆ ದೊರೆತಾಳು
Team Udayavani, May 19, 2021, 7:18 AM IST
19-05-2021
ಮೇಷ: ಕಾರ್ಯಕ್ಷೇತ್ರದಲ್ಲಿ ಕಾರ್ಯ ಒತ್ತಡದಿಂದ ದ್ವಂದ್ವ ವಿಚಾರಗಳು ತೋರಿಬಂದಾವು. ಹಣಕಾಸಿನ ವಿಚಾರದಲ್ಲಿ ವಿವಾದಗಳು ಹುಟ್ಟು ಹಾಕಲಿದೆ. ಜಾಗ್ರತೆ ವಹಿಸಿರಿ. ಹಣವೇ ಮುಖ್ಯವಲ್ಲ. ಮಾನವೇ ಮುಖ್ಯವೆಂದು ತಿಳಿದಿರಲಿ.
ವೃಷಭ: ಪಾಲುದಾರಿಕೆಯ ವ್ಯವಹಾರವು ಸಲ್ಲದು. ಮಾಡಿದ್ದಲ್ಲಿ ಲೆಕ್ಕಚಾರವನ್ನು ಸರಿಯಾಗಿಟ್ಟುಕೊಂಡು ಮುನ್ನಡೆದರೆ ಉತ್ತಮ. ಕ್ರಯ-ವಿಕ್ರಯಗಳಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಆರ್ಥಿಕವಾಗಿ ಅಂತಹ ಉನ್ನತಿಯು ಗೋಚರಕ್ಕೆ ಬಾರದು.
ಮಿಥುನ: ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕೂಡಿಬಂದು ಮನಸ್ಸಿನ ಇಚ್ಛೆ ಪೂರೈಸುವುದು. ಸಾಂಸಾರಿಕವಾಗಿ ನೆಮ್ಮದಿಯು ಕಂಡುಬಂದೀತು. ಯೋಜನಾಬದ್ಧ ಕಾರ್ಯತಂತ್ರಗಳನ್ನು ರೂಪಿಸಿಕೊಂಡರೆ ಯಶಸ್ಸು ನಿಮ್ಮ ಪಾಲಿಗಿದೆ.
ಕರ್ಕ: ಹಣಕಾಸಿನ ವಿಚಾರದಲ್ಲಿ ಪ್ರಮಾದಕ್ಕೆ ಕಾರಣವಾಗದಂತೆ ಜಾಗ್ರತೆಯಾಗಿ ನಡೆಯಿರಿ. ಪ್ರಯಾಣವು ಕೂಡಿ ಬಂದರೆ ಅದು ಫಲ ನೀಡಲಿದೆ. ನಿರುದ್ಯೋಗಿಗಳ ಕನಸು ನನಸಾಗಲಿದೆ. ವಿವಾಹಾಪೇಕ್ಷಿಗಳಿಗೆ ಉತ್ತಮ ಕನ್ಯೆ ದೊರೆತಾಳು.
ಸಿಂಹ:ಆತ್ಮೀಯರ ಸಕಾಲಿಕ ನೆರವು ಹೆಚ್ಚಿನ ಕಾರ್ಯಸಿದ್ಧಿಗೆ ಸಾಧಕವಾಗುತ್ತದೆ. ದೇವರ ದರ್ಶನ ಭಾಗ್ಯದ ಅವಕಾಶವು ನಿಮಗೆ ನಿಧಾನವಾಗಿ ಕೂಡಿ ಬರುವುದು. ಮನಸ್ಸು ಮರ್ಕಟದಂತೆ ಚಂಚಲತೆಯನ್ನು ತೋರಿಸಲಿದೆ. ಮುನ್ನಡೆಯಿರಿ.
ಕನ್ಯಾ: ಮನೆಯಲ್ಲಿ ನಿಮ್ಮ ಹಠ, ಕೋಪ ಹಾಗೂ ಉದ್ವೇಗದಿಂದ ವಾತಾವರಣ ಕೆಡಲಿದೆ. ನೀವೇ ತೋರಿಸಿಕೊಳ್ಳುವ ಕೆಟ್ಟ ಕೋಪವು ನಿಮ್ಮ ಜೀವನವನ್ನು ನರಕ ಮಾಡಲಿದೆ. ವೈಯಕ್ತಿಕವಾಗಿ ಮಾತು ಕಡಿಮೆ ಮಾಡಿದರೆ ಉತ್ತಮ.
ತುಲಾ: ಗ್ರಹಗಳ ಪ್ರತಿಕೂಲತೆ ಆರ್ಥಿಕವಾಗಿ ಕಂಡು ಬಂದು ಮನಸ್ಸನ್ನು ದೃತಿಗೆಡಿಸಲಿದೆ. ಮನೆಯಲ್ಲಿ ಸುಖ ಸೌಭಾಗ್ಯ ವೃದ್ಧಿಯಾಗಲಿದೆ. ಮಹತ್ವದ ಕೆಲಸ ಕಾರ್ಯಗಳ ಚಿಂತನೆ ನಡೆದೀತು. ಉಷ್ಣ ಪಿತ್ತಾಧಿಕ್ಯ ದೇಹಾಯಾಸ ತರಲಿದೆ.
ವೃಶ್ಚಿಕ: ಬೆಳ್ಳಿ , ಚಿನ್ನದ ವರ್ತಕರಿಗೆ ಲಾಭಾಂಶ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ನಷ್ಟ ಸಂಭವಿಸಿ ಜೀವನ ನಿರ್ವಹಣೆಯು ಕಷ್ಟಕರವಾದೀತು. ಈತನ್ಮಧ್ಯೆ ಮಳೆಯು ಬಂದು ಬೆಳೆಗಳ ನಷ್ಟ ಸಂಭವಿಸಿ ದುಬಾರಿಯಾದಾವು.
ಧನು: ಬೇಸಾಯ, ಕೃಷಿಕ ಹಾಗೂ ಗೊಬ್ಬರ ವರ್ತಕರಿಗೆ ನಷ್ಟ ಸಂಭವಿಸಲಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾದೀತು. ಹಾಗಾಗಿ ತುಂಬಾ ಜಾಗ್ರತೆ ವಹಿಸಬೇಕಾದೀತು. ವಿದ್ಯಾಭ್ಯಾಸದಲ್ಲಿ ಮುನ್ನಡೆ ಇದ್ದೀತು.
ಮಕರ: ಅಲರ್ಜಿ ಪೀಡೆಯಿಂದ ಅನಾರೋಗ್ಯದ ಸಾಧ್ಯತೆ ಕಂಡುಬಂದೀತು. ಹಾಲು, ದಿನಸಿ, ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ನಷ್ಟವಾಗದು. ಸಾಮಾಜಿಕವಾಗಿ ಸಕಾಲಿಕ ಪ್ರತಿಭೆ ಯಶಸ್ಸನ್ನು ಗೌರವವನ್ನು ದ್ವಿಗುಣಗೊಳಿಸಲಿದೆ.
ಕುಂಭ: ವೃತ್ತಿರಂಗದಲ್ಲಿ ದೃಢ ನಿರ್ಧಾರಗಳು, ಆಜ್ಞಾಧೋರಣೆಯ ಪ್ರವೃತ್ತಿ ಅಗತ್ಯವೆನಿಸಿದರೂ ಹೊಂದಾಣಿಕೆಯ ಮನೋಭಾವವು ಬೇಕಾದೀತು. ನೀವು ನಿರೀಕ್ಷಿಸಿದ ಫಲವು ನಿಮಗೆ ಸಿಗಲಿದೆ. ನಿಧಾನವಾಗಿಯಾದರೂ ಸಿಗಲೇ ಬೇಕು.
ಮೀನ: ಕಾರ್ಯಕ್ಷೇತ್ರದಲ್ಲಿ ಚಟುವಟಿಕೆ ಸ್ಥಗಿತಗೊಂಡರೂ ಆದಾಯಕ್ಕೆ ಕೊರತೆ ಬಾರದು. ಸತಿ-ಪತಿಯರೊಳಗೆ ಅನ್ಯೋನ್ಯತೆಗೆ ಭಂಗ ತಂದೀತು. ವಿಳಂಬ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು ತಂದೀತು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ