ನಿಮ್ಮ ಇಂದಿನ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು
Team Udayavani, Feb 19, 2021, 8:03 AM IST
19-02-2021
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ರೀತಿಯಲ್ಲಿ ಆಸಕ್ತಿಯು ತೋರಿಬರುವುದು. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಹೆಚ್ಚು ಶ್ರಮ ಪಡಬೇಕಾದೀತು. ಉತ್ತಮ ಧನಾಗಮನವಿದ್ದರೂ ಮನಸ್ಸಿಗೆ ಸಮಾಧಾನವಿಲ್ಲ.
ವೃಷಭ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ದಬ್ಟಾಳಿಕೆಯು ಕಂಡುಬಂದು ಮನಸ್ಸು ರೋಸಿ ಹೋದೀತು. ಸಾಮಾಜಿಕವಾಗಿ ಹಲವು ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ವ್ಯವಧಾನವೇ ದೊರಕದು. ಶುಭವಿದೆ.
ಮಿಥುನ: ಶಿಕ್ಷಣ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆ ಇದ್ದರೂ ಸ್ಥಾನಮಾನ, ಗೌರವ, ಪ್ರಶಂಸೆಗೆ ಕುಂದು ಬಾರದು. ಶುಭದಿನಗಳು ಒಂದೊಂದಾಗಿ ಕಂಡುಬಂದು ಸಂತೋಷ ತರುವುದು. ತಾಳ್ಮೆಯಿಂದ ಕಾಯಿರಿ.
ಕರ್ಕ: ಪ್ರಾರಂಭಿಸಿರುವ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಕೈಗೂಡಿ ಸಮಾಧಾನ ತರಲಿದೆ. ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು. ಮಿತ್ರರಿಂದ ಸಹಕಾರವು ದೊರೆಯಲಿದೆ.
ಸಿಂಹ: ಉದ್ಯೋಗಿ ಜನರಿಗೆ ಅನಿರೀಕ್ಷಿತವಾಗಿ ಮುಂಭಡ್ತಿಯ ಅವಕಾಶವು ಒದಗಿ ಬರುವುದು. ಆರ್ಥಿಕವಾಗಿ ಖರ್ಚಿನ ಅಂಶವು ಅಧಿಕವಾಗಲಿದ್ದು ಆಲೋಚನೆಗೆ ಆಸ್ಪದ ತರುವುದು. ಒಳ್ಳೆಯ ದಿನಗಳಿವೆ.
ಕನ್ಯಾ: ವ್ಯಾಪಾರಾದಿ ಉದ್ಯಮಗಳಲ್ಲಿ ಲಾಭಾಂಶವು ಹಂತಹಂತವಾಗಿ ಹೆಚ್ಚಲಿದೆ. ಸಾಂಸಾರಿಕ ಜೀವನದಲ್ಲಿ ಸ್ವಲ್ಪ ವಿರಸ ಉಂಟಾಗಬಹುದಾದರೂ ಸುಧಾರಿಸಿ ಕೊಂಡು ಹೋಗಬಹುದು. ಬೆಸ್ತರಿಗೆ ಸ್ವಲ್ಪ ಉತ್ತಮವಿದೆ.
ತುಲಾ:ದೇಹಾರೋಗ್ಯದ ಬಗ್ಗೆ ಗಮನಕೊಡಿರಿ. ನೂತನ ಕಾರ್ಯಾರಂಭಕ್ಕೆ ದುಡುಕದಿರಿ. ಅವಿವಾಹಿತರಿಗೆ ಇದು ಉತ್ತಮ ಕಾಲವಲ್ಲ . ತಾಳ್ಮೆ ಸಮಾಧಾನದಿಂದ ಕಾಯುವುದು ಉತ್ತಮ. ಮನಸಂಕಲ್ಪ ಉತ್ತಮವಿರಲಿ.
ವೃಶ್ಚಿಕ: ಪ್ರಯತ್ನಬಲಕ್ಕೆ ಹೆಚ್ಚಿನ ಒತ್ತು ನೀಡಿದರೆ ಕಾರ್ಯದಲ್ಲಿ ಸಫಲವಾಗುವಿರಿ. ಆಗಾಗ ಅನಾರೋಗ್ಯದ ಅನುಭವವಾದರೂ ಒಟ್ಟಿನಲ್ಲಿ ಆರೋಗ್ಯವು ಉತ್ತಮವಿರುವುದು. ವೃತ್ತಿರಂಗದಲ್ಲಿ ಸ್ಥಾನಮಾನ ದೊರಕೀತು.
ಧನು: ನಿಮ್ಮ ಇಷ್ಟ ಕಾರ್ಯಗಳು ವಿಳಂಬ ಗತಿಯಲ್ಲಿ ನಡೆದರೂ ನೆರವೇರಿ ಸಂತೋಷ, ಸುಖಗಳು ದೊರಕಲಿದೆ. ಗೃಹದಲ್ಲಿ ಪತ್ನಿ, ಮಕ್ಕಳಿಂದ ಸಹಕಾರ ದೊರೆತು ಸಮಾಧಾನವಾಗಲಿದೆ. ದಿನವಿಡೀ ದುಡಿತವಿದೆ.
ಮಕರ: ಕೌಟುಂಬಿಕವಾಗಿ ಸಮಾಧಾನವಿದ್ದರೂ ಮನಸ್ಸಿ ನೊಳಗೆ ಚಿಂತೆಗಳು ಕಾಡಲಿವೆ. ನೀವು ಸದಾಕಾಲ ಚಟುವಟಿಕೆಯಿಂದ ಇರುವುದು ಒಳ್ಳೆಯದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಇದೆ.
ಕುಂಭ: ಒಮ್ಮೊಮ್ಮೆ ಮನಸ್ಸು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಪೇಚಾಡಬೇಕಾದೀತು. ಆರ್ಥಿಕ ಸ್ಥಿತಿ ಒಂದು ಹಂತದಲ್ಲಿ ಅಭಿವೃದ್ಧಿಯಾಗಿ ಹೋಗುತ್ತಲೇ ಇರುತ್ತದೆ. ಆರೋಗ್ಯ ಸ್ಥಿತಿಯು ತೃಪ್ತಿಕರವಾಗಿ ಸಂತಸ.
ಮೀನ: ಯಾವುದೇ ರೀತಿಯ ತಾಪತ್ರಯಗಳಿಗೆ ಸಿಲುಕದಂತೆ ಜಾಗ್ರತೆ ವಹಿಸಿರಿ. ನಿಮ್ಮ ಹಿತಶತ್ರುಗಳು ನಿಮ್ಮನ್ನು ಸಿಲುಕಿಸಿಯಾರು. ಆರ್ಥಿಕವಾಗಿ ಅಭಿವೃದ್ಧಿ ಇದ್ದರೂ ನಿಮ್ಮ ತಾಪತ್ರಯ ಮುಗಿಯದು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫಲ
Daily horoscope;ಅಧಿಕ ಶುಭಫಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ
Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ
Daily horoscope: ಈ ರಾಶಿಯ ಗೃಹಿಣಿಯರ ಆದಾಯ ಹೆಚ್ಚಳವಾಗಲಿದೆ
MUST WATCH
ಹೊಸ ಸೇರ್ಪಡೆ
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?