ಕಾಟನ್‌ ಕಮಾಲ್ , ಬದಲಾದ ಹವಾಮಾನ ಕುದುರಿದ ಬೇಡಿಕೆ


Team Udayavani, Jul 12, 2019, 5:19 AM IST

cotton

ಮನುಷ್ಯನ ಜೀವನಶೈಲಿ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬದಲಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿಗನುಗುಣವಾಗಿ ಹೊಸತನ್ನು ಅನುಭವಿಸಲು ಮನುಷ್ಯ ಸಂಕುಲ ಸದಾ ಸಿದ್ಧವಾಗಿರುತ್ತದೆ. ಆದರೆ, ಜೀವನಶೈಲಿ ಬದಲಾವಣೆಯಷ್ಟೇ ವೇಗವಾಗಿ ಪ್ರಾಕೃತಿಕ ಬದಲಾವಣೆಗಳೂ ಘಟಿಸುತ್ತಿರುವುದರಿಂದ ಕೆಲವೊಮ್ಮೆ ಹಳೆಯದೇ ಹೊಸತಾಗಿ ಬದಲಾಗಿ ಟ್ರೆಂಡ್‌ ಸೃಷ್ಟಿಸಿಬಿಡುವುದಿದೆ. ಈ ಸಾಲಿನಲ್ಲಿದೆ ಶುದ್ಧ ಕಾಟನ್‌ ಟ್ರೆಂಡ್‌.

ಶುದ್ಧ ಹತ್ತಿ ನಿಸರ್ಗದ ಕೊಡುಗೆ. ಹೆಚ್ಚು ತಾಪಮಾನ ಇರುವೆಡೆ ಇದೊಂದು ವರದಾನ. ಬಿಸಿಯನ್ನು ಹೀರಿಕೊಳ್ಳುವ ಶಕ್ತಿ ಇರುವುದರಿಂದ ಕಾಟನ್‌ ಬಟ್ಟೆ, ಹಾಸಿಗೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಮಂಗಳೂರಿನಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಶುದ್ಧ ಕಾಟನ್‌ ಬಟ್ಟೆ, ಹಾಸಿಗೆಗಳಿಗೆ ಬೇಡಿಕೆ ಹೆಚ್ಚು

ಉಡುಗೆ ತೊಡುಗೆಗಳ ಸ್ಟೈಲ್ ಪ್ರತಿ ದಿನವೂ ಬದಲಾಗುತ್ತಲೇ ಇರುತ್ತದೆ. ದೇಶೀಯ ಶೈಲಿಯ ಧಿರಿಸು, ಪಾಶ್ಚಾತ್ಯ ಶೈಲಿಯ ಉಡುಗೆಗಳೊಂದಿಗೆ ಬೆರೆತು ಹೊಸ ಶೈಲಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಮೇಲಂತೂ ಜನ ಖರೀದಿಗೆ ಮುಗಿ ಬೀಳುವಂತಾಯಿತು. ಆದರೆ, ಪಾಶ್ಚಾತ್ಯ ಉಡುಗೆಗಳ ಟ್ರೆಂಡ್‌ ಹೆಚ್ಚಾದಂತೆ ದೇಸೀ ಉಡುಗೆಗಳಿಗೆ ಎಲ್ಲಿ ಬೇಡಿಕೆ ಕಡಿಮೆಯಾಗಿ ಬಿಡುತ್ತದೆಯೋ ಎಂಬ ಸಣ್ಣ ಆತಂಕವೂ ವ್ಯಾಪಾರಸ್ಥರಲ್ಲಿತ್ತು. ಆದರೆ ಬದಲಾದ ಹವಾಗುಣ, ದೇಸೀ ಉಡುಗೆಗಳ ಮೋಹ ಜನರಲ್ಲಿ ಆ ಉಡುಗೆಗಳ ಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಅಂತಹ ದೇಸೀ ಉಡುಗೆ-ತೊಡುಗೆಗಳ ಪೈಕಿ ಕಾಟನ್‌ ಬಟ್ಟೆಗಳಿಗೆ ಸ್ಥಾನ ಇದ್ದೇ ಇದೆ.

ಮಳೆಗಾಲಕ್ಕೆ ಸಿಂಥೆಟಿಕ್‌, ಚಳಿಗಾಲಕ್ಕೆ ಉಣ್ಣೆ, ಖಾದಿ, ಬೇಸಗೆಗೆ ಕಾಟನ್‌ ಬಟ್ಟೆಗಳು ಬೆಸ್ಟ್‌ ಎಂಬುದು ಹಳೆ ಕಾಲದ ಮಾತು. ಈಗೇನಿದ್ದರೂ ಮಳೆ, ಚಳಿ, ಬೇಸಗೆಯೆಂಬ ಭೇದ‌ವಿಲ್ಲದೆ, ಎಲ್ಲ ಕಾಲಗಳಲ್ಲಿಯೂ ಕಾಟನ್‌ ಬಟ್ಟೆಯೇ ಬೆಸ್ಟ್‌ ಎಂಬುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಈ ರೀತಿಯ ಬದಲಾವಣೆಗೆ ಕಾರಣ ಹವಾಮಾನದಲ್ಲಾದ ಬದಲಾವಣೆಯೇ ಎಂದರೂ ತಪ್ಪಾಗದು. ಮೂರೂ ಕಾಲದಲ್ಲಿಯೂ ಸೆಕೆಯೇ ಹೆಚ್ಚಿರುವುದು ಕಳೆದೆರಡು ವರ್ಷಗಳಿಂದ ಗಮನಿಸಿರಬಹುದು. ಈ ಸೆಕೆಯಿಂದ ನಿರಾಳತೆ ಪಡೆದುಕೊಳ್ಳಲು ಕಾಟನ್‌ ಬಟ್ಟೆಗಳ ಮೊರೆ ಹೋಗುವುದು ಟ್ರೆಂಡ್‌ ಆಗಿ ಬಿಟ್ಟಿದೆ.

ಕಾಟನ್‌ ಕಮಾಲ್

ಹಾಗೆ ನೋಡಿದರೆ, ಶುದ್ಧ ಹತ್ತಿಯ ಬಟ್ಟೆಗಳು ಯಾವತ್ತೂ ಬೇಡಿಕೆ ಕಳೆದುಕೊಂಡಿದ್ದೇ ಇಲ್ಲ. ಆದರೆ, ಹವಾಮಾನದಲ್ಲಿ ಬದಲಾವಣೆ ಜಾಸ್ತಿಯಾದಂತೆ ಏರಿಕೆಯ ತಾಪಮಾನವಿರುವ ಪ್ರದೇಶಗಳಲ್ಲಿ ಶುದ್ಧ ಹತ್ತಿಯ ಬಟ್ಟೆಗಳ ಧರಿಸುವಿಕೆಯೇ ಹೆಚ್ಚಾಗುತ್ತಿದೆ. ಮಂಗಳೂರು ನಗರ ಹೇಳೀಕೇಳಿ ಅತೀ ಹೆಚ್ಚು ತಾಪಮಾನವಿರುವ ಪ್ರದೇಶ. ಕಡಲತಡಿ ಮಂಗಳೂರಿನಲ್ಲಿ ಇಲ್ಲಿನ ಬಿಸಿಯಾದ ಹವಾಮಾನಕ್ಕೆ ಶುದ್ಧ ಹತ್ತಿಯ ಬಟ್ಟೆಗಳ ಬಳಕೆಯೇ ಬೆಸ್ಟ್‌.

ಶರ್ಟ್‌, ಸೀರೆಗೆ ಬೇಡಿಕೆ
ಎಲ್ಲಿ ಹೋದರೂ ಸೆಕೆ, ಫ್ಯಾನ್‌ ಅಡಿಯಲ್ಲಿ ಕುಳಿತರೂ ಸೆಕೆ, ಮಳೆಗಾಲದಲ್ಲಿ ಒಂದು ಗಂಟೆ ಕಾಲ ಮಳೆ ಬಾರದಿದ್ದರೂ ಸೆಕೆ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸೆಕೆಯಿಂದ ಸ್ವಲ್ಪವಾದರೂ ನೆಮ್ಮದಿ ಸಿಗಬೇಕೆಂದರೆ ಕಾಟನ್‌ ಬಟ್ಟೆಗಳ ಮೊರೆ ಹೋಗಬೇಕಾದುದು ಸದ್ಯದ ಅನಿವಾರ್ಯ ಹೌದು.

ಶುದ್ಧ ಹತ್ತಿಯ ಶರ್ಟ್‌, ಸೀರೆ ಸದ್ಯ ಟ್ರೆಂಡ್‌ ಆಗಿ ಚಾಲ್ತಿಯಲ್ಲಿದೆ. ಕಾಟನ್‌ ಸೀರೆಗೆ ವೈವಿಧ್ಯ ಕಲರ್‌ಫುಲ್ ಡಿಸೈನ್‌ ಹೊಂದಿರುವ ಬ್ಲೌಸ್‌ ಧರಿಸುವುದು ಹೊಸ ಸ್ಟೈಲ್. ಮದುವೆ ಸಮಾರಂಭಗಳಿಗೆ ರೇಷ್ಮೆ ಧರಿಸಿಯೋ, ಸಿಲ್ಕ್ ಸಾರಿ ಧರಿಸಿಯೋ ಹೋಗುವ ಕಾಲ ಮುಗಿಯಿತು. ಏಕೆಂದರೆ, ಮದುವೆ ಮನೆಗಳಲ್ಲಿಯೂ ಕಾಟನ್‌ ಸೀರೆಗಳದ್ದೇ ಕಮಾಲ್. ಪ್ಯೂರ್‌ ಕಾಟನ್‌ ಚೂಡಿದಾರ ಮೆಟೀರಿಯಲ್, ಜೀನ್ಸ್‌, ಕುರ್ತಾ, ಮಕ್ಕಳ ಉಡುಗೆಗೂ ಬೇಡಿಕೆ ಇದೆ.

ಪ್ಯೂರ್‌ ಕಾಟನ್‌ ಆಯ್ಕೆಗೆ ಸಲಹೆ

ನಗರವಾಸಿಗಳ ನೆಮ್ಮದಿಯ ನಿದ್ದೆಯನ್ನೂ ಕಸಿದುಕೊಂಡಿರುವ ಸೆಕೆ ಎಂಬ ರಾಕ್ಷಸನಿಂದ ಮುಕ್ತಿ ಪಡೆಯಲು ಕಾಟನ್‌ ಹಾಸಿಗೆಗಳ ಬಳಕೆಯೊಂದೇ ದಾರಿ. ಕಾಟನ್‌ ಹಾಸಿಗೆ, ಪಿಲ್ಲೋಗಳಿಗೂ ಬೇಡಿಕೆ ಜಾಸ್ತಿ ಇದೆ. ಮನೆಯಲ್ಲೇ ತಯಾರಿಸುವ ಹತ್ತಿಯ ಹಾಸಿಗೆ, ದಿಂಬುಗಳನ್ನು ನಗರದಲ್ಲಿ ಬಳಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.

ಕಾಟನ್‌ ಡ್ರೆಸ್‌, ಹಾಸಿಗೆ ಮಾರಾಟ ಮಾಡುವ ಮಂಗಳೂರಿನ ಬಹುತೇಕ ಅಂಗಡಿಗಳ ಸಿಬಂದಿ ಪ್ಯೂರ್‌ ಕಾಟನ್‌ ಬಟ್ಟೆ, ಹಾಸಿಗೆ, ದಿಂಬುಗಳನ್ನೇ ಕೊಳ್ಳುವಂತೆ ಸಲಹೆ ಮಾಡುತ್ತಾರೆ ಎಂಬುದು ಮತ್ತೂಂದು ವಿಶೇಷ. ದೈನಂದಿನ ವ್ಯವಹಾರಕ್ಕೆ ಬಟ್ಟೆ ಕೊಳ್ಳಲು ಬಂದವರಿಗೆ ನೈಲಾನ್‌ ಉಡುಪುಗಳಿಗಿಂತ ಕಾಟನ್‌ ಬಟ್ಟೆಗಳನ್ನೇ ಖರೀದಿಸಿ ಎಂದು ಹೇಳುತ್ತೇವೆ. ಇದರಲ್ಲಿ ಸೆಕೆ ಹೆಚ್ಚಾಗದಂತೆ ತಡೆಯುವ ಗುಣವಿದ್ದು, ಧರಿಸಿದವರಿಗೆ ಸ್ವಲ್ಪ ಮಟ್ಟಿನ ನಿರಾಳ ಸಿಗುತ್ತದೆ ಎಂಬುದೇ ಕಾರಣ ಎಂಬುದು ಬಟ್ಟೆ ಅಂಗಡಿಗಳ ಸಿಬಂದಿ ಮಾತು.

ಕಾಟನ್‌ ಮಾರಾಟ ಜಾಸ್ತಿ

ಬಟ್ಟೆ ಮಳಿಗೆಯೊಂದರ ಸಿಬಂದಿ ಶಿವಕುಮಾರ್‌ ಹೇಳುವ ಪ್ರಕಾರ, ಪುರುಷರ ಕಾಟನ್‌ ಶರ್ಟ್‌, ಇತರ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಇದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮಂಗಳೂರಿನ ಹವಾಗುಣ ಬದಲಾಗಿರುವುದರಿಂದ ಮತ್ತು ಉಷ್ಣತೆ ಜಾಸ್ತಿ ಇರುವುದರಿಂದ ಕಾಟನ್‌ ಬಟ್ಟೆಗಳೇ ಜಾಸ್ತಿ ಮಾರಾಟವಾಗುತ್ತಿವೆ ಎನ್ನುತ್ತಾರೆ.

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.