ಇಂದಿನ ಗ್ರಹಬಲ: ಈ ವಾರದಲ್ಲಿ ಈ ರಾಶಿಯವರಿಗೆ ಉತ್ತಮ ಫಲಗಳು ಗೋಚರಕ್ಕೆ ಬರುವುದು
Team Udayavani, Apr 15, 2021, 7:37 AM IST
15-04-2021
ಮೇಷ: ಆಗಾಗ ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಲಿದೆ. ಇದರಿಂದ ನಿಮಗೆ ಉದ್ವೇಗ, ಕೋಪ, ಸಿಟ್ಟುಗಳು ಬರುವುದು ಜಾಸಿಯಾಗದೀತು. ಆದರೆ ಪ್ರಯತ್ನ ಬಲದಿಂದ ಹತ್ತಿಕ್ಕಿರಿ. ಮುಂದೆ ಚೆನ್ನಾಗಿರುತ್ತದೆ.
ವೃಷಭ: ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಕಂಡು ಬರುವುದು. ಆರೋಗ್ಯದಲ್ಲೂ ದಿನಾ ಒಂದೊಂದು ತರಹ ಪೀಡೆ. ಇದರಿಂದ ನೊಂದು ಹೋಗುವಿರಿ. ಆದರೆ ಮನೆಯಲ್ಲಿ ಪತ್ನಿ, ಪುತ್ರಿಯ ಸಹಕಾರವು ನಿಮಗೆ ದೊರಕುವುದು.
ಮಿಥುನ: ಗೃಹಕೃತ್ಯದಲ್ಲಿ ಕೆಲವು ಸುಧಾರಣೆಗಳು ಕಂಡು ಬಂದು ಸಮಾಧಾನವಾಗಲಿದೆ. ಇಷ್ಟಕಾರ್ಯಗಳು ನೆರವೇರಿ ನೆಮ್ಮದಿ ಎನಿಸಲಿವೆ. ಕುಟುಂಬದ ಜನರ ಸಹಕಾರ ನಿಮಗೆ ದೊರಕುವುದು. ಪ್ರೀತಿ, ವಿಶ್ವಾಸ ಮುಖ್ಯ.
ಕರ್ಕ: ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಿ ಸಂತಸವಾಗಲಿದೆ. ಅವಿವಾಹಿತರಿಗೆ ಯೋಗ್ಯ ಪ್ರಸ್ತಾಪಗಳು ಕಂಡು ಬರಲಿವೆ. ಪ್ರಯೋಜನ ಪಡೆದುಕೊಳ್ಳಿರಿ. ಈ ವಾರವು ನಿಮಗೆ ಉತ್ತಮ ಫಲಗಳು ಗೋಚರಕ್ಕೆ ಬರುವುದು. ಶುಭವಿದೆ.
ಸಿಂಹ: ಇಡೀ ದಿನ ಕೆಲಸ ಕಾರ್ಯಗಳೆಂದು ದುಡಿ ಯುವ ನಿಮ್ಮ ಜೀವವು ವಿಶ್ರಾಂತಿ ಬಯಸುವುದು. ಮನಸ್ಸು ಸಮಾಧಾನದಿಂದಿರೊಲ್ಲ. ಧ್ಯಾನ ಹಾಗೂ ನಡಿಗೆಯನ್ನು ಮುಂದುವರಿಸಿರಿ. ಆರೋಗ್ಯವು ಉತ್ತಮಗೊಳ್ಳುವುದು.
ಕನ್ಯಾ: ಉದ್ಯೋಗದಲ್ಲಿ ಪದೇ ಪದೇ ಅನೇಕ ವಿಧದ ಎಡರುತೊಡರುಗಳು ಕಂಡು ಬರುವುದು. ಅದನ್ನು ದಾಟಿ ಮುನ್ನಡೆದರೆ ಫಲ ಸಿಗಲಿದೆ. ಪತ್ನಿಯಿಂದ ಒಳ್ಳೆಯ ಸಲಹೆಗಳು, ಸಹಕಾರವೂ ದೊರೆತು ನಿಮ್ಮಷ್ಟು ಸುಖೀ ಯಾರಿಲ್ಲ.
ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ದೊರತು ಮುನ್ನಡೆವಿರಿ. ಆಗಾಗ ಅಡೆತಡೆಗಳು ಕಂಡು ಬಂದರೂ ಬೇಸರ ಮಾಡದೆ ಛಲ ಹಿಡಿದು ಮುನ್ನಡೆಯಿರಿ. ಮುಂದೆ ಸಫಲತೆ ಕಾಣುವಿರಿ. ಸನಿ¾ತ್ರರು ಸಹಕಾರ ಕೊಡಲಿದ್ದಾರೆ.
ವೃಶ್ಚಿಕ: ಸಾಂಸಾರಿಕವಾಗಿ ಆಂತರಿಕ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ನಡೆದು ಸಮಾಧಾನ ಸಿಗಲಿದೆ. ಆಗಾಗ ಆರ್ಥಿಕ ಹಿನ್ನಡೆಯನ್ನು ಅನುಭವಿಸಬೇಕಾದೀತು. ವಾಯು ಪ್ರಕೋಪ ಕಂಡು ಬರುವುದು. ಸಹನೆಯಿಂದ ಸಂಸಾರದಲ್ಲಿ ಸುಖವಿದೆ.
ಧನು: ವೃತ್ತಿರಂಗದಲ್ಲಿ ಏಳಿಗೆಯನ್ನು ಕಾಣುವಿರಿ. ನೀವು ಆಸೆಪಟ್ಟ ವಿಷಯದಲ್ಲಿ ನಿಖರತೆ ಕಂಡು ಬರುವುದು. ಧನಾಗಮ ಅಷ್ಟಕಷ್ಟೆ ಆದರೂ ಕೊರತೆ ಆಗದು. ಆತ್ಮವಿಶ್ವಾಸ ಕೂಡಾ ನಿಮ್ಮನ್ನು ರಕ್ಷಿಸಲಿದೆ. ಧೈರ್ಯ ಅಗತ್ಯವಿದೆ.
ಮಕರ: ಶತ್ರುಗಳ ಸಮಯಸಾಧಕತನ ನಿಮ್ಮನ್ನು ಘಾಸಿಗೊಳಿಸಲಿದೆ. ಮಾತಿಗಿಂತ ಮೌನಲೇಸು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಯೋಗದಿಂದ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿರುವುದು.
ಕುಂಭ: ನೂತನ ಕಾರ್ಯಾರಂಭ, ವ್ಯಾಪಾರ, ವ್ಯವಹಾರಗಳಿಗಿದು ಸಕಾಲವಲ್ಲ. ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿ ಬಂದು ಅಸಾಮಾಧಾನವು ಕಾಡಲಿದೆ. ಸಾಂಸಾರಿಕವಾಗಿ ಮಕ್ಕಳು, ಮೊಮ್ಮಕ್ಕಳ ಆಗಮನದಿಂದ ಹಬ್ಬದ ವಾತಾವರಣ.
ಮೀನ: ದೈಹಿಕವಾಗಿ ಹಾಗೂ ಮಾನಸಿಕವಾಗಿ ವ್ಯಾಕುಲತೆ ತೋರಿ ಬರುವುದು. ಶೈಕ್ಷಣಿಕ ವೃತ್ತಿಯವರಿಗೆ ನಿರೀಕ್ಷೆಗಿಂತ ಕಡಿಮೆ ಅಂಕಗಳು ದೊರೆತು ಬೇಸರವಾದೀತು. ನಿಮ್ಮ ಕರ್ತವ್ಯವನ್ನು ನಿರ್ಲಕ್ಷಿಸದಿರಿ. ಚ್ಯುತಿ ಬಾರದಂತೆ ವರ್ತಿಸಿರಿ
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ
Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ