ನಿಮ್ಮ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ಸಂದರ್ಶನವು ಲಾಭ ನೀಡಲಿದೆ
Team Udayavani, Dec 22, 2020, 8:12 AM IST
22-12-2020
ಮೇಷ: ಕೃಷಿ, ಸ್ಥಿರ ಸೊತ್ತು, ಭೂಮಿ ಖರೀದಿಗಾಗಿ ಧನವಿನಿಯೋಗವಾಗಲಿದೆ. ನೀವು ಮಾಡಿದ ಕೆಲಸಕ್ಕೆ ಹಿರಿಯರ ಹಾಗೂ ಮೇಲಾಧಿಕಾರಿಗಳ ಮೆಚ್ಚುಗೆ ದೊರೆಯಲಿದೆ. ಸಾಮಾಜಿಕವಾಗಿ ಗೌರವ, ಘನತೆ ಇದೆ.
ವೃಷಭ: ಕಚೇರಿಯ ಕೆಲಸದಲ್ಲಿ ಸಣ್ಣದೊಂದು ತಪ್ಪು, ಮನಸ್ತಾಪ, ಸ್ಥಾನಭ್ರಂಶಕ್ಕೂ ಎಡೆ ಮಾಡೀತು. ಗೆಳೆಯರು, ಆತ್ಮೀಯರು, ಹಿತಬಂಧುಗಳು ನಿಮ್ಮಿಂದ ಸಹಾಯ ಯಾಚಿಸುವರು. ದಾಂಪತ್ಯದಲ್ಲಿ ಸುಖವಿದೆ.
ಮಿಥುನ: ದೇವತಾ ಪೂಜಾಕಾರ್ಯಗಳಿಂದ, ಧರ್ಮಕಾರ್ಯಗಳಿಂದ ಪುಣ್ಯ ಸಂಪಾದನೆಯಾದೀತು. ಪ್ರವಾಸ ಯಾ ಯಾತ್ರಾನುಭವವೂ ವಿದ್ಯಾಭ್ಯಾಸಗಳಿಗೆ ಪಠ್ಯೇತರ ಚಟುವಟಿಕೆಗಳಿಂದ ಸಂತೋಷವಾಗಲಿದೆ.
ಕರ್ಕ: ಮಕ್ಕಳ ವಿದ್ಯಾಪ್ರಗತಿಯಿಂದ ಸಂತಸವಾಗಲಿದೆ. ಮಾತೆಗೆ ಅನಾರೋಗ್ಯವಾದೀತು. ಖರ್ಚುವೆಚ್ಚ ಹೆಚ್ಚಾಗಲಿದೆ. ಸಮೀಪದ ಬಂಧುಗಳ ಆಗಮನದಿಂದ ಸಂತಸ. ದೇವತಾರಾಧನೆಯಿಂದ ಇಷ್ಟ ಸಿದ್ಧಿ.
ಸಿಂಹ: ಆರೋಗ್ಯವೇ ಭಾಗ್ಯವೆನ್ನುವವರು ನಿಮಗೀಗ ಆರೋಗ್ಯದಲ್ಲಿ ಏರುಪೇರು ಕಂಡು ಬರುವುದು. ಆದಾಯವು ಸ್ವಲ್ಪ ಏಳಿಗೆ ಪಥದಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಳಿಗೆ ಇರುತ್ತದೆ.
ಕನ್ಯಾ: ಮಾನಸಿಕ ವ್ಯಥೆಗೆ ಕಾರಣವಾಗುವ ಕಲಹವು ನಿಮ್ಮ ಮಧ್ಯೆ ಏರ್ಪಟ್ಟೀತು. ಆರೋಗ್ಯವು ಸಾಧಾರಣವಾಗಿರುತ್ತದೆ. ಆದಾಯದ ತಡೆ ಉಂಟಾಗಿ ನೆಮ್ಮದಿ ಕೆಡಿಸುವನು. ಪಿತ್ತ ಪ್ರಕೋಪವು ಕಂಡು ಬಂದೀತು.
ತುಲಾ: ಆತ್ಮೀಯರ ಆಗಮನ ಹರುಷ ತಂದೀತು. ಪ್ರವಾಸ, ಯಾತ್ರಾದಿಗಳಿಂದ ಸಂತೃಪ್ತಿ ಇದೆ. ಸರ್ಕಾರಿ ಉದ್ಯೋಗಸ್ಥರಿಗೆ ಸ್ಥಾನಪ್ರಾಪ್ತಿ ಇದ್ದರೂ ಕಿರಿಕಿರಿ ಜೊತೆಗೆ ವಿರೋಧಿಗಳಿಂದ ಅಸೂಯೆ ವ್ಯಕ್ತವಾದೀತು.
ವೃಶ್ಚಿಕ: ಅಜೀರ್ಣದ ಉಪದ್ರವದಿಂದ ಆರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಹಿರಿಯರ ಆದಾಯ ಇತರರ ಪಾಲಾದೀತು. ವಿಲಾಸೀ ಸಾಮಾಗ್ರಿಗಳ ವ್ಯಾಪಾರದಲ್ಲಿ ಹಾನಿ ಕಡಿಮೆ. ಲಾಭ ಹೆಚ್ಚಾಗಲಿದೆ.
ಧನು: ಎಂದೋ ಆಗಬೇಕಾಗಿದ್ದ ಕೆಲಸವು ಸಲೀಸಾಗಿ ಆಗಲಿದೆ. ಗೃಹ ನಿರ್ಮಾಣದಂತಹ ಮಹತ್ಕಾರ್ಯ ಆರಂಭವಾಗಲಿದೆ. ನಿರುದ್ಯೋಗಿಗಳಿಗೆ ಸಂದರ್ಶನವು ಲಾಭ ನೀಡಲಿದೆ. ಸಣ್ಣ ಪ್ರವಾಸವು ಕೂಡಿಬರಲಿದೆ.
ಮಕರ: ವಿದ್ಯಾರ್ಜನೆಯಲ್ಲಿ ಯಶಸ್ವಿನಿಂದಾಗಿ ವಿದ್ಯಾರ್ಥಿಗಳಿಗೆ ತೃಪ್ತಿ ದೊರಕಲಿದೆ. ಪಿತ್ತೋಷ್ಣದಿಂದ ಆರೋಗ್ಯ ಕೊಂಚ ಹದೆಗೆಟ್ಟಿತು. ಪ್ರಯಾಣದಲ್ಲಿ ವಂಚನೆ, ಕಳ್ಳಕಾಕರ ಭೀತಿ ಇದೆ. ಜಾಗ್ರತೆ ಮಾಡಿರಿ.
ಕುಂಭ: ಹಣ್ಣು ಹಂಪಲು, ಸಿಹಿತಿಂಡಿ, ಪಾನೀಯ ಪದಾರ್ಥ ವ್ಯಾಪಾರಿಗಳಿಗೆ ಸ್ವಲ್ಪ ಲಾಭಾಂಶ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಹಕಾರವಿರುತ್ತದೆ. ಸುಖ, ನೆಮ್ಮದಿ, ಭಾಗ್ಯಾಭಿವೃದ್ಧಿ ಇದೆ.
ಮೀನ: ತೈಲ, ಘ್ರತ, ಸ್ನಿಗ್ದದಾರ್ಥಗಳ ವ್ಯಾಪಾರಿಗಳಿಗೆ ಲಾಭಾಂಶ ಹೆಚ್ಚಾದೀತು. ರಕ್ಷಣಾ ಇಲಾಖೆಯ ನೌಕರರಿಗೆ ಅಭಿವೃದ್ಧಿ ಇದೆ. ವಾದ ವಿವಾದ ನ್ಯಾಯಾಲಯ ದರ್ಶನಕ್ಕೆ ಅವಕಾಶ ಕೊಟ್ಟೀತು.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ
Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ
Horoscope Today: ಈ ರಾಶಿಯವರಿಗೆ ಅಕಸ್ಮಾತ್ ಧನಾಗಮ ಯೋಗ ಇರಲಿದೆ
Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ
MUST WATCH
ಹೊಸ ಸೇರ್ಪಡೆ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ