ಕನಕಪುರ ಬಂಡೆಗೇ “ಬಂಡೆಯ ಹಾರ’ ಹಾಕಿದಾಗ…
Team Udayavani, Mar 29, 2023, 6:48 AM IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಭಿಮಾನಿಗಳು ಕನಕಪುರದ ಬಂಡೆ ಎಂದು ಪ್ರೀತಿಯಿಂದ ಕರೆಯುವ ವಾಡಿಕೆಯುಂಟು. ಡಿಕೆಶಿಯವರು ಎಂಥದ್ದೇ ಸಮಯದಲ್ಲೇ ಆಗಲಿ, ಬಂಡೆಯಂತೆ ಗಟ್ಟಿಯಾಗಿರ್ತಾರೆ ಎಂಬುದು ಈ ಮಾತಿನ ಮೂಲಾರ್ಥ.
ಡಿಕೆಶಿ ಕೂಡ ಅಭಿಮಾನಿಗಳ ಈ ಪ್ರೀತಿಯ ಬಿರುದನ್ನು ಒಪ್ಪಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಪ್ರಜಾಧ್ವನಿಯಾತ್ರೆ ನಡೆಸಿದ್ದು ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿಗೆ “ಬಂಡೆಯ ಹಾರ’ವನ್ನೇ ಹಾಕಿದ್ದಾರೆ.
ಈ ಮೂಲಕ ಕನಕಪುರ ಬಂಡೆಯನ್ನು ಯಾರಿಂದರೂ ಹೊಡೆಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಥರ್ಮಕೋಲ್ನಿಂದ ಈ ಬಂಡೆ ಹಾರವನ್ನು ತಯಾರಿಸಲಾಗಿದೆ. ಮೈಸೂರಿನ ಕಲಾವಿದರು ಈ ಹಾರ ತಯಾರಿಸಿಕೊಟ್ಟಿದ್ದಾರೆ.
ಎಲ್ಲರೂ ಹಣ್ಣು, ಹೂವು, ತರಕಾರಿಯಲ್ಲಿ ಹಾರ ಮಾಡಿ ಹಾಕುತ್ತಾರೆ. ಆದರೆ ನಮ್ಮ ಡಿಕೆಶಿಗೆ ನಾವು ಬಂಡೆಯ ಹಾರವನ್ನೇ ಹಾಕಿದ್ದೇವೆ ಎಂದು ಕಾರ್ಯಕರ್ತರು ಖುಷಿಯಿಂದ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?