ನಿಮ್ಮ ಗ್ರಹಬಲ:  ಈ ರಾಶಿಯ ವಿವಾಹಾಪೇಕ್ಷಿಗಳಿಗೆ ಇಂದು ಉತ್ತಮ ಕನ್ಯೆ ದೊರೆತಾಳು


Team Udayavani, May 19, 2021, 7:18 AM IST

ನಿಮ್ಮ ಗ್ರಹಬಲ:  ಈ ರಾಶಿಯ ವಿವಾಹಾಪೇಕ್ಷಿಗಳಿಗೆ ಉತ್ತಮ ಕನ್ಯೆ ದೊರೆತಾಳು

19-05-2021

ಮೇಷ: ಕಾರ್ಯಕ್ಷೇತ್ರದಲ್ಲಿ ಕಾರ್ಯ ಒತ್ತಡದಿಂದ ದ್ವಂದ್ವ ವಿಚಾರಗಳು ತೋರಿಬಂದಾವು. ಹಣಕಾಸಿನ ವಿಚಾರದಲ್ಲಿ ವಿವಾದಗಳು ಹುಟ್ಟು ಹಾಕಲಿದೆ. ಜಾಗ್ರತೆ ವಹಿಸಿರಿ. ಹಣವೇ ಮುಖ್ಯವಲ್ಲ. ಮಾನವೇ ಮುಖ್ಯವೆಂದು ತಿಳಿದಿರಲಿ.

ವೃಷಭ: ಪಾಲುದಾರಿಕೆಯ ವ್ಯವಹಾರವು ಸಲ್ಲದು. ಮಾಡಿದ್ದಲ್ಲಿ ಲೆಕ್ಕಚಾರವನ್ನು ಸರಿಯಾಗಿಟ್ಟುಕೊಂಡು ಮುನ್ನಡೆದರೆ ಉತ್ತಮ. ಕ್ರಯ-ವಿಕ್ರಯಗಳಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಆರ್ಥಿಕವಾಗಿ ಅಂತಹ ಉನ್ನತಿಯು ಗೋಚರಕ್ಕೆ ಬಾರದು.

ಮಿಥುನ: ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕೂಡಿಬಂದು ಮನಸ್ಸಿನ ಇಚ್ಛೆ ಪೂರೈಸುವುದು. ಸಾಂಸಾರಿಕವಾಗಿ ನೆಮ್ಮದಿಯು ಕಂಡುಬಂದೀತು. ಯೋಜನಾಬದ್ಧ ಕಾರ್ಯತಂತ್ರಗಳನ್ನು ರೂಪಿಸಿಕೊಂಡರೆ ಯಶಸ್ಸು ನಿಮ್ಮ ಪಾಲಿಗಿದೆ.

ಕರ್ಕ: ಹಣಕಾಸಿನ ವಿಚಾರದಲ್ಲಿ ಪ್ರಮಾದಕ್ಕೆ ಕಾರಣವಾಗದಂತೆ ಜಾಗ್ರತೆಯಾಗಿ ನಡೆಯಿರಿ. ಪ್ರಯಾಣವು ಕೂಡಿ ಬಂದರೆ ಅದು ಫ‌ಲ ನೀಡಲಿದೆ. ನಿರುದ್ಯೋಗಿಗಳ ಕನಸು ನನಸಾಗಲಿದೆ. ವಿವಾಹಾಪೇಕ್ಷಿಗಳಿಗೆ ಉತ್ತಮ ಕನ್ಯೆ ದೊರೆತಾಳು.

ಸಿಂಹ:ಆತ್ಮೀಯರ ಸಕಾಲಿಕ ನೆರವು ಹೆಚ್ಚಿನ ಕಾರ್ಯಸಿದ್ಧಿಗೆ  ಸಾಧಕವಾಗುತ್ತದೆ. ದೇವರ ದರ್ಶನ ಭಾಗ್ಯದ ಅವಕಾಶವು ನಿಮಗೆ ನಿಧಾನವಾಗಿ ಕೂಡಿ ಬರುವುದು. ಮನಸ್ಸು ಮರ್ಕಟದಂತೆ ಚಂಚಲತೆಯನ್ನು ತೋರಿಸಲಿದೆ. ಮುನ್ನಡೆಯಿರಿ.

ಕನ್ಯಾ: ಮನೆಯಲ್ಲಿ ನಿಮ್ಮ ಹಠ, ಕೋಪ ಹಾಗೂ ಉದ್ವೇಗದಿಂದ ವಾತಾವರಣ ಕೆಡಲಿದೆ. ನೀವೇ ತೋರಿಸಿಕೊಳ್ಳುವ ಕೆಟ್ಟ ಕೋಪವು ನಿಮ್ಮ ಜೀವನವನ್ನು ನರಕ ಮಾಡಲಿದೆ. ವೈಯಕ್ತಿಕವಾಗಿ ಮಾತು ಕಡಿಮೆ ಮಾಡಿದರೆ ಉತ್ತಮ.

ತುಲಾ: ಗ್ರಹಗಳ ಪ್ರತಿಕೂಲತೆ ಆರ್ಥಿಕವಾಗಿ ಕಂಡು ಬಂದು ಮನಸ್ಸನ್ನು ದೃತಿಗೆಡಿಸಲಿದೆ. ಮನೆಯಲ್ಲಿ ಸುಖ ಸೌಭಾಗ್ಯ ವೃದ್ಧಿಯಾಗಲಿದೆ. ಮಹತ್ವದ ಕೆಲಸ ಕಾರ್ಯಗಳ ಚಿಂತನೆ ನಡೆದೀತು. ಉಷ್ಣ ಪಿತ್ತಾಧಿಕ್ಯ ದೇಹಾಯಾಸ ತರಲಿದೆ.

ವೃಶ್ಚಿಕ: ಬೆಳ್ಳಿ , ಚಿನ್ನದ ವರ್ತಕರಿಗೆ ಲಾಭಾಂಶ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ನಷ್ಟ ಸಂಭವಿಸಿ ಜೀವನ ನಿರ್ವಹಣೆಯು ಕಷ್ಟಕರವಾದೀತು. ಈತನ್ಮಧ್ಯೆ ಮಳೆಯು ಬಂದು ಬೆಳೆಗಳ ನಷ್ಟ ಸಂಭವಿಸಿ ದುಬಾರಿಯಾದಾವು.

ಧನು: ಬೇಸಾಯ, ಕೃಷಿಕ ಹಾಗೂ ಗೊಬ್ಬರ ವರ್ತಕರಿಗೆ ನಷ್ಟ ಸಂಭವಿಸಲಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾದೀತು. ಹಾಗಾಗಿ ತುಂಬಾ ಜಾಗ್ರತೆ ವಹಿಸಬೇಕಾದೀತು. ವಿದ್ಯಾಭ್ಯಾಸದಲ್ಲಿ ಮುನ್ನಡೆ ಇದ್ದೀತು.

ಮಕರ: ಅಲರ್ಜಿ ಪೀಡೆಯಿಂದ ಅನಾರೋಗ್ಯದ ಸಾಧ್ಯತೆ ಕಂಡುಬಂದೀತು. ಹಾಲು, ದಿನಸಿ, ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ನಷ್ಟವಾಗದು. ಸಾಮಾಜಿಕವಾಗಿ ಸಕಾಲಿಕ ಪ್ರತಿಭೆ ಯಶಸ್ಸನ್ನು ಗೌರವವನ್ನು ದ್ವಿಗುಣಗೊಳಿಸಲಿದೆ.

ಕುಂಭ: ವೃತ್ತಿರಂಗದಲ್ಲಿ ದೃಢ ನಿರ್ಧಾರಗಳು, ಆಜ್ಞಾಧೋರಣೆಯ ಪ್ರವೃತ್ತಿ ಅಗತ್ಯವೆನಿಸಿದರೂ ಹೊಂದಾಣಿಕೆಯ ಮನೋಭಾವವು ಬೇಕಾದೀತು. ನೀವು ನಿರೀಕ್ಷಿಸಿದ ಫ‌ಲವು ನಿಮಗೆ ಸಿಗಲಿದೆ. ನಿಧಾನವಾಗಿಯಾದರೂ ಸಿಗಲೇ ಬೇಕು.

ಮೀನ: ಕಾರ್ಯಕ್ಷೇತ್ರದಲ್ಲಿ ಚಟುವಟಿಕೆ ಸ್ಥಗಿತಗೊಂಡರೂ ಆದಾಯಕ್ಕೆ ಕೊರತೆ ಬಾರದು. ಸತಿ-ಪತಿಯರೊಳಗೆ ಅನ್ಯೋನ್ಯತೆಗೆ ಭಂಗ ತಂದೀತು. ವಿಳಂಬ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು ತಂದೀತು.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.