ಫೆಬ್ರವರಿ 28: ಶುಭ ಶುಕ್ರವಾರದ ನಿಮ್ಮ ದಿನ ಭವಿಷ್ಯ ಹೀಗಿದೆ
Team Udayavani, Feb 28, 2020, 9:39 AM IST
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444
ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69
ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು? ಏನು ಮಾಡಬಾರದು ಎಂಬದನ್ನು ತಿಳಿದುಕೊಳ್ಳಿ.
ಮೇಷ
ನಿಶ್ಚಿತ ಗುರಿ ಸಾಧನೆಗಾಗಿ ಶ್ರಮ ವಹಿಸಬೇಕಾದೀತು. ಖಾದ್ಯತೈಲ ವ್ಯಾಪಾರಿಗಳಿಗೆ ಲಾಭ. ಮಿಶ್ರ ಭಾವನೆಯ ದಿನವಾಗಲಿದೆ. ಪತ್ನಿಯಿಂದ ಸಂಪೂರ್ಣ ಸಹಕಾರ ದೊರಕಿ ನೆಮ್ಮದಿ ಮೂಡುವುದು.
ವೃಷಭ
ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ. ಆಪ್ತ ವ್ಯಕ್ತಿಗಳ ಕೆಲಸವೊಂದನ್ನು ನೆರವೇರಿಸುವ ಸಲುವಾಗಿ ಹೆಚ್ಚಿನ ಜವಾಬ್ದಾರಿ. ಮನೆಯವರ ಆಸೆ, ಆಕಾಂಕ್ಷೆಗಳ ಬಗ್ಗೆ ನಿರಾಸಕ್ತಿ ತೋರಿ ಅವಗಣನೆಗೆ ಪಾತ್ರರಾಗುವ ಸಾಧ್ಯತೆ.
ಮಿಥುನ
ವೃತ್ತಿಯಲ್ಲಿ ಪೈಪೋಟಿ. ಪ್ರಬಲ ಪ್ರತಿಸ್ಪರ್ಧೆಯ ನಡುವೆಯೂ ಪ್ರಯತ್ನದಿಂದಾಗಿ ಗೆಲುವು ನಿಮ್ಮದಾಗಲಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ. ನೆಮ್ಮದಿ ತರುವ ದಿನ.
ಕಟಕ
ದಿನದ ಮಟ್ಟಿಗೆ ಮೌನ ವಹಿಸುವುದೇ ಲೇಸು. ಆಸ್ತಿ ವಿಚಾರದಲ್ಲಿ ಅಭಿಪ್ರಾಯಗಳನ್ನು ನೀಡುವಾಗ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ಆರ್ಥಿಕ ವಿಷಯದಲ್ಲಿ ಉತ್ತಮ ಅವಕಾಶ ಲಭಿಸಲಿದೆ.
ಸಿಂಹ
ಇತರರಿಗೆ ನೆರವಾಗುವ ಮೂಲಕ ಅವ್ಯಕ್ತ ಆನಂದವನ್ನು ಅನುಭವಿಸುವಿರಿ. ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಆದಾಯ. ಆರ್ಥಿಕ ಸಂಕಷ್ಟಗಳು ದೂರವಾಗಿ ನೆಮ್ಮದಿ. ವಿದ್ಯಾರ್ಥಿಗಳಿಗೆ ಸಾಧನೆಯ ದಿನ.
ಕನ್ಯಾ
ಕಟ್ಟಡ ಸಾಮಗ್ರಿಗಳ ಖರೀದಿ ಮಾಡುವ ಸಾಧ್ಯತೆ ಕಂಡುಬರಲಿದೆ. ಆಭರಣ ವ್ಯಾಪಾರದಿಂದ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಉದ್ಯೋಗರಂಗದಲ್ಲಿ ಅತ್ಯಂತ ಯಶಸ್ವಿ ದಿನವಾಗಿ ಪರಿಣಮಿಸಲಿದೆ.
ತುಲಾ
ವಿದೇಶದಿಂದ ಪಡೆದ ಮಾಹಿತಿ, ಅನುಭವಗಳನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ. ಪ್ರಪಂಚದ ಕಡೆಗಿನ ನಿಮ್ಮ ದೃಷ್ಟಿ ಬದಲಾಗಲಿದೆ. ಹೊಸ ಯೋಜನೆಗಳನ್ನು ರೂಪಿಸಲು ಅನುಕೂಲಕರ ವಾತಾವರಣ.
ವೃಶ್ಚಿಕ
ಪ್ರಮುಖ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಣ್ಣಪುಟ್ಟ ತೊಡಕುಗಳು ಎದುರಾಗಬಹುದು. ಸ್ವ ಪ್ರಯತ್ನದಿಂದ ತೊಡಕುಗಳು ನಿವಾರಣೆಯಾಗಲಿವೆ. ಕೊಟ್ಟ ಮಾತನ್ನು ಉಳಿಸಿಕೊಂಡ ಹೆಮ್ಮೆ ನಿಮ್ಮದಾಗಲಿದೆ.
ಧನು
ಹೆಮ್ಮೆ ಪಡುವಂತಹ ಕೆಲಸಗಳನ್ನು ಯಶಸ್ವಿಯಾಗಿ ನೆರವೇರಿಸುವಿರಿ. ವಿದ್ಯಾರ್ಥಿಗಳಿಗೆ ಅಮೋಘ ಸಾಧನೆಯ ಸಂಭ್ರಮ ಮನೆಮಾಡಲಿದೆ. ಸಂಗಾತಿಯೊಂದಿಗೆ ಕೌಶಲದಿಂದ ಮಾತನಾಡಿ ಮನ ಗೆಲ್ಲುವ ಅವಕಾಶ.
ಮಕರ
ಕಚೇರಿಯ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಯಶಸ್ವಿಯಾಗಿ ಮಾಡಿ ಪೂರೈಸುವ ಸುಯೋಗ. ಸಾರಿಗೆ ಉದ್ಯಮವನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಆದಾಯ. ವಿಮಾ ಏಜೆಂಟರಿಂದ ಉಪಯುಕ್ತ ಸಲಹೆ.
ಕುಂಭ
ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ. ಆಭರಣ ಖರೀದಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುವುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆ.
ಮೀನ
ವಾಣಿಜ್ಯ ವ್ಯವಹಾರಗಳು ಕೈಗೂಡಿ ಹೆಚ್ಚಿನ ಆದಾಯ ಬರಲಿದೆ. ಶುಭ ಸಮಾರಂಭಗಳಿಗಾಗಿ ವಿಶೇಷ ವೆಚ್ಚ ಭರಿಸಬೇಕಾದೀತು. ಮಕ್ಕಳ ಸಮಸ್ಯೆಗಳಿಗೆ ಪರಿಹಾರ. ಸರ್ಕಾರಿ ನೌಕರರಿಗೆ ಬಿಡುವಿಲ್ಲದ ದಿನವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫಲ
Daily horoscope;ಅಧಿಕ ಶುಭಫಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ
Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ
Daily horoscope: ಈ ರಾಶಿಯ ಗೃಹಿಣಿಯರ ಆದಾಯ ಹೆಚ್ಚಳವಾಗಲಿದೆ
MUST WATCH
ಹೊಸ ಸೇರ್ಪಡೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!