ದಿನಭವಿಷ್ಯ: ಈ ರಾಶಿಯವರು ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ !
Team Udayavani, May 30, 2021, 7:29 AM IST
ಮೇಷ: ಸದಾ ಕಾಲವೂ ಕಾರ್ಯಪ್ರವೃತ್ತರಾಗಿ ದುಡಿಯುತ್ತಿರುವ ನಿಮಗೆ ಉತ್ತಮ ಫಲಗಳು ಗೋಚರಕ್ಕೆ ಬರುತ್ತವೆ. ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಜಾಗ್ರತೆ ಬೇಕೇ ಬೇಕು. ಸಾಂಸಾರಿಕ ಜೀವನದಲ್ಲಿ ಕಿರಿಕಿರಿ ಇದೆ.
ವೃಷಭ: ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಮನಸ್ಸಲ್ಲಿ ಗೊಂದಲವು ಇದ್ದೇ ಇರುತ್ತದೆ. ಉದ್ಯೋಗದಲ್ಲಿ ಪದೇ ಪದೇ ಅನೇಕ ವಿಧದ ಎಡರುತೊಡರುಗಳು ಉಂಟಾಗಿ ಎಷ್ಟೇ ಕಿರಿಕಿರಿಯಾದರೂ ಸಂತೃಪ್ತಿ ಇರುತ್ತದೆ.
ಮಿಥುನ: ಸನ್ಮಿತ್ರರಿಂದ ಸಹಕಾರವು ಒದಗಿ ಬಂದೀತು. ಸಾಂಸಾರಿಕವಾಗಿ ಅಂತರಿಕ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ಸಮಾಧಾನ ತಂದು ಕೊಡಲಿದೆ. ಪತ್ನಿ ಪುತ್ರರಿಂದ ಸಹಕಾರ ದೊರೆತು ಮುನ್ನಡೆಗೆ ಅವಕಾಶವಿರುತ್ತದೆ.
ಕರ್ಕ: ವೃತ್ತಿರಂಗದಲ್ಲಿ ಸ್ಥಾನ, ಉದ್ಯೋಗ ಬದಲಾವಣೆಯ ಕನಸು ನನಸಾಗಲಿದೆ. ಖರ್ಚಿನ ಬಾಬ್ತು ಹಲವು ಅನಾವಶ್ಯಕಗಳೇ ಕಂಡುಬಂದೀತು. ಗೃಹದಲ್ಲಿ ಬಂಧುಗಳ ಆಗಮನವು ಹರುಷ, ಸಮಾಧಾನ ತರಲಿದೆ .
ಸಿಂಹ: ಹಿರಿಯರ ಸೂಕ್ತ ಸಲಹೆ, ಮಾರ್ಗದರ್ಶನಗಳಿಗೆ ಕಿವಿಗೊಡಿರಿ. ನಿರುದ್ಯೋಗಿಗಳಿಗೆ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳತಕ್ಕದ್ದು . ಕಾರ್ಯಕ್ಷೇತ್ರದಲ್ಲಿ ಉಪದ್ರವವು ಕಂಡುಬಂದರೂ ಏಳಿಗೆಯು ಕಂಡುಬಂದೀತು.
ಕನ್ಯಾ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ ಸಲಹೆ ಸೂಚನೆಗಳಿಗೆ ಭಂಗ ತಂದೀತು. ವೈವಾಹಿಕ ಭಾಗ್ಯ ಯೋಗ್ಯ ವಯಸ್ಕರಿಗೆ ಕೂಡಿ ಬಂದೀತು. ಸಾಂಸಾರಿಕವಾಗಿ ದಾಂಪತ್ಯ ಜೀವನದಲ್ಲಿ ಬದಲಾವಣೆಗೆ ಹೊಂದಿಕೊಳ್ಳಿರಿ.
ತುಲಾ: ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿ ಏರುಪೇರಾಗುತ್ತಲೇ ಮುಂದುವರಿಯುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿರಿಸುವುದು ನಿಮಗೆ ಅಗತ್ಯವಿರುತ್ತದೆ. ಸಂಚಾರದಲ್ಲಿ ಜಾಗ್ರತೆ.
ವೃಶ್ಚಿಕ: ಅಗತ್ಯ ಕಾರ್ಯಗಳಿಗೆ ವಿಳಂಬ ತೋರಿ ಬಂದೀತು. ಗೃಹದಲ್ಲಿ ಸುಖಶಾಂತಿ ತಕ್ಕಮಟ್ಟಿಗೆ ಕಂಡುಬಂದೀತು. ಹಲವು ರೀತಿಯಲ್ಲಿ ಖರ್ಚುವೆಚ್ಚಗಳಿದ್ದರೂ ಆದಾಯ ಮಾರ್ಗಗಳು ಸರಾಗವಾಗಿ ನಡೆಯಲಿವೆ.
ಧನು: ಜಲ ವೃತ್ತಿಯವರಿಗೆ ಅನಿರೀಕ್ಷಿತ ರೀತಿಯಲ್ಲಿ ಸಂಪಾದನೆ ಹೇರಳವಾಗಲಿದೆ. ಆಗಾಗ ಸರಕಾರಿ ಸಹಾಯದ ವಿಮುಖತೆಯನ್ನು ತೋರಿಯಾವು. ಕೃಷಿ, ಬೇಸಾಯ ಕಾರ್ಯಗಳಲ್ಲಿ ಚಟುವಟಿಕೆ ಕಂಡುಬರುತ್ತದೆ.
ಮಕರ: ಅವಿವಾಹಿತರು, ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಹೊಂದಿಕೊಳ್ಳಬೇಕು. ಸಾಂಸಾರಿಕವಾಗಿ ಆಪ್ತ ವರ್ಗದಲ್ಲಿ ಮನಸ್ತಾಪ ತಂದೀತು. ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ಕೊಟ್ಟಿತು. ಅಭಿವೃದ್ಧಿ ಇದೆ.
ಕುಂಭ: ಆಗಾಗ ಅನಾವಶ್ಯಕ ಖರ್ಚುವೆಚ್ಚಗಳೇ ಅಧಿಕವಾಗುತ್ತದೆ. ಆಗಾಗ ಕಾರ್ಯವೈಫಲ್ಯದ ಅನುಭವವಾದರೂ ತಾಳ್ಮೆ, ಸಮಾಧಾನದಿಂದ ಮುಂದುವರಿಯ ಬೇಕಾಗುತ್ತದೆ. ಕಷ್ಟನಷ್ಟಗಳು ಸಂಭವಿಸಬಹುದು.
ಮೀನ: ನೌಕರ ವರ್ಗಕ್ಕೆ ಹಣದ ಮುಗ್ಗಟ್ಟು ತೀವ್ರವೆನಿಸೀತು. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾಧೆ ತಪ್ಪದು. ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಶುಭ ವಾರ್ತೆ ಶ್ರವಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ