ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡುವುದು ತುಂಬಾ ಮುಖ್ಯ
Team Udayavani, Oct 17, 2021, 7:55 AM IST
ಮೇಷ: ದೈಹಿಕ ಆರೋಗ್ಯ ಉತ್ತಮ. ಉದ್ಯೋಗ ವ್ಯವಹಾರಗಳಲ್ಲಿ ದುಃಖ, ಮೋಸ, ವಂಚನೆ, ಚರ್ಚೆ ಇತ್ಯಾದಿ ಗಳು ಆಗದಂತೆ ಎಚ್ಚರಿಕೆಯ ನಡೆ ಅಗತ್ಯ. ವಿಳಂಬದ ತಾಳ್ಮೆಯ ನಿರ್ಣಯದಿಂದ ಸುಖ ಫಲ ಒದಗೀತು. ಧನಸಂಪತ್ತಿನ ವೃದ್ಧಿ.
ವೃಷಭ: ಧೈರ್ಯದಿಂದ ಕೂಡಿದ ದಿನ. ವಿದ್ಯೆ ವಿನಯ ನಡೆಯಿಂದ ಸ್ಥಾನಮಾನ ವೃದ್ಧಿ. ನಿರೀಕ್ಷೆಗೂ ಮೀರಿದ ಧನ ಸಂಪತ್ತು ಲಭ್ಯ. ಸಂಪೂರ್ಣ ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲ ಕೆಲಸ ಕಾರ್ಯಗಳಲ್ಲೂ ಶ್ರೇಯಸ್ಸು. ಕೀರ್ತಿ ಲಭ್ಯ.
ಮಿಥುನ: ಆರೋಗ್ಯ ಗಮನಿಸಿ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ನಿರೀಕ್ಷಿತ ಸುಖ ಅನುಭವವಾದೀತು. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಅಧ್ಯಯನಶೀಲರಿಗೆ ಮನ್ನಣೆ.
ಕಟಕ: ಹಠ ಪ್ರವೃತ್ತಿಯಿಂದ ತೊಂದರೆ ಸಾಧ್ಯ. ಅನಗತ್ಯ ವಿಚಾರಗಳಿಗೆ ಕಿವಿ ಕೊಡದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಹೆಚ್ಚಿನ ಪರಿಶ್ರಮದಿಂದ ಕೂಡಿದ ಉದ್ಯೋಗ ವ್ಯವಹಾರದಿಂದ ದೇಹಾಯಾಸ ಸಂಭವ.
ಸಿಂಹ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿಖರತೆ. ಚುರುಕುತನ ಲೆಕ್ಕಾಚಾರ ಸ್ವಭಾವದಿಂದ ನಿರೀಕ್ಷಿತ ಸ್ಥಾನ ಅಧಿಕಾರ ಲಭ್ಯ. ಧನಾರ್ಜನೆ ಮಧ್ಯಮ. ಬಂಧುಮಿತ್ರರ ಸಹಕಾರ. ಹಿರಿಯರ ಆರೋಗ್ಯ ಗಮನಿಸಿ.
ಕನ್ಯಾ: ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಕಾಲ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಹಿರಿಯರ ಆರೋಗ್ಯ ಸುದೃಢ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ ಸಂತೋಷ.
ತುಲಾ: ಅತಿಯಾದ ಆತ್ಮಾಭಿಮಾನ ಸಲ್ಲದು. ತಾಳ್ಮೆ ಸಹನೆಯಿಂದ ನಡೆ ಹೆಚ್ಚಿನ ಪ್ರಗತಿ ಗೌರವ ಪ್ರಾಪ್ತಿ. ಧನಾರ್ಜನೆಗೆ ಸರಿಸಮವಾದ ಖರ್ಚು ತೋರೀತು. ಗುರುಹಿರಿಯರಿಂದ ಪ್ರಾಪ್ತವಾದ ಉತ್ತಮ ಮಾರ್ಗದರ್ಶನ.
ವೃಶ್ಚಿಕ: ಗುರುಹಿರಿಯರ ಸಹಕಾರದಿಂದ ಸುಖವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿ. ಬುದ್ಧಿವಂತಿಕೆ ಯಿಂದ ಕೂಡಿದ ಕಾರ್ಯವೈಖರಿ. ಪರಿಶ್ರಮಕ್ಕೆ ತಕ್ಕ ಧನಾರ್ಜನೆ ಪ್ರಾಪ್ತಿ. ಭೂಮಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ.
ಧನು: ದೀರ್ಘ ಪ್ರಯಾಣ. ಉದ್ಯೋಗ ವ್ಯವಹಾರ ದಲ್ಲಿ ಪ್ರಗತಿ. ಆದರೆ ದೇಹಾಯಾಸ ಸಂಭವ. ಸಹೋದ್ಯೋಗಿಗಳ ಸಹಕಾರ ಪರಿಶ್ರಮದಿಂದ ಕಾರ್ಯ ಸಫಲತೆ. ಗೃಹೋಪವಸ್ತುಗಳ ಸಂಗ್ರಹಕ್ಕೆ ಅಧಿಕ ಧನವ್ಯಯ ಸಂಭವ.
ಮಕರ: ದೈಹಿಕ ಮಾನಸಿಕ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ. ಜನಮನ್ನಣೆ ಗೌರವಾದಿ ವೃದ್ಧಿ. ಅಧಿಕ ಧನ ಸಂಚಯನ. ಮಕ್ಕಳಿಂದ ಸುಖ ಸಂತೋಷ. ಸಣ್ಣ ಪ್ರಯಾಣ ಸಂಭವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್