ಬದುಕು ಬದಲಿಸುವ ಆಟೋ ಮೊಬೈಲ್‌ 


Team Udayavani, Mar 20, 2019, 8:09 AM IST

20-march-10.jpg

ಒಬ್ಬೊಬ್ಬರಿಗೆ ಒದೊಂದು ವಸ್ತುಗಳ ಮೇಲೆ ಒಲವಿರುತ್ತದೆ ಅದರಂತೆ ವಾಹನಗಳನ್ನು ಪ್ರೀತಿಸುವವರ ಸಂಖ್ಯೆಯೂ ಕಡಿಮೆ ಇಲ್ಲ. ಅದಕ್ಕೆ ಪೂರಕವಾಗಿ ಪ್ರತಿ ಮನೆಗಳನ್ನೂ ದಿನದಿಂದ ದಿನಕ್ಕೆ ವಾಹನಗಳೂ ಹೆಚ್ಚಾಗುತ್ತಿದ್ದು, ಅವುಗಳ ನಿರ್ವಹಣೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇದರಿಂದ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಿಲ್ಲ.

ಮೊದಲು ಮೆಕ್ಯಾನಿಕ್‌ ಎಂದರೆ ಕೇವಲ 2 ವ್ಹೀಲರ್‌, 4ವ್ಹೀಲರ್‌ ಗಳನ್ನು ಸರಿ ಮಾಡುವವರು ಎಂಬ ಮಾತಿತ್ತು. ಆದರೆ ಇಂದು ಆ ಮಾತು ಬದಲಾಗಿದೆ. ಇತ್ತೀಚೆಗೆ ಎಲೆಕ್ಟ್ರಾನಿಕ್‌ ಕಾರ್‌ ಗಳ ಹಾವಳಿ ಜಾಸ್ತಿಯಾಗಿದ್ದು ಅಮೆರಿಕಾದಂತಹ ದೊಡ್ಡ ದೊಡ್ಡ ರಾಷ್ಟ್ರ ಗಳು ತಯಾರಿಸುವ ಕಾರ್‌ ಗಳು ಜನಮನ ಸೆಳೆಯುತ್ತಿದೆ. ಇವುಗಳು ಹಾಳಾದ ಪಕ್ಷದಲ್ಲಿ ಅದನ್ನು ಸರಿ ಮಾಡುವ ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಕೆಲವು ಕಾರ್‌ ಗಳಲ್ಲಿ ಎಬಿ ಎಸ್‌ ಮತ್ತು ಇಬಿಡಿಗಳಂತಹ ಬ್ರೇಕ್‌ ಸಿಸ್ಟಮ್‌ ಗಳಿದ್ದು ಅದರ ಜ್ಞಾನ ಕೂಡ ಅಗತ್ಯವಾಗಿರುತ್ತದೆ.

ಡಿಸೈನ್‌ ಗಳ ಹಾವಳಿ
ಕೆಲವು ಬೈಕ್‌ ಕಾರ್‌ ಪ್ರಿಯರು ಹೊಸ ಹೊಸ ಮಾದರಿಯ ಡಿಸೈನ್‌ ಗಳನ್ನು ಮಾಡುತ್ತಿದ್ದು, ಒಬ್ಬರಿಂದ ಬಬ್ಬರಿಗೆ ಸ್ಪರ್ಧೆಯಂತೆ ಇದು ಮುಂದುವರಿಯುತ್ತಿದೆ. ಅದಲ್ಲದೆ ಬೈಕ್‌ ಸೈಲೆನ್ಸ ರ್‌ ನಿಂದ  ಹಿಡಿದು ಸಿಟ್‌, ಹೆಡ್‌ ಲೈಟ್‌, ಇಲ್ಲದನ್ನೂ ತಮಗೆ ಬೇಕಾದಂತೆ ಬದಲಿಸಿಕೊಳ್ಳುತ್ತಿದ್ದಾರೆ.

ಶಿಕ್ಷಣ
ಆಟೋ ಮೊಬೈಲ್‌ ಕ್ಷೇತ್ರದಲ್ಲಿ ಪರಿಣತಿ ಹೊಂದಲು ನಿಮಗೆ ವಿವಿಧ ವಾಹನಗಳ ಬಗ್ಗೆ ಮಾಹಿತಿ ಅದೇ ರೀತಿಯಲ್ಲಿ ಶಿಕ್ಷಣಕ್ಕೆ ಬಂದರೆ ಡಿಪ್ಲೊಮಾ, ಡಿಗ್ರಿ, ಸರ್ಟಿಫಿಕೆಟ್‌ ಪ್ರೋಗ್ರಾಂಗಳಿದ್ದು ವಿಭಾಗಗಳಿಗೆ ತಕ್ಕಂತೆ ನಿಮಗೆ ಆಯ್ಕೆ ಮಾಡಬಹುದಾಗಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ ನಿಮಗೆ ವೈಯಕ್ತಿಕ ಆಸಕ್ತಿ, ಕೌಶಲ ಈ ಕ್ಷೇತ್ರಕ್ಕೆ ತುಂಬಾ ಮುಖ್ಯವಾಗಿರುತ್ತದೆ.

ಸ್ವಂತ ಉದ್ಯೋಗಕ್ಕೆ ಬೇಡಿಕೆ
ಆಟೋ ಮೊಬೈಲ್‌ ಕ್ಷೇತ್ರದಲ್ಲಿ ಆಸಕ್ತಿಯಿರುವವರು ತಮ್ಮದೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು. ಅದಲ್ಲದೆ ಬೇರೆ ಬೇರೆ ಉದ್ಯೋಗದ ಜತೆ ಜತೆಗೆ  ಇದನ್ನು ಮಾಡಬಹುದು. ಇದರಿಂದ ಆದಾಯಕ್ಕೂ ಕೊರತೆಯಾಗದೇ ಕೆಲಸ ಮಾಡಲು ಸಹಾಯವಾಗುತ್ತದೆ. ಅದಲ್ಲದೆ ಈ ಕ್ಷೇತ್ರಕ್ಕೆ ರೋಬಟ್‌ ಗಳು ಕಾಲಿಡುತ್ತಿದ್ದು ಪ್ರೊಜೆಕ್ಟ್ ಗಳನ್ನು ಮಾಡುವುದರ ಮೂಲಕ ಕೂಡ ವಿನೂತನ ರೀತಿಯಲ್ಲಿ ಗುರುತಿಸಿಕೊಳ್ಳಬಹುದು.

ಹೊಸ ಶೈಲಿಯ ಮಾರ್ಪಾಡು
ಬೈಕ್‌, ಕಾರುಗಳನ್ನು ತೆಗೆದುಕೊಂಡ ಮೇಲೆ ಕೆಲವರಿಗೆ ಅದಕ್ಕೆ ವಿನೂತನ ರೀತಿಯ ಮಾರ್ಪಾಡು ಮಾಡಬೇಕೆಂಬ ಹಂಬಲವಿರುತ್ತದೆ. ಆ ಆಸೆಗಳಿಗೆ ನೀರೆರೆಯುವುದು ಆಟೋ ಮೊಬೈಲ್‌ ಮೆಕ್ಯಾನಿಕ್‌ ಗಳು. ಸದ್ಯ ಕೆಲವು ಮಾರ್ಪಾಡುಗಳಿಗೆ ಕಾನೂನು ಕ್ರಮ ಅನ್ವಯವಾಗುತ್ತದೆ. ಅದರ ಹೊರತಾಗಿ ಬೈಕ್‌ ಕಾರುಗಳಿಗೆ ಹೊಸ ಗೆಟಪ್‌ ನೀಡಲು ಅವಕಾಶವಿದೆ.

ಪ್ರೀತಿ ಭಟ್‌ ಗುಣವಂತೆ 

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.