ಶನಿವಾರದ ರಾಶಿಫಲ : ಯಾರಿಗೆ ಶುಭ ಯಾರಿಗೆ ಲಾಭ
Team Udayavani, Aug 7, 2021, 7:33 AM IST
ಮೇಷ: ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಉದ್ಯೋಗ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ. ಸಹೋದ್ಯೋಗಿಗಳ ಸಹಕಾರ. ಗೌರವದಿಂದ ಕೂಡಿದ ಧನಾರ್ಜನೆ. ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ವೃದ್ಧಿ.
ವೃಷಭ: ದೈಹಿಕವಾಗಿಯೂ ಮಾನಸಿಕವಾಗಿಯೂ ಸಂತೋಷದಿಂದ ಕೂಡಿದ ಪರಿಸ್ಥಿತಿ. ದೀರ್ಘ ಪ್ರಯಾಣ ಯೋಗ. ದಾಂಪತ್ಯದಲ್ಲಿ ಉತ್ತಮ ಸಾಮರಸ್ಯ ವೃದ್ಧಿ. ಸಂದರ್ಭಕ್ಕೆ ಸರಿಯಾಗಿ ಒದಗುವ ಧನಾರ್ಜನೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.
ಮಿಥುನ: ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ . ಅಧಿಕ ಧನಾಗಮ. ಕುಟುಂಬದವರ ಸಹಕಾರ ಪ್ರೋತ್ಸಾಹದಿಂದ ಉದ್ಯೋಗ ವ್ಯವಹಾರಗಳಲ್ಲಿ ಶ್ರೇಯಸ್ಸು. ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ.
ಕರ್ಕ: ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿಗಳು ತೋರಿಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ . ಗುರುಹಿರಿಯರ ಸ್ಥಿತಿ ಉತ್ತಮ. ಸಂತೋಷದಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ.
ಸಿಂಹ: ಆರೋಗ್ಯ ಸ್ಥಿರ. ಪ್ರಯಾಣದಿಂದ ದೇಹಾಯಾಸ ತೋರೀತು. ಸಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ಜಾಗ್ರತೆಯಿಂದ ಸಫಲತೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ.
ಕನ್ಯಾ: ಆರೋಗ್ಯದ ಬಗ್ಗೆ ಅಜಾಗ್ರತೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಉತ್ತಮ ಧನ ಸಂಪಾದನೆಯ ಸುಖ. ಪಾಲು ದಾರಿಕಾ ವ್ಯವಹಾರದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಅವಿವಾಹಿತರಿಗೆ ವಿವಾಹ ಯೋಗ ಸಿದ್ಧಿ . ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ.
ತುಲಾ: ಉದ್ಯೋಗ ವ್ಯವಹಾರದಲ್ಲಿ ಸಹಚರರೊಂದಿಗೆ ಸಮಾಧಾನ ತಾಳ್ಮೆ ಅಗತ್ಯ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಸಂತಸ. ಗುರುಹಿರಿಯರ ಜವಾಬ್ದಾರಿ ನಡೆ. ನಿರಂತರ ಧನಾರ್ಜನೆ. ಆರೋಗ್ಯ ಉತ್ತಮ.
ವೃಶ್ಚಿಕ: ಸಾಂಸಾರಿಕ ಸಂತೋಷ ವೃದ್ಧಿ . ಪರಸ್ಪರ ಸಹಕಾರ. ಮಕ್ಕಳ ವಿಚಾರದಲ್ಲಿ ಧನವ್ಯಯ. ದೇವತಾ ಕಾರ್ಯಗಳಿಗೆ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ. ಸುಸ್ಥಿರ ಆರೋಗ್ಯ. ಗೃಹೋಪವಸ್ತುಗಳ ಸಂಗ್ರಹ.
ಧನು: ನಿಯಮ ಶಿಸ್ತಿನಿಂದ ಕೂಡಿದ ಜೀವನಶೈಲಿ ಸಾಂಸಾರಿಕ ಸುಖದಲ್ಲಿ ಹೆಚ್ಚಿದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ನಾಯಕತ್ವ ಗುಣ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಮ್ಮೆಪಡುವಂತಹ ಸಂದರ್ಭ.
ಮಕರ: ಆರೋಗ್ಯದಲ್ಲಿ ಸುಧಾರಣೆ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಧನಾರ್ಜನೆ. ಉದ್ಯೋಗ ವಿಚಾರ ಸಂಬಂಧಿ ಪ್ರಯಾಣ ಸಂಭವ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಗುರುಹಿರಿಯರ ಉತ್ತಮ ಪರಿಸ್ಥಿತಿ. ಸಾಂಸಾರಿಕ ಸುಖ ಮಧ್ಯಮ.
ಕುಂಭ: ಆರೋಗ್ಯದ ಬಗ್ಗೆ ಗಮನಹರಿಸಿ. ಸರಿಯಾದ ಶಿಸ್ತು ಅಗತ್ಯ. ಉದಾಸೀನ ಮಾಡದಿರಿ. ಧನಾಗಮನಕ್ಕೆ ಕೊರತೆ ಇರದು. ಅನ್ಯರ ಮೇಲೆ ಅವಲಂಬಿತರಾಗದೇ ಕಾರ್ಯ ಪ್ರವೃತ್ತರಾಗಿರಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಮೀನ: ಉತ್ತಮ ಅಭಿವೃದ್ಧಿದಾಯಕ ದೈಹಿಕ ಸ್ಥಿತಿ. ದೀರ್ಘ ಪ್ರಯಾಣದಿಂದ ನಿರೀಕ್ಷಿತ ಕಾರ್ಯದಲ್ಲಿ ಸಫಲತೆ. ನೂತನ ಮಿತ್ರರ ಸಮಾಗಮ. ಅಧಿಕ ಧನ ಸಂಪತ್ತಿನ ವೃದ್ಧಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ