ಫೆಬ್ರವರಿ 08 : ಶನಿವಾರದ ದ್ವಾದಶ ರಾಶಿ ಭವಿಷ್ಯ ಹೀಗಿದೆ
Team Udayavani, Feb 8, 2020, 5:06 AM IST
ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.
ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.
ಅದಕ್ಕೆ ಉತ್ತಮ ಗುರುವಿನ- ಜ್ಯೋತಿಷಿಯ ಮಾರ್ಗದರ್ಶನದ ಅಗತ್ಯ ಇರುತ್ತದೆ. ಆ ಉತ್ತಮ ಗುರುವನ್ನು ಗುರುತಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಇಲ್ಲಿರುವ ದಿನ ಭವಿಷ್ಯ ತಿಳಿದು, ನಿಮಗೆ ಅನುಕೂಲ ಆದಲ್ಲಿ ಅಷ್ಟೇ ಸಾಕು.
ಜ್ಯೋತಿಷ್ಯದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444
ಮೇಷ ರಾಶಿ
ಉದ್ಯಮಿಗಳು, ವ್ಯಾಪಾರಿಗಳಿಗೆ ಲಾಭದಾಯಕ ದಿನ. ಗೃಹಾಲಂಕಾರ ವಸ್ತುಗಳ ಖರೀದಿಗೆ ಮನಸು ಮಾಡಲಿದ್ದೀರಿ. ಮಕ್ಕಳ ಮದುವೆ ವಿಚಾರವಾಗಿ ಮುಖ್ಯವಾದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಔತಣ ಕೂಟಕ್ಕೆ ಕರೆ ಬರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅಥವಾ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶಗಳು ದೊರೆಯಲಿವೆ.
ವೃಷಭ ರಾಶಿ
ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ, ಗೌರವ ಪಡೆಯುವ ಅವಕಾಶ ಇದೆ. ತಾಯಿಯ ಮನೆ ಕಡೆಯ ಸಂಬಂಧಿಕರ ಜತೆ ಒಟ್ಟಿಗೆ ಸಮಯ ಕಳೆಯಲಿದ್ದೀರಿ. ಒಂದು ರೀತಿಯಲ್ಲಿ ಪ್ರಶಾಂತವಾಗಿ ದಿನ ಕಳೆಯಲಿದೆ. ವಿದೇಶ ಪ್ರಯಾಣದ ತಯಾರಿಯಲ್ಲಿ ಇರುವವರಿಗೆ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.
ಮಿಥುನ ರಾಶಿ
ತಂದೆಯ ಜತೆಗೆ ಉತ್ತಮ ಬಾಂಧವ್ಯ ಏರ್ಪಡಲಿದೆ. ಅದೃಷ್ಟದ ಪರೀಕ್ಷೆ ಮಾಡುವವರಿಗೆ ಅದೃಷ್ಟ ಕೈ ಹಿಡಿಯಲಿದೆ. ದ್ರವ ಆಹಾರ ಸೇವನೆ ಹೆಚ್ಚು ಮಾಡಲಿದ್ದೀರಿ. ಅನವಶ್ಯಕ ಖರ್ಚನ್ನು ತಡೆಯುವ ಅಗತ್ಯ ಇದೆ. ನಿಮಗಿಂತ ಹಿರಿಯರ ಜತೆಗೆ ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇರಲಿ.
ಕರ್ಕಾಟಕ ರಾಶಿ
ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಹೊಸ ವ್ಯಕ್ತಿಗಳ ಜತೆ ಮಾತುಕತೆ ನಡೆಸುವಾಗ ನಿಗಾ ಇರಲಿ. ಆರೋಗ್ಯ ಬಾಧೆಗಳು ಇದ್ದಲ್ಲಿ ಉಲ್ಬಣ ಆಗಬಹುದು. ಅಂಥ ಸಂದರ್ಭದಲ್ಲಿ ಕಡ್ಡಾಯವಾಗಿ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಿ. ಹೆಚ್ಚಿನ ಖರ್ಚು, ಅದರಿಂದ ಬೇಸರ ಇದೆ.
ಸಿಂಹ ರಾಶಿ
ವೈವಾಹಿಕ ಜೀವನ ಸಂತುಷ್ಟವಾಗಿರುತ್ತದೆ. ಪಾರ್ಟನರ್ ಷಿಪ್ ವ್ಯವಹಾರಗಳಿಗೆ ಉತ್ತಮವಾದ ದಿನವಿದು. ವಾಹನ, ಬಟ್ಟೆ- ಒಡವೆ ಖರೀದಿ ಇತ್ಯಾದಿಗಾಗಿ ಖರ್ಚು ಮಾಡಲಿದ್ದೀರಿ. ವಿವಿಧ ಬಗೆಯ ಭೋಜನಗಳನ್ನು ಸವಿಯುವ ಯೋಗ ಇದೆ. ಹಳೆಯ ಗೆಳೆಯ/ಗೆಳತಿಯರನ್ನು ಭೇಟಿ ಮಾಡಲಿದ್ದೀರಿ.
ಕನ್ಯಾ ರಾಶಿ
ಮಕ್ಕಳ ವಿಚಾರದಲ್ಲಿ ಕೊಂಚ ಚಿಂತೆ ಎದುರಾಗಲಿದೆ. ಅಂದುಕೊಂಡದ್ದಕ್ಕಿಂತ ಹೆಚ್ಚಿನ ಖರ್ಚಾಗಲಿದೆ. ಈ ದಿನ ಮರೆವು ನಿಮ್ಮನ್ನು ಕಾಡಲಿದೆ. ಸೆಕ್ಯೂರಿಟಿ, ಪೊಲೀಸ್, ರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ. ನಿಮ್ಮದಲ್ಲದ ತಪ್ಪಿಗೆ ಆರೋಪ ಹೊರಬೇಕಾಗುತ್ತದೆ.
ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.
ತುಲಾ ರಾಶಿ
ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಧುಮೇಹ- ರಕ್ತದೊತ್ತಡ ಇತ್ಯಾದಿ ಆರೋಗ್ಯ ಸಮಸ್ಯೆ ಇರುವವರು ಆಹಾರ ಪಥ್ಯದ ಕಡೆ ಗಮನ ಹರಿಸಿ. ನಿತ್ಯದ ವ್ಯಾಯಾಮ- ಯೋಗ ಯಾವುದನ್ನೂ ತಪ್ಪಿಸದಿರಿ. ಸೂರ್ಯ ನಮಸ್ಕಾರ ಮಾಡುವ ಅಭ್ಯಾಸ ಇದ್ದಲ್ಲಿ ತಪ್ಪಿಸದಿರಿ.
ವೃಶ್ಚಿಕ ರಾಶಿ
ಯಾವುದೇ ಕೆಲಸ ಇರಲಿ, ಮಾಡಿಕೊಡುವ ಭರವಸೆ ನೀಡದಿರಿ. ಏಕೆಂದರೆ ಮಾತಿಗೆ ತಪ್ಪಬೇಕಾಗುತ್ತದೆ. ತುಂಬ ಸುಲಭದ ಕೆಲಸ ಅಂದುಕೊಂಡಿದ್ದು ಸಹ ಪದೇ ಪದೇ ಮಾಡಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಈ ದಿನ ಗುಂಪಿನಿಂದ ದೂರ ಇರಿ. ಯಾರಿಗೂ ಮಾತು ನೀಡದಿರಿ.
ಧನಸ್ಸು ರಾಶಿ
ಸೋದರ- ಸೋದರಿಯರ ಸಲುವಾಗಿ ಖರ್ಚು ಮಾಡುವ ಯೋಗ ಇದೆ. ಗ್ಯಾಜೆಟ್, ಲ್ಯಾಪ್ ಟಾಪ್ ಅಥವಾ ಬೇರೆ ಯಾವುದೇ ವಸ್ತುಗಳಿರಲಿ, ಖರೀದಿ ಮಾಡುವ ಮುನ್ನ ಅದರ ಅಗತ್ಯ ಇದೆಯಾ ಎಂಬುದನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಿ. ಸಾಲ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಅಗತ್ಯ ಇಲ್ಲದ ವಸ್ತುವನ್ನು ಖರೀದಿ ಮಾಡಬೇಡಿ.
ಮಕರ ರಾಶಿ
ಹಳೆಯ ಸಂಗತಿಗಳು, ನೆನಪುಗಳು ವಿಪರೀತವಾಗಿ ಕಾಡುವ ಸಾಧ್ಯತೆ ಇದೆ. ಮುಖ್ಯವಾಗಿ ಆರೋಗ್ಯದ ಕಡೆಗೆ ಗಮನ ನೀಡಿ. ಏಕಾಗ್ರತೆ ಇಟ್ಟು ಕೆಲಸ ಮಾಡಲಾಗದಿದ್ದಲ್ಲಿ ಮುಖ್ಯ ಕೆಲಸವನ್ನು ಸಹೋದ್ಯೋಗಿಗಳಿಗೆ ಒಪ್ಪಿಸಿ. ಇಲ್ಲದಿದ್ದಲ್ಲಿ ಬೈಗುಳ ಕೇಳಬೇಕಾಗುತ್ತದೆ. ಏನೋ ಸಣ್ಣ-ಪುಟ್ಟ ತಪ್ಪುಗಳಾಯಿತು ಎಂದಲ್ಲಿ ನಂಬಿಕೆ ಕಳೆದುಕೊಳ್ಳುವ ಅಗತ್ಯ ಇಲ್ಲ.
ಕುಂಭ ರಾಶಿ
ಇದೋ ಅದೋ ಅಥವಾ ಇನ್ಯಾವುದು ಎಂಬಂತೆ ಹಲವು ವಿಚಾರಗಳಲ್ಲಿ ಒಂದು ಬಗೆಯ ಗೊಂದಲ, ಉದ್ವಿಗ್ನತೆ ಕಾಡುತ್ತದೆ. ಮಕ್ಕಳ ಶಿಕ್ಷಣದ ವಿಚಾರವಾಗಿ ಮುಖ್ಯ ನಿರ್ಧಾರವೊಂದನ್ನು ಮಾಡುವ ಸಾಧ್ಯತೆ ಇದೆ. ಯಾವುದೇ ರಹಸ್ಯ ಕೆಲಸವನ್ನು ಕೈಗೆತ್ತಿಕೊಳ್ಳಬೇಡಿ. ಇದರಿಂದ ನಿಮ್ಮ ವರ್ಚಸ್ಸಿಗೆ ಹಾನಿಯಾಗುತ್ತದೆ.
ಮೀನ ರಾಶಿ
ವಿಪರೀತ ಖರ್ಚು ಮಾಡುವ ಯೋಗ ಇದೆ. ಎಲ್ಲಿಗಾದರೂ ತೆರಳಬೇಕಿದ್ದಲ್ಲಿ ಸಂಬಂಧಪಟ್ಟವರು ಈ ದಿನ ಭೇಟಿಗೆ ಲಭ್ಯರಿರುತ್ತಾರಾ ಎಂಬುದನ್ನು ಖಾತ್ರಿ ಪಡಿಸಿಕೊಂಡು ಹೊರಡಿ. ದುಬಾರಿ ವೆಚ್ಚದ ಅಗತ್ಯ ಇಲ್ಲ. ಸಿನಿಮಾ, ಹೋಟೆಲ್, ಪಾರ್ಕ್ ಎಂದು ಸುತ್ತಾಟ ಆಗಿ, ಖರ್ಚು ಆಗುವುದನ್ನು ಸೂಚಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ