ಇಂದಿನ ಗ್ರಹಬಲ: ಈ ರಾಶಿಯ ಸಂದರ್ಶನ ನಿರುದ್ಯೋಗಿಗಳಿಗೆ ಕಿರಿಕಿರಿಯಿಂದ ಬೇಸರ ತರಲಿದೆ.


Team Udayavani, Mar 27, 2021, 8:04 AM IST

ಇಂದಿನ ಗ್ರಹಬಲ: ಈ ರಾಶಿಯ ಸಂದರ್ಶನ ನಿರುದ್ಯೋಗಿಗಳಿಗೆ ಕಿರಿಕಿರಿಯಿಂದ ಬೇಸರ ತರಲಿದೆ.

27-03-2021

ಮೇಷ: ಕೌಟುಂಬಿಕವಾಗಿ ಉತ್ತಮ ಸಹಕಾರ ಕೊಡುತ್ತಿದ್ದ ಹಿರಿಯರು ಕ್ರಮೇಣ ದೂರ ಸರಿದಾರು. ವ್ಯಾಪಾರ ವ್ಯವಹಾರದಲ್ಲಿ ಹೇಳಿಕೊಳ್ಳುವಷ್ಟು ಲಾಭವಿದ್ದರೂ ತೃಪ್ತಿ ಇರದು. ಮನಸ್ಸಿನ ನೆಮ್ಮದಿಗಾಗಿ ಯಾತ್ರೆ ಸಂಭವ.

ವೃಷಭ: ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಫ‌ಲಗಳಿಂದ ಸಂಭ್ರಮ ತಂದೀತು. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಸಾಮಾಜಿಕವಾಗಿ ಪ್ರಶಂಸೆ ಕೇಳಿ ಬಂದೀತು. ವೈಯಕ್ತಿಕವಾಗಿ ಹೆಸರಿಗೆ ಕೆಸರೆರೆಚುವ ಪ್ರಸಂಗ ನಡೆದೀತು.

ಮಿಥುನ: ಕಲೆ, ಸಂಗೀತ, ಚಿತ್ರ ಜಗತ್ತಿನಲ್ಲಿ ಆರ್ಥಿಕವಾಗಿ ಲಾಭದಾಯಕವೇ ಆದೀತು. ಸರಕಾರೀ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ. ಶುಭಕಾರ್ಯಕ್ಕಾಗಿ ಚಿನ್ನ, ಬೆಳ್ಳಿಯ ಖರೀದಿ ನಡೆದು ಖರ್ಚು ಆದರೂ ಸಂತಸವಿರುತ್ತದೆ.

ಕರ್ಕ: ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಸೂಚನೆಯಿಂದ ಸಮಾಧಾನವಿದೆ. ಆರೋಗ್ಯದಲ್ಲಿ ಶೀತ, ಪಿತ್ತೋಷ್ಣ ಪ್ರಕೋಪ ತಂದೀತು. ಕೌಟುಂಬಿಕವಾಗಿ ಸಹೋದರ ವರ್ಗದಲ್ಲಿ ಮನಸ್ತಾಪಕ್ಕೆ ಕಾರಣವಾದೀತು. ಅತಿಥಿಗಳು ಬಂದಾರು.

ಸಿಂಹ: ವಿತ್ತ ಖಾತೆ, ಜೀವವಿಮೆ ವರ್ಗದಲ್ಲಿ ಶೇರು, ಲಾಟರಿಯಲ್ಲಿ ತುಸುಮಟ್ಟಿನ ಚೇತರಿಕೆಯಿಂದ ಜೀವಕಳೆ ತುಂಬಲಿದೆ. ಆದರೂ ಜಾಗ್ರತೆ ವಹಿಸಬೇಕಾದೀತು. ಸಂದರ್ಶನ ಕಿರಿಕಿರಿಯಿಂದ ನಿರುದ್ಯೋಗಿಗಳಿಗೆ ಬೇಸರ ತರಲಿದೆ.

ಕನ್ಯಾ: ಅನಿರೀಕ್ಷಿತ, ತಾತ್ಕಾಲಿಕ ಉದ್ಯೋಗವು ದೊರೆತು ಸಮಾಧಾನ ಹಾಗೂ ಲಾಭವಾದೀತು. ಮಕ್ಕಳೊಂದಿಗೆ ವಿರಸ ಕಂಡುಬಂದೀತು. ಪ್ರೀತಿ, ವಿಶ್ವಾಸದಿಂದ ವರ್ತಿಸಿರಿ. ನಿಮ್ಮ ಒರಟು ವರ್ತನೆ ಇತರರಿಗೆ ಸಹ್ಯವಾಗುವುದಿಲ್ಲ.

ತುಲಾ: ಪರಿವರ್ತನೆಯ ಕಾಲಚಕ್ರದ ಅನುಭವ ವಾಗಲಿದೆ. ಶತ್ರುಗಳ ಕಾಟ, ವಿರೋಧಗಳು ತಣ್ಣಗಾಗ ಲಿದೆ. ನಿಮ್ಮಿಷ್ಟದಂತೆ ಚಿಂತಿತ ಕಾರ್ಯಗಳು, ವಿಚಾರ ಗಳು ಕಾರ್ಯಗತವಾಗಿ ಫ‌ಲ ನೀಡಲಿದೆ. ಯಾತ್ರಾದಿಗಳು ಕೂಡಿಬರಲಿದೆ.

ವೃಶ್ಚಿಕ: ಋಣಭಾರದ ಚಿಂತೆ ಪರಿಹಾರವಾಗಲಿದೆ. ಯಾತ್ರೆ, ದೇವತಾ ಕಾರ್ಯಗಳು ನಡೆದೀತು. ಅವಿರತ ಕಾರ್ಯದೊತ್ತಡದಿಂದ ದೇಹಾಯಾಸ ತಂದೀತು. ನೂತನ ಮಿತ್ರರ ಭೇಟಿಯಿಂದ ಕಾರ್ಯಸಾಧನೆ ಸಾಧ್ಯವಾಗಲಿದೆ.

ಧನು: ಸ್ವ ಪ್ರಯತ್ನ ಪ್ರಾಮಾಣಿಕವಾಗಿದ್ದರೂ ಫ‌ಲ ಸಿಗದು. ಆರ್ಥಿಕವಾಗಿ ಆಕಸ್ಮಿಕ ಧನಪ್ರಾಪ್ತಿಯಿಂದ ಕೊಂಚ ನೆಮ್ಮದಿ ತರಲಿದೆ. ಕಾರ್ಯಕ್ಷೇತ್ರದಲ್ಲಿ ಹಲವು ವಿರುದ್ಧ ಗಳು ಗಂಭೀರ ಸ್ವಭಾವ, ಸ್ವಾಭಿಮಾನಿಗಳಾದ ನಿಮಗೆ ಅಚ್ಚರಿ ತಂದೀತು.

ಮಕರ: ಅನೇಕ ವಿರುದ್ಧಗಳ ನಡುವೆಯೂ ನಿಮ್ಮ ಕಾರ್ಯದಲ್ಲಿ ಜಯವಿದೆ. ಕೌಟುಂಬಿಕವಾಗಿ ಖರ್ಚು ವೆಚ್ಚಗಳು ಅಧಿಕವಾದಾವು. ಅವಿವಾಹಿತರ ವಿವಾಹದ ಬಗ್ಗೆ ಮಾತುಕತೆಗೆ ಹೆಚ್ಚಿನ ಪ್ರಯತ್ನ ಅಗತ್ಯವಿರುತ್ತದೆ. ಮುನ್ನಡೆಯಿರಿ.

ಕುಂಭ: ಹೊಸ ಉದ್ಯೋಗಿಗಳಿಗೆ ಅವಿರತ ದುಡಿಮೆಯ ಬಿಸಿ ತಟ್ಟಲಿದೆ. ಕೆಲವೊಮ್ಮೆ ನಿಮ್ಮ ಆತ್ಮಶಕ್ತಿಯ ಬಗ್ಗೆ ನಿಮಗೇ ಆಶ್ಚರ್ಯ ಹುಟ್ಟಲಿದೆ. ಅಧಿಕಾರಿ ವರ್ಗದ ವಿರೋಧ, ಹಿರಿಯರ ಅಪಸ್ವರದ ನಡುವೆ ಮಡದಿ ಆಪ್ತಳಾದಾಳು.

ಮೀನ: ಧನಾದಾಯಕ್ಕೆ ವಿಳಂಬವಾದೀತು. ಮಾತು ಕಠಿಣವಾದೀತು. ನಾಲಗೆಯಲ್ಲಿ ಹಿಡಿತವಿರಲಿ. ಸ್ವತಂತ್ರ ವ್ಯವಹಾರಕ್ಕೆ ಸದ್ಯ ಉತ್ತಮ ಕಾಲವಲ್ಲ. ಗೃಹದಲ್ಲಿ ಶಾಂತಿ, ಸಮಾಧಾನಕ್ಕಾಗಿ ಗೃಹಿಣಿಯ ಸಲಹೆ, ಸೂಚನೆಗೆ ಬೆಲೆ ಕೊಡಿರಿ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.