ಏನು ಹೇಳಿದರೂ ನಿನದೇ ಸರಿ …ಸಂಕಟ ಕಾಲದಲ್ಲಿ ಮತದಾರನೇ ವೆಂಕಟರಮಣ !

ದನವನ್ನೇ ಕರ್ಕೊಂಡು ಬನ್ನಿ ಎಂದರೆ ಕಷ್ಟ ಸಾಹೇಬ್ರೇ ಎಂದನಂತೆ

Team Udayavani, Mar 20, 2023, 6:05 PM IST

ಏನು ಹೇಳಿದರೂ ನಿನದೇ ಸರಿ …ಸಂಕಟ ಕಾಲದಲ್ಲಿ ಮತದಾರನೇ ವೆಂಕಟರಮಣ !

ಸಾಹೇಬ್ರು ಈಗ ಸಿಕ್ಕಾಪಟ್ಟೆ ಬ್ಯುಸಿ. ಸದ್ಯ ಇನ್ನು ಮೂರು ತಿಂಗಳು ವಾಕಿಂಗ್‌, ಜಿಮ್‌ ಅಥವಾ ವ್ಯಾಯಾಮ ಯಾವುದಕ್ಕೂ ಸಮಯವಿಲ್ಲ. ಎಲ್ಲದಕ್ಕೂ ರಜೆ ಹೇಳಿದ್ದಾರೆ. ಈಗ 24ಗಿ7 ಚುನಾವಣೆ.. ಚುನಾವಣೆ..ಚುನಾವಣೆ.

ಬೆಳ್ಳಂ ಬೆಳಗ್ಗೆ 5.30ರಿಂದಲೇ ಕಾರ್ಯಾಚರಣೆ ಆರಂಭ. “ಸಾಹೇಬ್ರ ಕಚೇರಿ’ ಆ ಹೊತ್ತಿಗೇ ಕಾರ್ಯಾಚರಿಸ ತೊಡಗುತ್ತದೆ. ನಿತ್ಯವೂ ಬೆಳಗ್ಗೆ ವಾಯು ವಿಹಾರಕ್ಕೆ ಹೋಗುವ ಮತದಾರರಿಗೆ ಸಾಹೇಬ್ರ ಕಚೇರಿಯಲ್ಲಿ ಬೆಳಕಿರುವುದು ಕಂಡು ಅಚ್ಚರಿ. “ಸಾಹೇಬ್ರು ಸಿಕ್ಕಾಪಟ್ಟೆ ಹಾರ್ಡ್‌ ವರ್ಕ್‌ ಮಾಡ್ತಾರೆ. ಮಾಡಲಿ, ಐದು ವರ್ಷಕ್ಕೊಮ್ಮೆಯಾದರೂ’ ಎಂದು ತಿಳಿ ಹಾಸ್ಯದ ಜೋಕ್‌ ಕಟ್‌ ಮಾಡಿ ಮುಂದುವರಿಯುತ್ತಾರೆ.

ಸದಾ ಸಾಹೇಬ್ರ ಕಚೇರಿ ಸಾರ್ವಜನಿಕರಿಗೆ, ಮತದಾರರಿಗೆ ತೆರೆದಿರುತ್ತದೆ. ಮಧ್ಯರಾತ್ರಿಯಲ್ಲಿ ಬಂದು, ಸಾಹೇಬ್ರೇ ಎಂದು ಸಣ್ಣಗೆ ಕೂಗಿದರೂ “ಬಂದೆ ಮಹಾಸ್ವಾಮಿಗಳೇ..’ ಎನ್ನುವ ಉತ್ತರ ಸಿಗುತ್ತದೆ. ದೇವಸ್ಥಾನಗಳಲ್ಲೂ ಇಂತಿಷ್ಟು ಅಂತ ಸಮಯ ಇದೆ. ಆದರೆ ನಮ್ಮ ಸಾಹೇಬ್ರ ದೇಗುಲಕ್ಕೆ (ಸರಕಾರಿ ಕೆಲಸವೇ ದೇವರ ಕೆಲಸ ಎಂದು ಬಗೆಯುವ ಪರಂಪರೆ ಯವರು) ಈ ಮೂರ್‍ನಾಲ್ಕು ತಿಂಗಳಿಗೆ ಇದೆಲ್ಲ ಅನ್ವಯವಾಗುವುದಿಲ್ಲ.

ಮೊನ್ನೆಯೊಂದು ಹಳ್ಳಿಯಲ್ಲಿ ನಡೆದ ಘಟನೆ. ಸಾಹೇಬ್ರು ಇರುವ ಹಳ್ಳಿಯಲ್ಲಿ ಮತದಾರನೊಬ್ಬನ ಮನೆಯಲ್ಲಿ ಮಧ್ಯರಾತ್ರಿ ಎನ್ನುವಾಗ ಹಸುವಿಗೆ ಹೊಟ್ಟೆನೋವು ಕಾಣಿಸಿಕೊಂಡತಂತೆ. ಏನು ಮಾಡಲಿಕ್ಕೂ ತೋಚದೆ ಮತದಾರ ಓಡಿ (ಸಾಹೇಬ್ರ ಕಚೇರಿ ತೆಗೆದಿರಬಹುದೆಂದೆನಿಸಿ) ಬಂದು ಸಾಹೇಬ್ರೆ ಎಂದನಂತೆ. ಮರುಕ್ಷಣವೇ ಸಾಹೇಬ್ರು “ಏನಪ್ಪಾ ನಿನ್ನ ಕಷ್ಟ’ ಎಂದು ಹಾಜರು. ಎಲ್ಲ ಕೇಳಿಸಿಕೊಂಡವರು “ದನದ ಡಾಡ್ಟ್ರುಗೆ ಫೋನ್‌ ಮಾಡ್ತೀನಿ ಈಗಲೇ’ ಎಂದರಂತೆ. ಅದಕ್ಕೆ ಮತದಾರ, ಅವ್ರೇ ಬಂದ್ರೆ ಒಳ್ಳೆಯದು, ದನವನ್ನೇ ಕರ್ಕೊಂಡು ಬನ್ನಿ ಎಂದರೆ ಕಷ್ಟ ಸಾಹೇಬ್ರೇ ಎಂದನಂತೆ.ಅದಕ್ಕೆ ಸಾಹೇಬ್ರು ಉತ್ಸಾಹದಿಂದ, “ಅದಕ್ಕೇನಂತೆ, ನನ್ನ ಕಾರಿಲ್ಲವಾ?’ ಎಂದು ಮೊಬೈಲ್‌ನತ್ತ ಕಣ್ಣು ನೆಟ್ಟರಂತೆ. ಚುನಾವಣೆ ಸಮಯ ಒಂದು ಮತವೂ ಗೆಲ್ಲಿಸಬಹುದು, ಸೋಲಿಸಲೂ ಬಹುದು !
ಡಾ| ಗಂಪತಿ

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.