ಸ್ವಚ್ಛ, ಸುಂದರ ಭವಿಷ್ಯಕ್ಕಾಗಿ ಬೇಕಿದೆ ಪರಿಸರ ಶಿಕ್ಷಣ


Team Udayavani, Aug 29, 2018, 12:43 PM IST

29-agust-11.jpg

ಸುತ್ತಲೂ ಬೆಟ್ಟ ಗುಡ್ಡ, ನಡುವೆ ಹರಿಯುವ ಸಣ್ಣ ತೊರೆ ಇದರ ಮಧ್ಯೆ ಕುಳಿತು ಕೇಳುವ ಪಾಠ… ಈ ಕಲ್ಪನೆ ಎಷ್ಟು ಸೊಗಸಾಗಿದೆ ಅಲ್ವ. ಇಂತಹ ಒಂದು ಶಿಕ್ಷಣ ನಮ್ಮ ಶಾಲೆ, ಕಾಲೇಜುಗಳಲ್ಲೂ ಸಿಗುವಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಎಲ್ಲರೂ ಒಂದಲ್ಲ ಒಂದು ಬಾರಿ ಅಂದು ಕೊಂಡಿರಬೇಕು. ವಿಶ್ವದ ಹಲವೆಡೆ ಇಂತಹ ಶಿಕ್ಷಣ ನೀಡುವ ವ್ಯವಸ್ಥೆ ಈಗಾಗಲೇ ಜಾರಿಯಿದೆ. ನಮ್ಮಲ್ಲೂ ಪ್ರಾಯೋಗಿಕವಾಗಿ ಅಪರೂಪಕ್ಕೊಮ್ಮೆ ನಾವಿದ್ದನ್ನು ಮಾಡುತ್ತಿದ್ದೇವೆ. ಆದರೆ ಸಂಪೂರ್ಣವಾಗಿ ಇನ್ನೂ ಇದು ಜಾರಿಯಾಗಿಲ್ಲ. ಮುಂದಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಒಂದು ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕಿದೆ.

ಪಠ್ಯ ಚಟುವಟಿಕೆಯಲ್ಲಿ ರ್ಯಾಂಕ್ ಗಳಿಸಿ ಉತ್ತಮ ಉದ್ಯೋಗ ಪಡೆದುಕೊಳ್ಳುವ ಹುಮ್ಮಸ್ಸಿನಲ್ಲಿರುವ ಇಂದಿನ ವಿದ್ಯಾರ್ಥಿಗಳಿಗೆ ಸುತ್ತಮುತ್ತ ನಡೆಯುವ ಆಗುಹೋಗುಗಳ ಬಗ್ಗೆ ಅರಿವಿರುವುದಿಲ್ಲ. ಇದನ್ನು ತಿಳಿಸಿಕೊಡುವ ಗೋಜಿಗೆ ಹೆತ್ತವರೂ ಹೋಗುವುದಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ವಿದ್ಯಾರ್ಥಿಗಳಿಗೆ ಲೋಕಜ್ಞಾನ, ಪರಿಸರ ಜ್ಞಾನದ ಆವಶ್ಯಕತೆ ಇದ್ದರೂ ಅದನ್ನು ಬೋಧಿಸಲು ಸೂಕ್ತ ವೇದಿಕೆ ಎಲ್ಲೂ ಇಲ್ಲದಿರುವುದರಿಂದ ಮಕ್ಕಳು ಪರಿಸರ, ಪ್ರಾಣಿ, ಪಕ್ಷಿ ಇವೆಲ್ಲದರಿಂದ ದೂರ ಸಾಗಿ ಟಿವಿ, ಫೋನ್‌ಗಳಿಗೆ ಅಂಟಿಕೊಳ್ಳುತ್ತಿದ್ದಾರೆ.

ಅದರೊಂದಿಗೆ ಪ್ರಸ್ತುತ ಕಾಲಘಟ್ಟದ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಲ್ಲಿ ಜೀವನ ಶಿಕ್ಷಣದ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತೇವೆ. ಆದರೆ ನಾವು ತಿನ್ನುವ ಆಹಾರಗಳು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಪಠ್ಯದಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಸೇರ್ಪಡೆಗೊಳಿಸಲಾಗಿಲ್ಲ. ಇದರಿಂದ ಮಕ್ಕಳಿಗೆ ಪರಿಸರದ ಕುರಿತು ಸ್ವಲ್ಪ ಕಾಳಜಿ, ಕುತೂಹಲ ಹುಟ್ಟುವುದಿಲ್ಲ. ಪರಿಸರವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಇಂತಹ ಅನಿವಾರ್ಯ ವಿಷಯದ ಪಾಠವೇ ಇಂದಿನ ವಿದ್ಯಾರ್ಥಿಗಳಿಗೆ ದೊರೆಯದಿರುವುದು ಅಚ್ಚರಿಯ ಸಂಗತಿ.

ಪರಿಸರ ಪಾಠ
ಪರಿಸರದ ಬಗ್ಗೆ ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಲಿ- ನಲಿ ಕಲಿಕಾ ಪದ್ಧತಿಗಳನ್ನು ಅಳವಡಿಸಿ ಪ್ರಾಥಮಿಕ ಶಾಲೆಗಳಲ್ಲಿ ಪರಿಸರ ಶಿಕ್ಷಣದ ಬುನಾದಿ ಹಾಕಬೇಕು. ಪರಿಸರ ಹಾಗೂ ವನ್ಯಜೀವಿ ವಿಜ್ಞಾನ ಕುರಿತ ಕಾಳಜಿ ಮೂಡಿಸುವ ಪಠ್ಯ ನಿರ್ಮಾಣವಾಗಬೇಕು. ಈ ಮೂಲಕ ಮಾತ್ರವೇ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಹಾಗೂ ಪರಿಸರ ನಾಶದ ಬಗ್ಗೆ ಎಚ್ಚರಿಕೆ ಮೂಡಲು ಸಾಧ್ಯ.

ಪರಿಸರ ಸಂಘ
ಪರಿಸರದ ಬಗ್ಗೆ ಕಾಳಜಿ ಇರುವ ಕೆಲವು ವಿದ್ಯಾಸಂಸ್ಥೆಗಳು ಕಾಲೇಜಿನಲ್ಲಿ ಪರಿಸರ ಸಂಘಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಪರಿಸರದ ಅಳಿವು ಉಳಿವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಶಾಲೆ ಆವರಣಗಳಲ್ಲಿ ಹೂವಿನ ಗಿಡ, ತರಕಾರಿ ಗಿಡಗಳನ್ನು ನೆಟ್ಟು ಅದನ್ನು ವಿದ್ಯಾರ್ಥಿಗಳಿಂದ ಲೇ ಪೋಷಿಸುವ ಕೆಲಸವನ್ನು ಸಂಸ್ಥೆಗಳು ಮಾಡುತ್ತಿವೆ. ಇಂತಹ ಚಟುವಟಿಕೆಗಳು ಸರಕಾರಿ ಶಾಲೆ ಹಾಗೂ ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಮಾತ್ರ ಮಾಡಲಾಗುತ್ತಿದೆ. ಆದರೆ ನಗರದ ಪ್ರದೇಶಗಳಲ್ಲಿ ಕಲಿಯುತ್ತಿರುವ ಮಕ್ಕಳು ಇವೆಲ್ಲದರಿಂದ ವಂಚಿತರಾಗಿರುವುದು ಮಾತ್ರ ಸತ್ಯ.

ಪರಿಸರದ ಮಧ್ಯೆ ಪಾಠ
ನಾಲ್ಕು ಗೋಡೆಗಳ ಹೊರಗಡೆ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಿಂದ ಅವರಿಗೂ ಪರಿಸರದ ಬಗ್ಗೆ ಆಸಕ್ತಿ ಮೂಡಲು ಸಾಧ್ಯವಿದೆ. ಕೆಲವು ಶಿಕ್ಷಕರು ಇಂತಹ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಪಠ್ಯದ ಒತ್ತಡದಿಂದ ಮುಕ್ತಿ ಪಡೆದುಕೊಳ್ಳಲು ಇದೊಂದು ಉತ್ತಮ ಆಯ್ಕೆಯಾಗಿದೆ ಎಂಬುದು ಹಲವು ಪರಿಸರವಾದಿಗಳ ವಾದ.

ಕಾಡಿನೊಳಗೊಂದು ಸುತ್ತು
ಪ್ರಸ್ತುತ ಟ್ರಕ್ಕಿಂಗ್‌ ಹೋಗುವುದು ಫ್ಯಾಷನ್‌ ಆಗಿ ಬದಲಾಗಿದೆ. ಬಹುತೇಕ ಯುವಜನತೆ ಟೀಮ್‌ ಮಾಡಿಕೊಂಡು ಟ್ರಕ್ಕಿಂಗ್‌ ಹೆಸರಲ್ಲಿ ಕಾಡು ಗುಡ್ಡಗಳಲ್ಲಿ ಸುತ್ತುತ್ತಾರೆ. ಈ ಚಟುವಟಿಕೆಯನ್ನು ಶಾಲಾ, ಕಾಲೇಜು ದಿನಗಳಿಂದ  ಡುವುದು ಉತ್ತಮ. ಯಾಕೆಂದರೆ ಮಕ್ಕಳಿಗೆ ಪರಿಸರ ಪಾಠದೊಂದಿಗೆ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ. ಮಲೆನಾಡು, ಪಶ್ಚಿಮ ಘಟ್ಟಗಳಿಗೆ ತಿಂಗಳಿಗೊಮ್ಮೆಯಾದರೂ ಟ್ರಕ್ಕಿಂಗ್‌ ವ್ಯವಸ್ಥೆ ಮಾಡಿದರೆ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟದ ಮಾಹಿತಿ, ನೀರಿನ ಮೂಲಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ಇದು ಮಕ್ಕಳಿಗೆ ಪರಿಸರದ ಬಗೆಗೆ ಆಳವಾದ ಅಧ್ಯಯನಕ್ಕೆ ಸಹಕರಿಸುತ್ತದೆ. 

ಪ್ರಯೋಜನವೇನು?
· ಪರಿಸರ ವಿಷಯಗಳ ಕುರಿತು ಜಾಗೃತಿ, ಜ್ಞಾನವನ್ನು ಮೂಡಿಸುತ್ತದೆ.

· ಕಷ್ಟಕರವಾದ ವಿಷಯವನ್ನು ಸುಲಭವಾಗಿ ಹೇಳಿಕೊಡಬಹುದು.

· ಸಮಸ್ಯೆ ಬಗೆಹರಿಸುವುದು, ನಿರ್ಧಾರ ಕೈಗೊಳ್ಳುವ ಕೌಶಲ ವನ್ನು ಹೆಚ್ಚಿಸಬಹುದು.

· ಪ್ರತಿಯೊಬ್ಬರ ಅಭಿಪ್ರಾಯ ಪಡೆಯಲು ಇದು ಪೂರಕ ವೇದಿಕೆಯಾಗುವುದು.

· ಪರಿಸರದ ಕುರಿತಾದ ಪ್ರತಿಯೊಂದು ಮಾಹಿತಿಯು ಸಿಗುತ್ತದೆ.

ಪ್ರಜ್ಞಾ  ಶೆಟ್ಟಿ 

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.