ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ


Team Udayavani, Mar 18, 2020, 4:37 AM IST

novel

ಗ್ರಾಮ್ಯ ಭಾರತ ಇಂದು ಹಲವಾರು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಇದನ್ನು ಸೂಕ್ಷ್ಮಗ್ರಹಿಯಾಗಿ ನೋಡಿ ಜೀವನದಲ್ಲಿ ಉಂಟಾಗುವ ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಸಣ್ಣ ಕಾದಂಬರಿಯೇ ಲೇಖಕಿ ಸುಮಂಗಲಾ ಅವರ ಅಗೆದೆಷ್ಟೂ ನಕ್ಷತ್ರ. ಈ ಕಾದಂಬರಿಯೂ ಓದುಗರಿಗೂ ಹತ್ತಿರವಾಗುವ ಭಾವನಾತ್ಮಕ ಸಂದೇಶ ರವಾನಿಸುತ್ತದೆ. ಈ ಕಾದಂಬರಿಯ ಪಾತ್ರಗಳು ತೀಕ್ಷ್ಮಮತಿಯಾಗಿ ತರ್ಕಿಸುತ್ತವೆ. ಹೀಗಾಗಿ ಈ ಕೃತಿಯು ಓದುಗರ ಮೇಲೆ ವಾಸ್ತವ ನಡಿಗೆ ಮಾಡುತ್ತದೆ. ಆಗದರೆ ಈ ಕಾದಂಬರಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮೂರು ಮುಖ್ಯ ಅಂಶಗಳ ಮೇಲೆ ಇಲ್ಲಿ ಸಂಕ್ಷಿಪ್ತವಾಗಿ ಬೆಳಕು ಚೆಲ್ಲಲಾಗಿದೆ.

ಅಂಶ 1: ಈ ಕಾದಂಬರಿಯಲ್ಲಿ ಪ್ರಧಾನವಾಗುವ ರೈತ ಬದುಕಿನ ವಾಸ್ತವ ಸ್ಥಿತಿ. ಸಾವಿರಾರು ರೈತರು ಸಾಲಬಾಧೆ ಒತ್ತಡ ನಿಭಾಯಿಸದೇ ಆತ್ಮಹತ್ಯೆಯಲ್ಲಿ ಬಾಳು ಕೊನೆಯಾಗಿಸುವ ಅಂತಿಮ ನಿರ್ಧಾರ ಕೇಳಲು ಎಷ್ಟು ಕಠಿನವಾಗಿರುತ್ತದೋ ಅದಕ್ಕಿಂತ ಕಠಿನವಾಗುವುದು ಆ ರೈತ ಕುಟುಂಬ ಸಾವು ತಂದ ನೋವಿಬಾಧೆಯನ್ನು ಸಹಿಸಿಕೊಂಡು ಕೊರಗುವ ವ್ಯಥೆಯನ್ನು ಕೇಳಿದಾಗ. ಐಟಿ ಕಂಪೆನಿಯ ಕೆಲಸವನ್ನು ಬಿಟ್ಟು ರೈತರ ಮನೆಯಲ್ಲಿ ಕೂತು ಸಮಸ್ಯೆ ಆಲಿಸುವ ನೀತು ಇಲ್ಲಿ ಓದುಗರಿಗೆ ರೈತ ಬಂಧುವಿನ ದುಸ್ಥಿತಿಯನ್ನು ಹೊರ ಜಗತ್ತಿಗೆ ದಾಟಿಸುವ ಸೇತುವೆಯಾಗಿದ್ದಾಳೆ.

ಅಂಶ 2: ಹಳ್ಳಿ ಬದುಕಿನ ವ್ಯಥೆಯನ್ನು ಆಧುನಿಕ ಶೈಲಿಗೆ ಒಗ್ಗಿಕೊಂಡಿರುವ ಜೀವವೊಂದು ಕಿವಿಯಾಗಿಕೊಂಡು ಸಾಗುವುದರ ಬಗೆ. ಕಾದಂಬರಿಯಲ್ಲಿ ಸಂಬಂಧ ಮತ್ತು ಮುಕ್ತವಾದ ಆಯ್ಕೆಯನ್ನು ಆಯ್ದುಕೊಳ್ಳುವ ಅವಕಾಶವನ್ನು ತೆರೆದಿಟ್ಟು ಬಾಳ್ವೆ ನಡೆಸುವ ಪಾತ್ರಗಳಿದ್ದು,ರೈತರ ಜಲ್ವಂತ ಸಮಸ್ಯೆಯನ್ನು ಹೊರಹಾಕುವ ಒಂದಿಷ್ಟು ಪ್ರಯತ್ನವನ್ನು ಮನದಟ್ಟು ಆಗುವ ರೀತಿಯಲ್ಲಿ ಚಿತ್ರಿತವಾಗಿದೆ.

ಅಂಶ 3: ಪರಿಸ್ಥಿತಿ, ಪಾತ್ರ ಹಾಗೂ ಪರಿಸರಕ್ಕೆ ಅನುಗುಣವಾಗಿ ಬಳಕೆಯಾದ ಭಾಷೆಯಿಂದ ಈ ಕಾದಂಬರಿ ನಮ್ಮ ಮನಕ್ಕೆ ಆತ್ಮೀಯವಾಗುತ್ತದೆ. ಇನ್ನೂ ಒಂದು ಸೊಬಗು ಅಂದ್ರೆ ಧಾರವಾಡ ಕನ್ನಡ , ಮಲೆನಾಡು ಸೀಮೆಯ ಭಾಷೆಯಲ್ಲಿ ಸಾಗುವ ಸಂಭಾಷಣೆಗಳು.ಕಡಿಮೆ ಅವಧಿಯಲ್ಲಿ ಒಂದೊಳ್ಳೆ ಪುಸ್ತಕ ಓದಿ ಮುಗಿಸ್ಬೇಕು ಅನ್ನುವವರ ಸಾಲಿಗೆ ಈ ಕಾದಂಬರಿ ಸೇರುತ್ತದೆ.

ಈ ಕಾದಂಬರಿಯಲ್ಲಿ ನೀಡಲಾದ ಈ ಮೂರು ಅಂಶಗಳೇ ಸಾಕು, ದೇಶದ ರೈತನ ಸ್ಥಿತಿ-ಗತಿ ಸಹಿತ ಹಲವಾರು ಸಮಕಾಲೀನ ಚರ್ಚೆ ಮಾಡುತ್ತದೆ ಎಂಬುದಕ್ಕೆ. ಎಲ್ಲ ಬಗೆಯ ಓದುಗರನ್ನು ಸೆಳೆಯುವ ಕೃತಿ ಇದಾಗಿದೆ.

- ಸುಹಾನ್‌ ಶೇಕ್‌

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

ವಿದೇಶಕ್ಕೆ ಹೋಗುವ ಮುನ್ನ…

ವಿದೇಶಕ್ಕೆ ಹೋಗುವ ಮುನ್ನ…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.