ಇಂದಿನ ಗ್ರಹಬಲ: ಈ ರಾಶಿಯವರಿಂದು ವಂಚನೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ
Team Udayavani, Jun 10, 2021, 7:12 AM IST
10-06-2021
ಮೇಷ: ಕೌಟುಂಬಿಕವಾಗಿ ಬಂಧುಮಿತ್ರರ ಓಲೈಕೆ ಹಿತವೆನಿಸೀತು. ಕೆಲವೊಂದು ವಿಚಾರಗಳ ಬಗ್ಗೆ ಗೊಂದಲಗಳು ಇರಬಹುದು. ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯವಾಗಿದೆ. ಹಣಕಾಸಿನ ಬಗ್ಗೆ ಜಾಗ್ರತೆ ಮಾಡಿರಿ.
ವೃಷಭ: ಖರ್ಚುಗಳ ವಿಷಯದಲ್ಲೂ ಜಾಗ್ರತೆ ಇರಲಿ. ಸಾಮಾಜಿಕ ಸಂಪರ್ಕಗಳನ್ನು ಗಟ್ಟಿಗೊಳಿಸಿಕೊಳ್ಳಿರಿ. ವಾರದ ಆರಂಭದಲ್ಲಿ ದೂರ ಸಂಚಾರದ ಸಾಧ್ಯತೆ ತಂದೀತು. ಅವಿವಾಹಿತರು ಆಯ್ಕೆ ಪರಿಶೀಲಿಸಿ ಮುನ್ನಡೆಯಿರಿ.
ಮಿಥುನ: ಆರೋಗ್ಯವು ಎಲ್ಲಾ ವಿಚಾರಗಳಿಗಿಂತ ಹೆಚ್ಚು ಎಂಬುದನ್ನು ಅರಿತುಕೊಳ್ಳಿರಿ. ಅನಿರೀಕ್ಷಿತ ಶುಭ ಸಮಾಚಾರದಿಂದ ಕಾರ್ಯಸಿದ್ಧಿಯಾಗಲಿದೆ. ಕಾರ್ಯರಂಗದಲ್ಲಿ ಸ್ವಯಂಪ್ರಜ್ಞೆ ಯಾ ಪ್ರಯತ್ನಬಲಕ್ಕೆ ಒತ್ತು ನೀಡಿರಿ.
ಕರ್ಕ: ಸಣ್ಣ ಸಣ್ಣ ವಿಚಾರದಲ್ಲಿ ಉದ್ವೇಗ, ಅಸಹನೆಗೆ ಬಲಿಯಾಗದಿರಿ. ನಿರುದ್ಯೋಗಿಗಳಿಗೆ ಉದೋಗ ಲಾಭ ತೋರಿ ಬಂದು ಸಮಾಧಾನ ತರಲಿದೆ. ಹಣಕಾಸಿನ ವಿಚಾರದಲ್ಲಿ ಆಗಾಗ ಆತಂಕಕ್ಕೆ ಕಾರಣವಾಗದಂತೆ ಎಚ್ಚರ ವಹಿಸಿರಿ.
ಸಿಂಹ: ನೀವು ವಂಚನೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಕ್ರಯ ವಿಕ್ರಯದಲ್ಲಿ ತುಸು ಲಾಭ ಕಂಡುಬಂದು ಸಮಾಧಾನವಿದೆ. ಗುರುಬಲದಿಂದ ಅದೃಷ್ಟದ ಆಸರೆ ನಿಮ್ಮ ಪಾಲಿಗಿದೆ. ಎಣಿಕೆಗಳೆಲ್ಲಾ ಈಡೇರಲಿದೆ.
ಕನ್ಯಾ: ಧೈರ್ಯ, ಪ್ರಯತ್ನಬಲದಿಂದ ಕಾರ್ಯ ಸಾಧಿಸಿದರೆ ಯಶಸ್ಸು ನಿಮ್ಮ ಪಾಲಿಗಿದೆ. ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಮುನ್ನಡೆಯಿರಿ. ಆಗಾಗ ಭಿನ್ನಾಭಿಪ್ರಾಯದಿಂದ ಕಾರ್ಯ ಸಾಧಿಸುವುದು ಕಷ್ಟವಾದೀತು.
ತುಲಾ: ಅವಿವಾಹಿತರಿಗೆ ವೈವಾಹಿಕ ಜೋಡಣೆ ಸಂತಸ ತಂದೀತು. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ತಂದರೂ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ನಿಗಾ ವಹಿಸಿರಿ. ಉದ್ಯೋಗ, ಕಾರ್ಯರಂಗದಲ್ಲಿ ಸಮರ್ಪಕವಾಗಿ ಮುನ್ನಡೆಯಿರಿ.
ವೃಶ್ಚಿಕ: ಸಾಂಸಾರಿಕವಾಗಿ ಆತ್ಮೀಯರು ಮಧ್ಯಸ್ಥಿಕೆ ವಹಿಸಬೇಕಾದ ಸಂಧಿಗ್ಧತೆ ಕಂಡು ಬಂದೀತು. ತ್ರಾಸದಾಯಕವಾಗಲಿರುವ ನ್ಯಾಯಾಲಯದ ಪ್ರಕರಣವು ಕಿರಿಕಿರಿಯೆನಿಸಲಿದೆ. ಆದಾಯ ವ್ಯತ್ಯಯದಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದೀತು.
ಧನು: ಹಿರಿಯರ ಅಭಿಪ್ರಾಯ ಭೇದದಿಂದ ಶುಭಮಂಗಲ ಕಾರ್ಯಗಳು ವಿಳಂಬವಾಗುತ್ತವೆ. ಗೃಹದಲ್ಲಿ ಅಧಿಕ ರೂಪದಲ್ಲಿ ಖರ್ಚುಗಳು ತೋರಿಬರಲಿವೆ. ಅವಕಾಶಗಳು ಕೂಡಿ ಬರಲು ನಿಧಾನವಾದರೂ ನಿಶ್ಚಿತ ರೂಪದಲ್ಲಿ ಅಭಿವೃದ್ಧಿ ಇದೆ.
ಮಕರ: ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ತಂದೀತು. ವಿಶ್ವಾಸದ ದುರುಪಯೋಗವಾಗದಂತೆ ಗಮನಹರಿಸ ಬೇಕಾಗುತ್ತದೆ. ಅವಿವಾಹಿತರ ಪ್ರಯತ್ನಬಲಕ್ಕೆ ಉತ್ತರ ಸಿಗಲಿದೆ.
ಕುಂಭ: ಅನಾವಶ್ಯಕವಾಗಿ ಸಮಯ ವ್ಯರ್ಥವಾಗದಂತೆ ಕಾಳಜಿ ವಹಿಸಿದರೆ ಉತ್ತಮ. ದಾಂಪತ್ಯ ಜೀವನವು ಸಮಾಧಾನಕರವಾಗಲಿದೆ. ನಿರೀಕ್ಷಿತ ರೀತಿಯಲ್ಲಿ ಕೆಲಸಕಾರ್ಯಗಳು ನಡೆದರೂ ಕಿರಿಕಿರಿಯು ತಪ್ಪಲಾರದು. ಜಾಗ್ರತೆ ಮಾಡುವುದು.
ಮೀನ: ಯಾವುದೇ ವಿಚಾರದಲ್ಲಿ ನಿರಾಸೆಗೊಳ್ಳದಿರಿ. ಹಣಕಾಸಿನ ಸ್ಥಿತಿಯು ಆಗಾಗ ಏರುಪೇರಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ವಿದ್ಯಾರ್ಥಿಗಳ ನಿರೀಕ್ಷೆಯ ಫಲವು ಸದ್ಯದ ಸ್ಥಿತಿಯಲ್ಲಿ ತೃಪ್ತಿದಾಯಕವಾಗಲಾರದು. ಮುನ್ನಡೆಯಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ