ನಿರುದ್ಯೋಗಿಗಳಿಗೆ ಸಿಹಿಸುದ್ದಿ, ವಿದ್ಯಾರ್ಥಿಗಳಿಗೆ ಕಹಿಸುದ್ದಿ: ಹೇಗಿದೆ ನಿಮ್ಮ ಗ್ರಹಬಲ ?
Team Udayavani, Dec 9, 2020, 7:28 AM IST
ಮೇಷ: ದೂರ ಪ್ರಯಾಣದಿಂದ ಶ್ರಮ ಹೆಚ್ಚಾಗಲಿದೆ. ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ತೀರ್ಪು. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಚಿನ್ನ, ಬೆಳ್ಳಿ ಒಡವೆ ಮನೆಗೆ ಬಂದೀತು. ಲಾಟರಿ, ಸಟ್ಟಾ ಇತ್ಯಾದಿಗಳು ಸಹಾಯ ನೀಡಬಹುದು.
ವೃಷಭ: ನಿರುದ್ಯೋಗಿಗಳು ಉತ್ತಮ ಅವಕಾಶವನ್ನು ಪಡೆಯಲಿದ್ದಾರೆ. ಪ್ರವಾಸ, ಯಾತ್ರೆಗಳು ಮಾನಸಿಕ ಶಾಂತಿಯನ್ನು ನೀಡಲಿವೆ. ಎಷ್ಟೋ ಬಾರಿ ನಿಮ್ಮ ಎಣಿಕೆಯಂತೆ ದೈವ ಸಹಾಯವಿದ್ದು, ಕಾರ್ಯ ಸುಗಮವಾಗಲಿದೆ. ವಾರಾಂತ್ಯ ಶುಭವಿದೆ.
ಮಿಥುನ: ಎಲ್ಲ ವಿಚಾರಗಳಲ್ಲಿ ಜಾಗ್ರತೆಯಿಂದ ಮುಂದುವರಿದಲ್ಲಿ ಅದೇ ಪ್ರಯತ್ನ ಬಲದಲ್ಲಿ ಕಾರ್ಯಸಾಧನೆಯಾಗುತ್ತದೆ. ಅನೇಕ ಸಲ ನಿರ್ಧರಿಸುವ ವೇಳೆಗೆ ಕಾರ್ಯಮುಗಿದಿರುತ್ತದೆ. ಹೊಸ ಯೋಜನೆಯೊಂದು ರೂಪ ತಳೆದೀತು.
ಕರ್ಕ: ವಾರಾಂತ್ಯದಲ್ಲಿ ಶುಭವಿದೆ. ದಾಯಾದಿ ಕಲಹ, ಮಾನಸಿಕ ಕಿರಿಕಿರಿಗೆ ಕಾರಣವಾದೀತು. ತಾಳ್ಮೆ ಇರಲಿ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣದ ಯೋಗವಿದೆ. ಸ್ವತಂತ್ರ ವೃತ್ತಿಯವರಿಗೆ ಕ್ಷೇತ್ರ ವಿಸ್ತರಣೆಗೆ ಅವಕಾಶ ತಂದೀತು.
ಸಿಂಹ: ಕಫ ಬಾಧೆಯಿಂದ ಅನಾರೋಗ್ಯ ಅವರನ್ನು ಕಾಡಲಿದೆ. ನಿಮ್ಮ ವಿಶ್ವಾಸ ದುರುಪಯೋಗವಾಗದಂತೆ ಜಾಗ್ರತೆವಹಿಸಿರಿ. ರಾಜಕೀಯ ವರ್ಗದಲ್ಲಿ ಸ್ಥಾನಮಾನ, ಗೌರವ ಬೆಳೆಯಲಿದೆ. ಹೊಸ ಯೋಜನೆಗಳಿಗೆ ಧನ ವಿನಿಯೋಗವಾದೀತು
ಕನ್ಯಾ: ಸ್ವಪ್ರಯತ್ನ ಪ್ರಾಮಾಣಿಕವಾಗಿದ್ದರೂ ಅಸಫಲವೇ. ದುಃಖ ದುಮ್ಮಾನದ ವಾರ. ಕಾರ್ಯಕ್ಷೇತ್ರದಲ್ಲಿ ಹಲವು ವೈರುಧ್ಯಗಳು ಗಂಭೀರ ಸ್ವಭಾವದ ನಿಮಗೆ ಅಚ್ಚರಿ ತಂದೀತು. ಅನಾವಶ್ಯಕ ಖರ್ಚುವೆಚ್ಚಗಳು ಬಂದಾವು.
ತುಲಾ: ಲಾಭ ಸ್ಥಾನದ ಶುಕ್ರ ನಿಮ್ಮ ಚಿಂತನೆಗೆ ಸಾಧಕನಾಗುವನು, ಮುನ್ನಡೆಯಿರಿ. ಆರೋಗ್ಯದಲ್ಲಿ ಪಿತ್ತ, ಉಷ್ಣವಾಯು ಪ್ರಕೋಪ ತೋರಿಬರಲಿದೆ. ಮಕ್ಕಳೊಡನೆ ವಿರಸ ತಂದೀತು. ವಿದ್ಯಾರ್ಥಿ ಗಳಿಗೆ ವಿದ್ಯಾರ್ಜನೆಯಲ್ಲಿ ಕೊಂಚ ಹಿನ್ನಡೆ ಕಾಣಿಸಬಹುದು.
ವೃಶ್ಚಿಕ: ಉಳಿತಾಯವೆಲ್ಲ ಇಳಿತಾಯದಲ್ಲಿ ಕರಗದಂತೆ ಜಾಗ್ರತೆ ವಹಿಸಿರಿ. ಯಾವುದಕ್ಕೂ ದೃಢ ನಿರ್ಧಾರದಿಂದ ಮುಂದುವರಿಯಿರಿ. ನಿಮ್ಮಿಷ್ಟದಂತೆ ಯೋಜನೆಗಳು ಸಫಲವಾಗಿ ಸಾಂಸಾರಿಕ ಸುಖ ಸುಧಾರಿಸಲಿದೆ. ವಾರಾಂತ್ಯ ಶುಭವಿದೆ.
ಧನು: ಬಂಧುಗಳನ್ನು ಉಪಚರಿಸಲು ಹೋಗಿ ಉಪದ್ರವ ತಂದುಕೊಳ್ಳುವಿರಿ. ಚರ್ಚೆ ವಿಚಾರ ವಿನಿಮಯದಿಂದ ಕಾರ್ಯಸಿದ್ಧಿ. ಧಾರ್ಮಿಕ ಕೃತ್ಯಗಳಲ್ಲಿ ಬಿಡುವಿಲ್ಲದ ದುಡಿಮೆ. ವಾತಮಯದಿಂದ ದೇಹಾಯಾಸ ತಲೆದೋರಲಿದೆ.
ಮಕರ: ಯೋಗ್ಯ ವಯಸ್ಕರಿಗೆ ವೈವಾಹಿಕ ಭಾಗ್ಯಕ್ಕೆ ಕಾಯುವ ಪ್ರಸಂಗ ಬರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಮೂಲಧನಕ್ಕೆ ಹಾನಿಯಾಗದಂತೆ ಜಾಗ್ರತೆ ವಹಿಸಿರಿ. ಆದಾಯ ಉತ್ತಮವಿದ್ದರೂ ವ್ಯಯದ ಬಾಬ್ತುಗಳು ಅಧಿಕವಾಗಲಿವೆ.
ಕುಂಭ: ದೇವತಾ ಕಾರ್ಯಗಳಿಗೆ ಇದು ಸಕಾಲ. ವಿದ್ಯಾಭ್ಯಾಸದಲ್ಲಿ ಕೊರತೆ, ಹಿನ್ನಡೆಗೆ ಕಾರಣವಾದೀತು. ಎಚ್ಚರಿಕೆಯಿಂದ ನಡೆದಲ್ಲಿ ಕೋರ್ಟು, ಕಚೇರಿ ವ್ಯವಹಾರದಲ್ಲಿ ಸಮಾಧಾನ ತಂದು ಕೊಡಲಿದೆ. ದೇವತಾ ಕಾರ್ಯಗಳಿಗೆ ಇದು ಸಕಾಲ.
ಮೀನ: ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ಅಕ್ರಮ ವ್ಯವಹಾರ ಬೆಳಕಿಗೆ ಬಂದು ಮಾನಹಾನಿಯಾದೀತು. ಧನಾಗಮನವಿದ್ದರೂ ಸಹಾಯಕರ ಸಮಸ್ಯೆಯಿಂದ ಅಧಿಕಾರಿ ವರ್ಗದ ಉಪದ್ರವ, ಸಮಸ್ಯೆಗಳು ತೋರಿ ಬರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ
Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ
Horoscope Today: ಈ ರಾಶಿಯವರಿಗೆ ಅಕಸ್ಮಾತ್ ಧನಾಗಮ ಯೋಗ ಇರಲಿದೆ
Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ