ಬದುಕಿನ ಯಶಸ್ಸಿಗೆ  ಸಂವಹನವೇ ಮಾಧ್ಯಮ


Team Udayavani, Feb 13, 2019, 7:27 AM IST

13-february-10.jpg

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ನಾಣ್ನುಡಿ ಜನಜನಿತವಾಗಿದೆ. ಅದೇ ರೀತಿ ನಾವು ಮಾತನಾಡುವ ಪ್ರತಿಯೊಂದು ಶಬ್ದವೂ ಮೌಲ್ಯಯುತವಾಗಿರಬೇಕು. ಅದರಲ್ಲಿಯೂ ಇಂದಿನ ಕಾರ್ಪೊರೇಟ್ ಪ್ರಪಂಚದಲ್ಲಿ ವ್ಯವಹರಿಸಲು ಸಂವಹನ ಕಲೆ ಅತೀ ಮುಖ್ಯವಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ಸಂವಹನ ಕಲೆ ಬಹಳ ಮಹತ್ವದ್ದಾಗಿದೆ. ಶಾಲಾ- ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಂವಹನ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತಿಸಬೇಕಾದ ಅನಿವಾರ್ಯತೆ ಇದೆ. ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಲು, ಉತ್ತಮ ನಾಯಕತ್ವ ಗುಣ ಹೊಂದಲು ಸಂವಹನ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಸಾರ್ವಜನಿಕವಾಗಿ ಸಂವಹನ ನಡೆಸಲು ವಿಷಯ ವಸ್ತು ತುಂಬಾ ಮುಖ್ಯವಾದದ್ದು. ಸಂವಹನ ಮತ್ತು ವಿಷಯ ವಸ್ತುಗಳ ಬಗ್ಗೆ ಜ್ಞಾನ ಇದ್ದರೆ ಒಳ್ಳೆಯದು.

ಸಂವಹನವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿ ಕೊಳ್ಳಬೇಕು. ಆ ಸಮಯದಲ್ಲಿ ಸಂವಹನ ಶಕ್ತಿಯು ತನ್ನಿಂತಾನೇ ಬೆಳೆಯುತ್ತದೆ. ಸಂವಹನ ಕಲೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿ ಸಿದ್ಧತೆ ಮಾಡಿಕೊಳ್ಳುವುದು ಬಹುಮುಖ್ಯ. ಏಕೆಂದರೆ, ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಯಾವುದಾದರೊಂದು ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿ ಕೊಳ್ಳುವ ನಿಟ್ಟಿನಲ್ಲಿ ಸಂವಹನ ಕಲೆಯು ಮಹತ್ವ ಪಡೆದಿದೆ.

ಹೆಚ್ಚಿನ ಕಂಪೆನಿಗಳು ಉದ್ಯೋಗಕ್ಕೆಂದು ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಆ ಅಭ್ಯರ್ಥಿಯ ಸಂವಹನೆ ಕಲೆಯ ಬಗ್ಗೆಯೂ ಯೋಚನೆ ಮಾಡುತ್ತಾರೆ. ಅತೀ ಹೆಚ್ಚಿನ ಅಂಕಗಳಿಸಿದರೂ, ಸಂವಹನದ ರೀತಿಯಲ್ಲಿ ಕೊರತೆ ಇದ್ದರೆ ಕೆಲವರಿಗೆ ಉದ್ಯೋಗ ಸಿಗುವುದಿಲ್ಲ. ತರಗತಿಯಲ್ಲಿ ಗಳಿಸಿದ ಅಂಕಕ್ಕಿಂತ ಪ್ರಾಯೋಗಿಕವಾಗಿ ಗಳಿಸಿದ ಸಂವಹನ ಕಲೆಯು ಮುಖ್ಯವಾಗುತ್ತದೆ.

ಸಮಾಜದಲ್ಲಿ ವ್ಯಕ್ತಿಗಳಿಗೆ ಒಳ್ಳೆಯ ಬೆಲೆ ತಂದುಕೊಡಲು ಸಂವಹನ ಅತೀ ಮುಖ್ಯ. ಸಂವಹನ ಕಲೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ಮಾತನಾಡುವ ಶೈಲಿಯು ಮತ್ತೂಬ್ಬರಿಗೆ ಇಷ್ಟವಾಗದೇ ಇರಬಹುದು, ಮತ್ತೂ ಕೆಲವರು ತಮ್ಮ ಅಭಿಪ್ರಾಯವನ್ನು ಮಂಡಿಸುವ ರೀತಿ ಬೇರೊಬ್ಬರಿಗೆ ಕಿರಿ ಕಿರಿ ಉಂಟಾಗಬಹುದು. ಇವುಗಳೆಲ್ಲವೂ ಸಮತೋಲನದಿಂದ ಕೂಡಿದರೆ ಸರಿಯಾದ ಸಂವಹನ ನಡೆಸಲು ಸಾಧ್ಯ.

ಸಂವಹನ ಕೌಶಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ- ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಬೋಧನೆ ಮಾಡಬೇಕಿದೆ. ಶಾಲೆಗಳಲ್ಲಿ ಪ್ರಾಯೋಗಿಕ ಪಾಠಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳ ಮೆದುಳಿಗೆ ಕೆಲಸ ಕೊಡುವ ಚಟುವಟಿಕೆಗಳಿಗೆ ಮಹತ್ವ ನೀಡಬೇಕು. ಯಾವುದಾದರೊಂದು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಯೋಚಿಸಿ ಪ್ರತ್ಯುತ್ತರ ನೀಡಬೇಕು. ಇದರಿಂದ ನಮ್ಮಲ್ಲಿ ಧನಾತ್ಮಕ ಚಿಂತನೆ ಬೆಳೆಯುವ ಜತೆಗೆ ಸಂವಹನದ ಕೌಶಲ ಕೂಡ ವೃದ್ಧಿಸುತ್ತದೆ.

ಸಂವಹನ ಕಲೆಯನ್ನು ತಮ್ಮಲ್ಲಿ ವೃದ್ಧಿಸಿಕೊಳ್ಳಲು ಆಲಿಸುವಿಕೆ ಕೂಡ ಅತೀ ಮುಖ್ಯ. ಇತರರು ಹೇಳುವ ಮಾಹಿತಿಯನ್ನು ಸಂಪೂರ್ಣವಾಗಿ ಆಲಿಸುವ ವ್ಯವಧಾನ ಇರಬೇಕು. ಬೇರೊಬ್ಬರು ನೀಡುವ ಮಾಹಿತಿ ಕೂಡ ನಮ್ಮ ಸಂವಹನ ವೃದ್ಧಿಗೆ ಕಾರಣವಾಗಬಹುದು. ಇನ್ನು, ಕೆಲವು ಬಾರಿ, ಮೈಕ್‌ ಸಿಕ್ಕಿದರೆ ಸಾಕು, ಮಾತನಾಡುವ ವ್ಯಕ್ತಿಗಳು ಇರುತ್ತಾರೆ. ಇದು ಉತ್ತಮ ಸಂವಹನದ ಗುಣವಲ್ಲ. ಯಾವುದೇ ವಿಚಾರದಲ್ಲಿ ಮಾತನಾಡುವ ಮೊದಲು ಅನೇಕ ಬಾರಿ ಯೋಚಿಸಬೇಕು. ನಮ್ಮ ಮಾತು ಇನ್ನೊಬ್ಬರ ಮನಸ್ಸಿಗೆ ಘಾಸಿಯಾಗಬಾರದು. ಮಾತಿನಲ್ಲಿ ಕೀಳರಿಮೆ ಇಲ್ಲದೆ, ಬೇರೆಯವರ ಭಾವನೆಗಳಿಗೆ ಸ್ಪಂದಿಸುವ ಮನಸ್ಥಿತಿ ಇರಬೇಕು. ಅಲ್ಲದೆ, ಮಾತಿಗೂ, ದೇಹಭಾಷೆಗೂ ಹೊಂದಾಣಿಕೆ ಅತೀ ಮುಖ್ಯ. ಮಾತುಗಳೆಂದೂ ನೇರವಾಗಿರಬೇಕು. ಆವಶ್ಯಕತೆ ಇದ್ದರೆ ಮಾತ್ರ ಪುನರುಚ್ಚರಿಸುವ ಗುಣವನ್ನು ಸಂವಹನಕಾರ ಹೊಂದಿರಬೇಕು. ಒಟ್ಟಿನಲ್ಲಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಂವಹನ ಪ್ರಮುಖ ಮಾಧ್ಯಮವಾಗಿದೆ.

ಸಂವಹನ ಕಲೆ ವೃದ್ಧಿಸಲು ಆ್ಯಪ್‌
ಇಂದಿನ ದಿನಗಳಲ್ಲಿ ತಂತ್ರಜ್ಞಾನ ವ್ಯವಸ್ಥೆ ಸಾಕಷ್ಟು ಮುಂದುವರಿದಿದ್ದು, ಸಂವಹನ ಕಲೆ
ವೃದ್ಧಿಸುವ ನಿಟ್ಟಿನಲ್ಲಿ ಆ್ಯಪ್‌ ಗಳು ಕೂಡ ಬಂದುಬಿಟ್ಟಿವೆ. ಅದರಲ್ಲಿಯೂ ಪ್ಲೇಸ್ಟೋರ್‌ನಲ್ಲಿ ಸೆಲ್ಫ್ ಲರ್ನಿಂಗ್‌ ಆ್ಯಪ್‌ ಗಳಿವೆ. ಸಂವಹನ ಕಲೆಗಳನ್ನು ವೃದ್ಧಿಸಲು ಕೆಲವೊಂದು ಸಂಸ್ಥೆಗಳು ವಿಶೇಷ ತರಗತಿಗಳನ್ನು ನಡೆಸುತ್ತವೆ. ಅದರಲ್ಲಿಯೂ, ಭಾಷಣ ಮಾಡುವ ಕಲೆ, ವೃತ್ತಿ ಸಂದರ್ಶನ ದಲ್ಲಿ ಯಾವ ರೀತಿ ಇರಬೇಕು? ನಮ್ಮ ದೇಹಭಾಷೆ ಸಹಿತ ಮತ್ತಿತರ ವಿಷಯಗಳನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಕೋರ್ಸ್‌ಗಳು ಈಗಾಗಲೇ ಪ್ರಾರಂಭವಾಗಿವೆ.

ನವೀನ್‌ ಭಟ್ ಇಳಂತಿಲ

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.