ಇಂದಿನ ಗ್ರಹಬಲ: ಒಳ್ಳೆಯದು ಹಾಗೂ ಕೆಟ್ಟದ್ದನ್ನು ನೀವು ಸಮಚಿತ್ತದಿಂದ ತೆಗೆದುಕೊಳ್ಳಬೇಕಾದೀತು


Team Udayavani, Jun 11, 2021, 7:11 AM IST

ಇಂದಿನ ಗ್ರಹಬಲ: ಒಳ್ಳೆಯದು ಹಾಗೂ ಕೆಟ್ಟದ್ದನ್ನು ನೀವು ಸಮಚಿತ್ತದಿಂದ ತೆಗೆದುಕೊಳ್ಳಬೇಕಾದೀತು

11-06-2021

ಮೇಷ: ಉದ್ಯೋಗ, ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರದಲ್ಲಿ ತುಂಬಾ ಎಚ್ಚರ ವಹಿಸಿರಿ. ಕಾರ್ಯರಂಗದಲ್ಲಿ ಛಲ ಬಿಡದೆ ಪಟ್ಟು ಹಿಡಿದು ದುಡಿಯಿರಿ. ನಿರೀಕ್ಷಿತ ಅಭಿವೃದ್ಧಿಯು ನಿಶ್ಚಿತ ರೂಪದಲ್ಲಿ ಕಂಡುಬಂದು ಸಂತಸವಾಗಲಿದೆ.

ವೃಷಭ: ಸ್ತ್ರೀಯರ ವಿಚಾರದಲ್ಲಿ ಸಮಸ್ಯೆಗಳು ತೋರಿ ಬಾರದಂತೆ ಗಮನಹರಿಸಿರಿ. ಒಳ್ಳೆಯದು ಹಾಗೂ ಕೆಟ್ಟದ್ದನ್ನು ನೀವು ಸಮಚಿತ್ತದಿಂದ ತೆಗೆದುಕೊಳ್ಳಬೇಕಾದೀತು. ಹೃದ್ಗತ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದಿರಿ. ವಿದ್ಯಾರ್ಥಿಗಳಿಗೆ ಉತ್ಸಾಹವಿದೆ.

ಮಿಥುನ: ನಿಮ್ಮ ಜೀವನದಲ್ಲಿ ಪ್ರಭಾವ ಬೀರಲಿರುವ ಹಲವು ಹೊಸ ಜನರ ಪರಿಚಯದಿಂದ ಲಾಭವಾಗಲಿದೆ. ವೃತ್ತಿರಂಗದಲ್ಲಿ ಸಮಾಧಾನ ಮಾನಸಿಕ ದೃಢತೆಯನ್ನು ಕಾಪಾಡಿ ಕೊಳ್ಳಬೇಕಾದೀತು. ಕುಟುಂಬದವರ ಹಿತನುಡಿ ಸಮಾಧಾನ ತರಲಿದೆ.

ಕರ್ಕ: ಹಿರಿಯರ ಸಕಾಲಿಕ ಪ್ರೇರಣೆ ಇಂದು ನಿಮ್ಮನ್ನು ಕಾಪಾಡುವ ಶ್ರೀರಕ್ಷೆಯಾಗಲಿದೆ. ಆರೋಗ್ಯಭಾಗ್ಯ ಕೊಂಚ ಏರುಪೇರಾಗುವ ಸಾಧ್ಯತೆ ಇರುತ್ತದೆ. ಹಣದ ಪರಿಸ್ಥಿತಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾದೀತು.

ಸಿಂಹ: ದೂರ ಸಂಚಾರದ ಸಿದ್ಧತೆ ಸಂತಸ ತರಲಿದೆ. ಜೀವನದಲ್ಲಿ ಮಹತ್ತರ ಬದಲಾವಣೆಯು ಕಂಡುಬಂದೀತು. ಜೀವನವನ್ನು ಬಂದ ಹಾಗೆ ಎದುರಿಸುವುದನ್ನು ನೀವು ಕಲಿಯಬೇಕು. ಹೊಸ ಹೊಸ ಘಟನೆಗಳು ಮನಸ್ಸನ್ನು ಗಲಿಬಿಲಿಗೊಳಿಸಲಿದೆ.

ಕನ್ಯಾ: ಹಲವಾರು ಸಂದಿಗ್ಧತೆಗಳು ನಿಮಗೆ ಚಾಂಚಲ್ಯ ತಂದರೂ ನೀವು ದೃಢ ನಿರ್ಧಾರದಿಂದ ಮುಂದುವರಿದಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. ಅವಿವಾಹಿತರಿಗೆ ಕಂಕಣಬಲದ ಭಾಗ್ಯ ಒದಗಿ ಬಂದೀತು. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿದೆ.

ತುಲಾ: ಆರ್ಥಿಕವಾಗಿ ಸಂಪತ್ತು ಸಮೃದ್ಧಿ ಇದೆ. ಶುಭ ಕಾರ್ಯಕ್ಕೆ ಇದು ಸಕಾಲ. ಅನಿರೀಕ್ಷಿತ ಘಟನೆಗಳಿಂದ ಆಶ್ಚರ್ಯಕ್ಕೊಳಗಾಗುವಿರಿ. ಬಂಧುಗಳಿಂದ ಸಂತಸ ಸುದ್ದಿ ಬರಲಿದೆ. ನೀವು ಜಡತೆಯನ್ನು ಕೆಡವಿ ಮುನ್ನುಗ್ಗಲು ಯತ್ನಿಸಿರಿ.

ವೃಶ್ಚಿಕ: ಆತ್ಮೀಯರಿಂದ ಮನನೋಯಿಸುವ ಪ್ರಸಂಗವು ಎದುರಾದೀತು. ಗೃಹ ಕಾರ್ಯ ನಿಮಿತ್ತ ಖರ್ಚು ವೆಚ್ಚಗಳು ಇದ್ದರೂ ಆರ್ಥಿಕ ಸ್ಥಿತಿಯು ಹಂತ ಹಂತವಾಗಿ ಪ್ರಗತಿಯಾಗಲಿದೆ. ಧಾರ್ಮಿಕ ಕಾರ್ಯಗಳ ಚಿಂತನೆ ಕಾರ್ಯಗತವಾಗಲಿದೆ.

ಧನು: ನೂತನ ಸ್ನೇಹಿತರ ಗೆಳೆತನದಿಂದ ವೈಯಕ್ತಿಕ ವಿಚಾರದಲ್ಲಿ ಅನುಕೂಲವಾಗಲಿದೆ. ನಿಮ್ಮ ಸ್ವಂತ ಯೋಗ್ಯತೆ ಹಾಗೂ ಪ್ರಯತ್ನಬಲದಿಂದ ಫ‌ಲಗಳು ಗೋಚರಕ್ಕೆ ಬರಲಿದೆ. ಕಾರ್ಯರಂಗದಲ್ಲಿ ಇಂತಹ ಅವಶ್ಯಕತೆ ನಿಮಗೆ ಕಂಡು ಬಾರದು.

ಮಕರ: ಹಲವಾರು ವಿಚಾರಗಳಲ್ಲಿ ಆಗಾಗ ಮಾನಸಿಕ ಅಸ್ಥಿರತೆ ಕಾಡಿದರೂ ದೈವಾನುಗ್ರಹದಿಂದ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಸಾಮಾಜಿಕವಾಗಿ ಉನ್ನತಿ ಪ್ರಾಪ್ತವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ ಇರುತ್ತದೆ.

ಕುಂಭ: ಆರ್ಥಿಕ ಸ್ಥಿತಿಯು ಸುಧಾರಿಸುತ್ತಲೇ ಹೋಗಲಿದೆ. ಹಿತಶತ್ರುಗಳ ಸಾಮರ್ಥ್ಯದ ಬಲೆಗೆ ಬೀಳುವ ಬದಲಿಗೆ ತಪ್ಪಿಸಿಕೊಂಡಲ್ಲಿ ಉತ್ತಮ. ಹೊಸ ಕಾರ್ಯಗಳ ಚಿಂತನೆಗೆ ಇದು ಸಕಾಲವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಇದೆ.

ಮೀನ: ವೃತ್ತಿರಂಗದಲ್ಲಿನ ದಿಟ್ಟ ನಿರ್ಧಾರಗಳು ಅವಕಾಶಗಳಲ್ಲಿ ಶೀಘ್ರ ಸ್ಪಂದನ ಅವಶ್ಯಕವಾಗಿದೆ. ಪ್ರತಿಸ್ಪರ್ಧಿಗಳು ನಿಮ್ಮ ವೈಫ‌ಲ್ಯವನ್ನು ಸದುಪಯೋಗಿಸಿಕೊಂಡಾರು. ಜಾಗ್ರತೆ ವಹಿಸಿದರೆ ಉತ್ತಮ. ಗೌರವ , ಸನ್ಮಾನ ಪ್ರಾಪ್ತವಾಗಲಿದೆ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.