ಇಂದಿನ ಗ್ರಹಬಲ: ಈ ರಾಶಿಯವರಿಗೆ ಗೃಹ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ.
Team Udayavani, Apr 11, 2021, 7:52 AM IST
11-04-2021
ಮೇಷ: ತುಂಬಾ ಚಟುವಟಿಕೆ ಹಾಗೂ ಹರುಷದಿಂದ ಇರುವ ಕಾಲವಿದು. ನಿಮಗೆ ಇದು ಅತೀ ಮಹತ್ವದ ದಿನವಾದೀತು. ವ್ಯವಹಾರಿಕವಾಗಿ ನಿಮ್ಮ ಪ್ರಯತ್ನಬಲಕ್ಕೆ ಹೆಚ್ಚಿನ ಲಾಭ ಕಂಡುಬರುವುದು. ಆದರೂ ಮನಃಶಾಂತಿ ಇಲ್ಲ.
ವೃಷಭ: ಮನೆಯಲ್ಲಿ ಅವಿವಾಹಿತರಿಗೆ ನೆಂಟಸ್ತಿಕೆಯ ಮಾತುಕತೆಗಳು ಫಲ ನೀಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭಿಸಲಿದೆ. ಮಕ್ಕಳ ಜವಾಬ್ದಾರಿಯು ನಿಮ್ಮ ತಲೆಮೇಲಿದೆ. ಕರ್ತವ್ಯದಿಂದ ಭಾರ ಕಂಡುಬಂದೀತು.
ಮಿಥುನ: ನಿಮ್ಮ ಹೆಚ್ಚಿನ ಕೆಲಸಕಾರ್ಯಗಳು ಚಾಲನೆಗೆ ಬರುವುದು. ಇದರಲ್ಲಿ ನೀವು ಮುಂದುವರಿಯುವ ಅವಕಾಶವಿದೆ. ಗೃಹ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ. ಮನೆಯಲ್ಲಿ ಕೆಲಸದ ತಲೆಬಿಸಿಯು ಕಂಡುಬರುವುದು.
ಕರ್ಕ: ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನಗಳೆರಡರಲ್ಲೂ, ಹಠಾತ್ ಪ್ರಗತಿ ಯಾ ಸೋಲು ಕಂಡುಬರಬಹುದು. ಸಿಹಿ ಯಾ ಕಹಿಯನ್ನು ಯಾವಾಗಲೂ ಸಮಾನವಾಗಿ ಸ್ವೀಕರಿಸಲು ಸಿದ್ಧರಾಗಿರಿ. ಧೈರ್ಯದಿಂದ ಮುನ್ನಡೆಯಿರಿ.
ಸಿಂಹ: ಒಟ್ಟಿನಲ್ಲಿ ಹೇಳುವುದಾದರೆ ನೀವು ಅದೃಷ್ಟದ ಕೈಗೊಂಬೆಯಾಗುವಿರಿ. ವ್ಯಾಪಾರಿಗಳ ದೈನಂದಿನ ಜೀವನದಲ್ಲಿ ಗೊಂದಲ, ಸಮಸ್ಯೆಗಳು ತೋರಿಬಂದಾವು. ಕೌಟುಂಬಿಕ ವ್ಯವಹಾರದಲ್ಲಿ ಅನಿರೀಕ್ಷಿತ ಖರ್ಚುವೆಚ್ಚ ಕಂಡುಬಂದೀತು.
ಕನ್ಯಾ: ಸಂಬಂಧಿಕರಿಂದ ನಿಮಗೆ ಸಹಾಯಹಸ್ತ ಒದಗಿಬಂದೀತು. ನಿಮ್ಮ ಕಾರ್ಯಕ್ಷೇತ್ರದ ವ್ಯವಹಾರಗಳನ್ನು ಮುಗಿಸಲು ತುರಾತುರಿಯಿಂದ ಮುಂದುವರಿಯಬೇಕಾದೀತು. ಇಲ್ಲವಾದಲ್ಲಿ ನಿಮ್ಮ ಕೆಲಸ ವಿಳಂಬಗತಿ ಕಾಣಲಿದೆ.
ತುಲಾ: ಸಾಮಾಜಿಕವಾಗಿ ಜನಪ್ರಿಯತೆ, ಗೌರವ, ಸ್ಥಾನಮಾನ ಸಿಗಲಿದೆ. ಕೌಟುಂಬಿಕ ವಾತಾವರಣ ಜಟಿಲವಾಗಲಿದೆ. ದೂರದಲ್ಲಿದ್ದವರೊಬ್ಬರು ನಿಮ್ಮ ವ್ಯವಹಾರದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಅತೀ ವಿಶ್ವಾಸ ಮಾಡದಿರಿ.
ವೃಶ್ಚಿಕ: ಅದೃಷ್ಟವು ತೂಗುಯ್ನಾಲೆ ಆಡಿಸುತ್ತದೆ. ಆರೋಗ್ಯದ ಬಗ್ಗೆ ಮೊದಲೇ ಜಾಗೃತರಾಗಿರುವುದು ಲೇಸು. ಆರ್ಥಿಕ ಅಡಚಣೆಗಳು ದೂರವಾಗಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಸಾಮಾಜಿಕವಾಗಿ ಸ್ಥಾನಮಾನ, ಗೌರವ ಹೆಚ್ಚಲಿದೆ.
ಧನು: ದೂರಸಂಚಾರದಲ್ಲಿ ಯಶಸ್ಸು ತೋರಿಬರುವುದು. ಕೌಟುಂಬಿಕ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ನಿರುದ್ಯೋಗಿಗಳಿಗೆ ಮುಂದಿನ ಯೋಜನೆಗಳ ಬಗ್ಗೆ ಸ್ಪಷ್ಟ ಚಿತ್ರಣ ಹೊಳೆಯಲಿದೆ. ಆರೋಗ್ಯಭಾಗ್ಯವು ವರ್ದಿಸಲಿದೆ.
ಮಕರ: ವ್ಯಾಪಾರಿಗಳ ಜೀವನದಲ್ಲಿ ಭಾರೀ ಚಟುವಟಿಕೆಯ ಕಾಲವಿದು. ಲಾಭದಾಯಕ ಆದಾಯವು ವ್ಯವಹಾರದಲ್ಲಿ ತೋರಿ ಬರುವುದು. ಇದರಿಂದ ಸಂತಸವಾದೀತು. ನೂತನ ವ್ಯಾಪಾರ, ವ್ಯವಹಾರ ಯಾ ಚಟುವಟಿಕೆಗಳಲ್ಲಿ ತೊಡಗಿಸುವಿರಿ.
ಕುಂಭ: ನಿಮ್ಮ ಜೀವನವು ಹೊಸ ವಾತಾವರಣದಿಂದ ಸಂತಸ ಹಾಗೂ ಭಾಂದವ್ಯ ಗಟ್ಟಿಯಾಗಿ ಸಮಾಧಾನವಾದೀತು. ಸ್ವಲ್ಪ ಅದೃಷ್ಟದ ಸೆಲೆಯು ಕಂಡುಬಂದೀತು. ಮನೆಯಲ್ಲಿ ನಿಮ್ಮ ಚಿಂತನೆಗೆ ಸಮರ್ಥನೆ ಇಲ್ಲವೆಂದು ಚಿಂತಿಸದಿರಿ.
ಮೀನ: ಈ ಮಧ್ಯೆ ಉತ್ತಮ ಮಹತ್ವದ ಘಟನೆಗಳು ಕಂಡುಬಂದಾವು. ಹಣದ ಮುಗ್ಗಟ್ಟು ಕಂಡು ಬರಲಿದೆ. ಎಷ್ಟು ಬಂದರೂ ಸಾಲದೆಂಬಂತೆ ಇದೆ. ಪ್ರಣಯ ಪ್ರಸಂಗದಿಂದ ಜಾರಿಕೊಳ್ಳುವುದೇ ಲೇಸು. ಮುನ್ನಡೆಯಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ
ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ
ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ
ಹೊಸ ಸೇರ್ಪಡೆ
ಇ-ಸ್ಟ್ಯಾಪಿಂಗ್ ಸೌಲಭ್ಯ ಯಶಸ್ವಿಯಾಗಲಿ: ರವೀಂದ್ರ
ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ
ದೇವದುರ್ಗ ತಾಲೂಕಲ್ಲಿ 193 ಶಿಥಿಲಗೊಂಡ ಕಟ್ಟಡ: ಮಕ್ಕಳಿಗೆ ಬಯಲಲ್ಲೇ ಪಾಠ
ಮುಂಬೈ-ಪುಣೆ ಎಕ್ಸ್ಪ್ರೆಸ್ವೇ: ಬಸ್ಗೆ ಕಾರು ಢಿಕ್ಕಿ; ಎನ್ಸಿಪಿ ಶಾಸಕ ಸಂಗ್ರಾಮ್ ಪಾರು