ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ
Team Udayavani, Dec 28, 2020, 7:48 AM IST
28-12-2020
ಮೇಷ: ಅತೀ ಮಹತ್ವದ ಕೆಲಸಕಾರ್ಯಗಳಿಗಾಗಿ ಧನ ವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ನಿಮ್ಮ ಸಾಧನೆ ಇರುತ್ತದೆ. ಪ್ರವಾಸಾದಿಗಳೂ ಸಫಲವಾಗಲಿದೆ. ವ್ಯಯಾಧಿಕ್ಯವಿದ್ದು ಚಿಂತಿತರಾಗುವಿರಿ.
ವೃಷಭ: ನಿಮ್ಮ ಮನಸ್ಥಿತಿ ಸರಿ ಇರದೆ ಚಡಪಡಿಕೆ ಇರುತ್ತದೆ. ಆರೋಗ್ಯಭಾಗ್ಯವು ಸ್ವಲ್ಪ ಸರಿಯಾದರೂ ತಲೆ ಬಿಸಿ ಕಮ್ಮಿ ಇರದು. ಪಿತ್ತಾಧಿಕ್ಯದಿಂದ ಶರೀರದಲ್ಲಿ ಏರುಪೇರು ಕಂಡು ಬರುವುದು.
ಮಿಥುನ: ಮಂಗಲ ಕಾರ್ಯ ಹಾಗೂ ಧಾರ್ಮಿಕ ಕಾರ್ಯವು ಜರಗುವುದು. ಆದಾಯದ ವೃದ್ಧಿ ಇರುತ್ತದೆ. ಮನೆಯಲ್ಲಿ ಪತ್ನಿಯೊಂದಿಗೆ ವೈಮನಸ್ಸು ತಲೆದೋರಬಹುದು. ಶಿಕ್ಷಣ ರಂಗದವರಿಗೆ ಅಭಿವೃದ್ಧಿ ಇದೆ.
ಕರ್ಕ: ವೃತ್ತಿಪರರಿಗೆ ವರ್ಗಾವಣೆಯ ಕುರಹು ಕಂಡು ಬಂದೀತು. ಸ್ವಲ್ಪ ಮಟ್ಟಿಗೆ ವಿತ್ತ ಚಿಂತನೆಯು ಕಾಡಬಹುದು. ಪುಣ್ಯ ಕಾರ್ಯ ಸಹಭಾಗಿಯಾಗುವ ಸಮಯವು ನಿಮಗೆ ಬಂದೀತು. ಶುಭವಾರ್ತೆ ಇದೆ.
ಸಿಂಹ: ಮಾತು ಕಡಿಮೆ ಇರಲಿ. ಕೃಷಿ, ನೀರು ಉದ್ದಿಮೆ ಆಹಾರಪದಾರ್ಥಗಳ ವೃತ್ತಿಯವರಿಗೆ ಕಿರಿಕಿರಿ ಇರುತ್ತದೆ. ಧನಹಾನಿ ಸಂಭವ ಇರುತ್ತದೆ. ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ.
ಕನ್ಯಾ: ವಿಲಾಸಿ ಸಾಮಾಗ್ರಿಗಳ ಖರೀದಿಗಾಗಿ ಖರ್ಚು ಬಂದೀತು. ನಿಮಗೆ ಬರುವ ಹಣವು ವಿಳಂಬ ತಂದೀತು. ಜ್ವರ, ಶೀತ ಭಾದೆಯು ಕಾಡಲಿದೆ. ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚು ಕಂಡೀತು.
ತುಲಾ: ನೀವು ಕೈಗೊಂಡ ಕಾರ್ಯವು ಶೀಘ್ರವಾಗಿ ಫಲ ಕೊಟ್ಟೀತು. ಹಿರಿಯರಿಗೆ ಶುಶ್ರೂಷೆ ಯಾ ಒಡವೆ ವಸ್ತುಗಳ ಖರೀದಿ ಬಂದೀತು. ವಾಹನ ಖರೀದಿ ಯಾ ಬದಲಿಸುವ ಸಂಭವವಿರುತ್ತದೆ.
ವೃಶ್ಚಿಕ: ಕೆಳ ವರ್ಗದವರ ಪೀಡೆಯಿಂದ ಬೇಸರ ಕಂಡು ಬಂದೀತು. ಸ್ತ್ರೀಸೌಖ್ಯ, ಕೀರ್ತಿವೃದ್ಧಿ, ನ್ಯಾಯಾಲಯದಲ್ಲಿ ವಾಗ್ವಾದ ಇದ್ದೀತು. ಸಂತತಿ ವಿಷಯದಲ್ಲಿ ಅನಾರೋಗ್ಯವು ಕಂಡು ಬಂದೀತು. ಜಾಗ್ರತೆ ಮಾಡಿರಿ.
ಧನು: ಎಲ್ಲಾ ವಿಷಯಗಳಲ್ಲೂ ಉತ್ಸಾಹಿತರಾಗಿದ್ದ ನಿಮಗೆ ಸಾಮಾಜಿಕ ಸ್ಥಾನಮಾನಗಳು ಲಭಿಸಲಿದೆ. ಕ್ರೀಡಾಪಟುಗಳಿಗೆ ಇದು ಯಶಸ್ಸಿನ ಕಾಲವಾದೀತು. ಇತರರ ಚುಚ್ಚು ಮಾತಿಗೆ ಕಿವಿಗೊಡದಿರಿ.
ಮಕರ: ಆರೋಗ್ಯದ ಬಗ್ಗೆ ಹತೋಟಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಶತ್ರು ಭಯವು ಕಂಡು ಬರಲಿದೆ. ನೀವು ಕೈಗೊಂಡ ಕಾರ್ಯವು ನಿರಾತಂಕವಾಗಿ ಮುನ್ನಡೆ ಕಂಡೀತು. ಶುಭವಿದೆ.
ಕುಂಭ:ನಿಮಗೆ ಸ್ಥಾನ ಪ್ರಾಪ್ತಿಯ ಸೂಚನೆ ತೋರಿದರೂ ಕೊನೆಗೆ ನಿರಾಶೆ ಕಾಡೀತು. ಪಿತೃ ವಾಕ್ಯಪರಿಪಾಲನೆಗಾಗಿ ಧನವ್ಯಯ ಕಂಡು ಬಂದೀತು. ಹಿತಶತ್ರುಗಳು ನಿಮ್ಮನ್ನು ಗಮನಿಸಿಯಾರು. ತಾಳ್ಮೆ ಇರಲಿ.
ಮೀನ: ಸ್ಥಾನಮಾನ, ಗೌರವಾದಾರಗಳು ನಿಮ್ಮನ್ನು ಹುಡುಕಿಕೊಂಡು ಬಂದೀತು. ಕಾರ್ಯ ನಿಮಿತ್ತ ದೂರ ಪಯಣ ಕಂಡು ಬಂದೀತು. ಆಹಾರ ವಿಚಾರದಲ್ಲಿ ಸಂಯಮ ಮೀರಿದಲ್ಲಿ ಹೊಟ್ಟೆಗೆ ಅನಾರೋಗ್ಯ ಖಂಡಿತ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ
Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ
Horoscope Today: ಈ ರಾಶಿಯವರಿಗೆ ಅಕಸ್ಮಾತ್ ಧನಾಗಮ ಯೋಗ ಇರಲಿದೆ
Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ
MUST WATCH
ಹೊಸ ಸೇರ್ಪಡೆ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ