ಬದುಕು ಅರಳಿಸುವ ಪೇಪರ್‌ ಕ್ರಾಫ್ಟ್


Team Udayavani, May 29, 2019, 6:00 AM IST

e-17

ಬಳಸಿ ಬಿಸಾಡುವ ಪ್ರತಿಯೊಂದು ವಸ್ತುವಿನಲ್ಲೂ ಏನಾದರೊಂದು ಕ್ರಿಯಾತ್ಮಕತೆಯನ್ನು ಸೃಷ್ಟಿಸಿ ಅದರಿಂದ ಮನೆ ಅಥವಾ ಇತರ ಸ್ಥಳಗಳನ್ನು ಅಲಂಕರಿಸುವುದು ಉತ್ತಮ ವಿಷಯ. ಪೇಪರ್‌, ಪ್ಲಾಸ್ಟಿಕ್‌, ಬಾಟಲಿ, ಹಳೆಯ ಬಟ್ಟೆಗಳು… ಹೀಗೆ ಬೇರೆ ಬೇರೆ ರೀತಿಯ ಉಪಯೋಗ ಶೂನ್ಯ ವಸ್ತುಗಳಿಂದ ಆಲಂಕಾರಿಕ ವಸ್ತುಗಳನ್ನು ತಯಾರಿಸಬಹುದು.

ಪೇಪರ್‌ಗಳ ವ್ಯಾಲಿಡಿಟಿ ಒಂದು ದಿನ. ಅಂತೆಯೇ ಮ್ಯಾಗಝಿನ್‌ಗಳು ಸ್ವಲ್ಪ ದಿನ ಬಾಳಿಕೆ ಬರುತ್ತವೆ. ಓದಿ ಮುಗಿದ ಮೇಲೆ ಪತ್ರಿಕೆ, ಮ್ಯಾಗಝಿನ್‌ಗಳು ಮೂಲೆ ಸೇರಿರುತ್ತವೆ ಅಥವಾ ರದ್ದಿಗೆ ಹೋಗಿರುತ್ತವೆ. ಇಂತಹ ದಿನ ಪತ್ರಿಕೆಗಳು, ಮ್ಯಾಗಝಿನ್‌ಗಳ ಬಂಡವಾಳವನ್ನಾಗಿ ಮಾಡಿಕೊಂಡು ಸ್ವ ಉದ್ಯೋಗ ಮಾಡಿಕೊಳ್ಳಬಹುದು. ಅದುವೇ ಪೇಪರ್‌ ಕ್ರಾಫ್ಟ್.

ಕ್ರಿಯಾತ್ಮಕತೆಯಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಈ ಉದ್ಯೋಗ ಸೂಕ್ತವಾದದ್ದು. ಪೇಪರ್‌ ಹೂ, ಬ್ಯಾಗ್‌, ಗಿಫ್ಟ್ ಪ್ಯಾಕ್‌ ಮೊದಲಾದವುಗಳಿಂದ ಹಿಡಿದು ಬಲ್ಬ್ ಡೆಕೋರೇಷನ್‌, ಟೀಪಾಯ್‌, ವಾಲ್ ಡೆಕೋರೇಷನ್‌ಗಳವರೆಗೆ ಪೇಪರ್‌ ಕ್ರಾಫ್ಟ್ ಕ್ರಿಯಾತ್ಮಕತೆ ಮುಂದುವರಿದಿದೆ. ಯೂಸ್‌ ಆ್ಯಂಡ್‌ ತ್ರೋ ಎಂಬ ಕಲ್ಪನೆಯಲ್ಲಿ ಬದುಕುತ್ತಿರುವ ಇಂದಿನ ಸಮಾಜದಲ್ಲಿ ಈ ಉದ್ಯೋಗಕ್ಕೆ ಅಪಾರ ಅವಕಾಶಗಳಿವೆ.

ಕೋರ್ಸ್‌ಗಳೂ ಲಭ್ಯ
ಬೆಂಗಳೂರು, ದಿಲ್ಲಿ, ಮುಂಬಯಿಯಂತಹ ಮಹಾನಗರಗಳಲ್ಲಿ ಪೇಪರ್‌ ಕ್ರಾಫ್ಟ್ ಕಲಿಸುವ ಕೋರ್ಸ್‌ಗಳಿವೆ. ಇವುಗಳಲ್ಲಿ 2 ತಿಂಗಳಿನಿಂದ ಹಿಡಿದು 1 ವರ್ಷದವರೆಗಿನ ಹಲವಾರು ಬಗೆಯ ಕೋರ್ಸ್‌ಗಳಿವೆ. ಆಸಕ್ತಿಗನುಸಾರವಾಗಿ ಆಯ್ದುಕೊಳ್ಳಬಹುದು. ಯಾವುದೇ ವಿಷಯದಲ್ಲಿ ಡಿಗ್ರಿ ಪಡೆದುಕೊಂಡವರು ಈ ಕೋರ್ಸ್‌ ಮಾಡಬಹುದು. ಕೋರ್ಸ್‌ ಮುಗಿಯುವಾಗ ನೀವು ಪೇಪರ್‌ ಕ್ರಾಫ್ಟ್ನಲ್ಲಿ ಪಳಗಿದ್ದೀರಿ ಎಂಬ ಸರ್ಟಿಫಿಕೇಟ್ ನೀಡಲಾಗುತ್ತದೆ. ಕೋರ್ಸ್‌ ಅನಂತರ ಯಾವುದಾದರೂ ಫ್ಯಾಶನ್‌ ಡಿಸೈನಿಂಗ್‌ ಕಂಪೆನಿಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದು ಅಥವಾ ನಿಮ್ಮದೇ ಸ್ವಂತ ಉದ್ಯಮವನ್ನು ಆರಂಭಿಸಬಹುದು.

ಹೊಸ ಟ್ರೆಂಡ್‌ಗಳು

ಪೇಪರ್‌ ಕ್ರಾಫ್ಟ್ನ ಮೂಲಕ ಹೊಸ ಹೊಸ ಟ್ರೆಂಡ್‌ಗಳು ಸೃಷ್ಟಿಯಾಗುತ್ತಿರುವುದೇ ಇದರ ಹೊಸತನ. ಕೇವಲ ಮನೆಯ ಆಲಂಕಾರಿಕ ವಸ್ತುಗಳನ್ನು ಮಾತ್ರ ತಯಾರಿಸಬಹುದೆಂಬ ಕಲ್ಪನೆಗೂ ಆಚೆ ಮನೆಯನ್ನೇ ಪೇಪರ್‌ನಲ್ಲಿ ಅಲಂಕರಿಸಬಹುದೆಂಬ ಕ್ರಿಯಾತ್ಮಕತೆ ಸೃಷ್ಟಿಯಾಗಿದೆ. ಬಣ್ಣಗಳ ಅಲರ್ಜಿ ಇರುವವರು ಅಥವಾ ಬಣ್ಣಗಳಿಂದ ಸಮಸ್ಯೆ ಇರುವವರಿಗೆ ಇದು ಹೆಚ್ಚು ಸೂಕ್ತವಾಗಿರುತ್ತದೆ. ಮನೆಯ ಗೋಡೆಗಳನ್ನು ವಿವಿಧ ದಿನಪತ್ರಿಕೆಗಳನ್ನು ಬಳಸಿ ಅಲಂಕರಿಸುವುದೇ ಇದರ ಮ್ಯಾಜಿಕ್‌. ಅದೇ ರೀತಿ ಬಲ್ಬ್, ಟೀಪಾಯ್‌ಗಳನ್ನು ಹೀಗೆ ಅಲಂಕರಿಸಬಹುದು.

ಪೇಪರ್‌ ಕ್ರಾಫ್ಟ್ ಉದ್ಯೋಗವನ್ನು ಪಾರ್ಟ್‌ ಟೈಮ್‌ ಅಥವಾ ಫ‌ುಲ್ ಟೈಮ್‌ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಬೇರೆ ಯಾವುದಾದರೂ ಉತ್ತಮ ಉದ್ಯೋಗದಲ್ಲಿದ್ದು, ಕ್ರಿಯೆಟಿವಿಟಿಯಲ್ಲಿ ಆಸಕ್ತ್ತಿ ಇದ್ದರೆ ಇದನ್ನು ಪಾರ್ಟ್‌ ಟೈಮ್‌ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಮನೆ ಅಲಂಕಾರ, ಸ್ನೇಹಿತರಿಗೆ ಉಡುಗೊರೆ ಕೊಡುವ ಸಂದರ್ಭದಲ್ಲಿ ಇದು ಸಹಕಾರಿ. ವೃತ್ತಿಯನ್ನಾಗಿ ಕೂಡ ಇದನ್ನು ಸ್ವೀಕರಿಸಬಹುದು. ಹೊಸತನಕ್ಕೆ ಹೆಚ್ಚು ಅವಕಾಶ ನೀಡಿದಲ್ಲಿ ಈ ಉದ್ಯೋಗ ಲಾಭದಾಯಕ.

•ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.