ಇಂದಿನ ಗ್ರಹಬಲ: ಯಾರಿಗೆ ಶುಭ? ಯಾರಿಗೆ ಲಾಭ?
Team Udayavani, Jun 1, 2021, 7:26 AM IST
01-06-2021
ಮೇಷ: ನಿಮ್ಮ ಆಪ್ತರು ಬೇಜವಾಬ್ದಾರಿಯಿಂದ ವರ್ತಿಸಬಹುದು. ಅದರ ಹೊಣೆಗೇಡಿತನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಎಚ್ಚರದಿಂದಿರಿ. ಅನಿರೀಕ್ಷಿತ ದೂರ ಸಂಚಾರದ ಸಾಧ್ಯತೆ ಕಾರ್ಯಾನುಕೂಲವಾಗಲಿದೆ.
ವೃಷಭ: ಸಾಮಾಜಿಕ ಚಟುವಟಿಕೆಗಳಲ್ಲಿ ಬಹು ಚುರುಕಾಗಿ ಕೆಲಸ ಮಾಡಲಿದ್ದೀರಿ. ಯಾವುದೇ ಕೆಲಸ ಮಾಡುವ ಮುನ್ನ ದುಡುಕದೆ ಪೂರ್ವ ತಯಾರಿಯ ಅಗತ್ಯವಿದೆ. ಗೆಳೆಯರ ಬಳಗವು ಬಹಳ ದೊಡ್ಡದಾದೀತು.
ಮಿಥುನ: ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ಮಾಡುವುದು. ನಿಮ್ಮ ಸ್ಫೂರ್ತಿಯು ನಿಮ್ಮನ್ನು ಮುನ್ನಡೆಸಿ ವಿಜಯದ ಪಥದತ್ತ ಸಾಗಿಸಲಿದೆ. ಬ್ಯಾಂಕ್, ಫೈನಾನ್ಸ್ಗಳಲ್ಲಿ ಆದಾಯ ವೃದ್ಧಿ ಇದೆ.
ಕರ್ಕ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯು ಹೆಚ್ಚಲಿದೆ. ಅವಿವಾಹಿತರಿಗೆ ಮಾತುಕತೆಯಿಂದ ವೈವಾಹಿಕ ಸಂಬಂಧವು ಕುದುರಲಿದೆ. ಕೆಲವೊಂದು ಅದ್ಭುತ ಹೊಳಹುಗಳು ನಿಮ್ಮ ಗೋಚರಕ್ಕೆ ಬರಲಿದೆ.
ಸಿಂಹ: ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ವಿಶ್ವಾಸವಿರಲಿ. ಮೇಲಾಧಿಕಾರಿಗಳಿಂದ ಮೆಚ್ಚುಗೆ ಗಳಿಸಲಿದ್ದೀರಿ. ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು, ಸೂಕ್ತ ಸ್ಥಾನಮಾನವು ನಿಮ್ಮದಾಗಲಿದೆ. ಗೃಹದಲ್ಲಿ ಮಂಗಲಕಾರ್ಯದ ತಯಾರಿ.
ಕನ್ಯಾ: ಭವಿಷ್ಯಕ್ಕೆ ಒಳ್ಳೆಯ ಯೋಜನೆ ರೂಪಿಸಲು ಇದು ಸಕಾಲವೆನ್ನಬಹುದು. ಆಗಾಗ ಅನಿರೀಕ್ಷಿತ ಖರ್ಚುವೆಚ್ಚಗಳು ಬಂದೊದಗಬಹುದು. ಉಳಿತಾಯದ ಹೆಚ್ಚಳಕ್ಕೆ ಗಮನ ನೀಡಿರಿ. ಮುಂದಕ್ಕೆ ಉಪಯೋಗವಿದೆ.
ತುಲಾ: ನಿಮ್ಮ ಉದಾಸೀನತೆಯ ವಿಳಂಬ ನೀತಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ. ಶೇರು, ಬಿಜಿನೆಸ್, ಲಾಟರಿ ಫೈನಾನ್ಸ್ಗಳ ಬಗ್ಗೆ ಭರವಸೆ ಬೇಡ. ವಿದ್ಯಾರ್ಥಿಗಳಿಗೆ ಫಲಿತಾಂಶದಿಂದ ನಿರಾಸೆ.
ವೃಶ್ಚಿಕ: ಗೃಹಿಣಿಗೆ ಅನಾವಶ್ಯಕವಾಗಿ ಉದ್ವೇಗ, ಕೋಪ-ತಾಪಗಳು ಹೆಚ್ಚಾದೀತು. ಆರೋಗ್ಯದ ಕಡೆ ಗಮನಹರಿಸುವುದು ಉತ್ತಮ. ಕೆಲವೊಮ್ಮೆ ವಿಷವೂ ಅಮೃತವಾದೀತು. ವೃತ್ತಿಯಲ್ಲಿ ಸ್ತ್ರೀ ಮೂಲಕ ಅಪವಾದ ಭೀತಿ.
ಧನು: ಯಾವುದಕ್ಕೂ ನಿಧಾನಗತಿಯ ದಿನಗಳಿವು. ವೃತ್ತಿರಂಗದಲ್ಲಿ ಆಶಾಭಂಗವಾಗಲಿದ್ದರೂ ಕಾರ್ಯಸಿದ್ಧಿಯಿಂದ ನೆಮ್ಮದಿ ಸಿಗಲಿದೆ. ಮಕ್ಕಳ ವೈವಾಹಿಕ ಸಂಬಂಧ ವಿಚಾರದಲ್ಲಿ ಮಾತುಕತೆಯು ಮಂಗಲ ಹಾಡಲಿದೆ.
ಮಕರ: ನೀವು ಬಯಸಿದ್ದು ದೊರಕಲಾರದು. ಆ ಬಗ್ಗೆ ಕೊರಗುತ್ತಾ ಕೂರಬೇಡಿರಿ. ಮುಂದಿನ ಯೋಜನೆಗೆ ಕಾರ್ಯರೂಪಿಸಿರಿ. ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಆಶಾವಾದಿಗಳಾಗಿರಿ. ಭರವಸೆಯನ್ನಿಡಿರಿ.
ಕುಂಭ: ಸರಕಾರೀ ಕೆಲಸ ಕಾರ್ಯಗಳು ಕಾರ್ಯ ರೂಪಕ್ಕೆ ಬರಲಿದೆ. ಸಂಬಂಧಗಳನ್ನು ಜತನ ದಿಂದ ಕಾಯ್ದುಕೊಳ್ಳಿರಿ. ಸಂಬಂಧ ಕೆಡಿಸುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಂಡರೆ ಉತ್ತಮ.
ಮೀನ: ಅವಿವಾಹಿತರಿಗೆ ವಿವಾಹಯೋಗ ತಡೆ-ತೊಂದರೆಗಳಿಂದಲೇ ಕಾರ್ಯಸಿದ್ಧಿಯಾಗಲಿದೆ. ಆರೋಗ್ಯದ ಕಡೆ ಗಮನ ಅಗತ್ಯವಿದೆ. ಸಾಂಸಾರಿಕವಾಗಿ ಕಲಹ, ಭಿನ್ನಾಭಿಪ್ರಾಯಗಳಿಗೆ ಬಲಿಯಾಗದಿರಿ. ಶುಭವಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ
Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ
MUST WATCH
ಹೊಸ ಸೇರ್ಪಡೆ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?