ಶಿಕ್ಷಣದ ಕೊರತೆ ನೀಗಿಸುವ ಸಂಧ್ಯಾ ಕಾಲೇಜು


Team Udayavani, Jun 19, 2019, 5:00 AM IST

v-16

ಅನೇಕರು ಯಾವುದೋ ಕಾರಣಕ್ಕೆ ಶಿಕ್ಷಣದಿಂದ ವಿಮುಖರಾಗಿರುತ್ತಾರೆ. ಅದಕ್ಕೆ ಬಡತನ ಕಾರಣವಾಗಿರಬಹುದು, ಇಲ್ಲವೇ ಇನ್ನಿತರ ಕಾರಣಗಳು ಅಡ್ಡಿಯುಂಟು ಮಾಡಬಹುದು. ಅಂಥವರಿಗೆ ಸಂಧ್ಯಾ ಕಾಲೇಜುಗಳು ವರದಾನವಾಗಿವೆೆ. ಹಗಲು ಪಾರ್ಟ್‌ ಟೈಮ್‌ ಕೆಲಸ ಮಾಡಿ ಸಂಜೆ ಕಾಲೇಜಿಗೆ ಹೋಗುವ ಅನೇಕ ಯುವಕ, ಯುವತಿಯರಿಂದು ಸಮಾಜದಲ್ಲಿ ಕಾಣಸಿಗುತ್ತಾರೆ. ಅಂಥವರ ಶಿಕ್ಷಣದ ಕೊರತೆಯನ್ನು ನೀಗಿಸಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಇವೇ ಸಂಧ್ಯಾ ಕಾಲೇಜುಗಳು.

ಹಿಂದೆ ಹೀಗಿತ್ತು…
ಆರಂಭದ ದಿನಗಳಲ್ಲಿ, ಹಳ್ಳಿಗಳು ಮತ್ತು ಸಣ್ಣ ನಗರಗಳಿಂದ ಬಂದ ಯುವಕರು, ಶಾಲೆಯನ್ನು (10ನೇ) ಪೂರ್ಣಗೊಳಿಸಿದ ಅನಂತರ ಮತ್ತು ಉದ್ಯೋಗ ಹುಡುಕುವಲ್ಲಿ ದೊಡ್ಡ ನಗರಕ್ಕೆ ಹೋಗಲು ಟೈಪ್‌ರೈಟಿಂಗ್‌ ಅನ್ನು ಕಲಿಯುತ್ತಿದ್ದರು. ಕೆಲಸವನ್ನು ಪಡೆದ ಅನಂತರ ಅವರು ಸಂಜೆ ಕಾಲೇಜುಗಳಿಗೆ ಸೇರಿ ಪದವಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದರು.

ಹಿಂದೆಯಾದರೆ ಮನೆಯಲ್ಲಿ ಬಡತನ, ಕಾಲೇಜು ಫೀಸು ಕಟ್ಟೋಕೂ ದುಡ್ಡಿಲ್ಲ ಅಂತ ಅನೇಕರು ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿದ್ದರು. ಈಗ ಹಾಗಿಲ್ಲ. ಹಗಲು ಮಾರ್ಕೆಟಿಂಗ್‌ನಲ್ಲೋ, ಫ‌ುಡ್‌ ಡೆಲಿವರಿ ಬಾಯ್‌ ಆಗಿಯೋ ಕೆಲಸ ಮಾಡಿ ರಾತ್ರಿ ಕಾಲೇಜಿಗೆ ಹೋಗಬಹುದು. ದುಡಿಮೆಯೂ ಆಗುತ್ತೆ, ಶಿಕ್ಷಣ ಸಂಪೂರ್ಣವಾಗುತ್ತದೆ.

ಮೌಲ್ಯಯುತ ಶಿಕ್ಷಣ
ಸಂಜೆ ಕಾಲೇಜು ಬೆಳಗ್ಗೆ ಕಾಲೇಜಿಗೆ ಸಮನಾಗಿದ್ದು, ಪಠ್ಯಕ್ರಮ ಒಂದೇ ರೀತಿ ಇರುತ್ತದೆ. ಯಾವುದೇ ಕಾಲೇಜು ಮತ್ತು ಕಾಲೇಜು ಒದಗಿಸಿದ ಪದವಿ ಅಥವಾ ಪ್ರಮಾಣಪತ್ರಗಳಂತೆ ಸಂಜೆಯ ಕಾಲೇಜು ನೀಡುವ ಪ್ರಮಾಣಪತ್ರ ಉಳಿದ ಕಾಲೇಜುಗಳಷ್ಟೇ ಮೌಲ್ಯಯುತವಾಗಿರುತ್ತದೆ. ಇವುಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಸಂಜೆ ಕಾಲೇಜುಗಳು ಸ್ವಾತಂತ್ರ್ಯದ ಆರಂಭಿಕ ವರ್ಷಗಳಿಂದಲೂ ಇವೆೆ. ಈ ಕಾಲೇಜುಗಳು ಕೆಲಸದ ಸ್ವರೂಪದ ಕಾರಣದಿಂದಾಗಿ ಅಧ್ಯಯನ ಮಾಡಲು ಸಾಧ್ಯವಾಗದವರಿಗೆ ಅವಕಾಶ ನೀಡಲು ಪ್ರಾರಂಭವಾದವು.

ಯಾಕೆ ಸೇರಬಹುದು?
ಎಷ್ಟೋ ಜನರಿಗೆ ಶಿಕ್ಷಣ ಪಡೆಯುವ ಆಸೆಯಿದ್ದರೂ ಬಡತನ ಉದ್ಯೋಗ ಮಾಡುವಂತೆ ದೂಡುತ್ತದೆ. ಅಂಥವ‌ರಿಗೆ ಉದ್ಯೋಗದ ಜತೆಗೆ ಸಂಜೆ ಕಾಲೇಜು ಸೇರಿಕೊಂಡು ತಮ್ಮ ಶಿಕ್ಷಣ ಮುಂದುವರಿಸಬಹುದು. ಇಲ್ಲಿನ ಶಿಕ್ಷಣ ಮೌಲ್ಯಯುತವಾಗಿರುವುದರಿಂದ ಸಂಜೆ ಕಾಲೇಜಿಗೆ ಹೋಗಲೂ ಯಾವುದೇ ಹಿಂಜರಿಕೆಯ ಅಗತ್ಯವಿಲ್ಲ. ಮನೆ ಜವಾಬ್ದಾರಿಯಿಂದ ಕಲಿಕೆಗೆ ಬ್ರೇಕ್‌ ಹೇಳಿದ ಅದೆಷ್ಟೋ ಜನರು ಈ ಕಾಲೇಜುಗಳಲ್ಲಿ ಕಲಿಯುತ್ತಾರೆ.

-  ಹಿರಣ್ಮಯಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.