ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ


Team Udayavani, Mar 18, 2020, 4:37 AM IST

novel

ಗ್ರಾಮ್ಯ ಭಾರತ ಇಂದು ಹಲವಾರು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಇದನ್ನು ಸೂಕ್ಷ್ಮಗ್ರಹಿಯಾಗಿ ನೋಡಿ ಜೀವನದಲ್ಲಿ ಉಂಟಾಗುವ ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಸಣ್ಣ ಕಾದಂಬರಿಯೇ ಲೇಖಕಿ ಸುಮಂಗಲಾ ಅವರ ಅಗೆದೆಷ್ಟೂ ನಕ್ಷತ್ರ. ಈ ಕಾದಂಬರಿಯೂ ಓದುಗರಿಗೂ ಹತ್ತಿರವಾಗುವ ಭಾವನಾತ್ಮಕ ಸಂದೇಶ ರವಾನಿಸುತ್ತದೆ. ಈ ಕಾದಂಬರಿಯ ಪಾತ್ರಗಳು ತೀಕ್ಷ್ಮಮತಿಯಾಗಿ ತರ್ಕಿಸುತ್ತವೆ. ಹೀಗಾಗಿ ಈ ಕೃತಿಯು ಓದುಗರ ಮೇಲೆ ವಾಸ್ತವ ನಡಿಗೆ ಮಾಡುತ್ತದೆ. ಆಗದರೆ ಈ ಕಾದಂಬರಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮೂರು ಮುಖ್ಯ ಅಂಶಗಳ ಮೇಲೆ ಇಲ್ಲಿ ಸಂಕ್ಷಿಪ್ತವಾಗಿ ಬೆಳಕು ಚೆಲ್ಲಲಾಗಿದೆ.

ಅಂಶ 1: ಈ ಕಾದಂಬರಿಯಲ್ಲಿ ಪ್ರಧಾನವಾಗುವ ರೈತ ಬದುಕಿನ ವಾಸ್ತವ ಸ್ಥಿತಿ. ಸಾವಿರಾರು ರೈತರು ಸಾಲಬಾಧೆ ಒತ್ತಡ ನಿಭಾಯಿಸದೇ ಆತ್ಮಹತ್ಯೆಯಲ್ಲಿ ಬಾಳು ಕೊನೆಯಾಗಿಸುವ ಅಂತಿಮ ನಿರ್ಧಾರ ಕೇಳಲು ಎಷ್ಟು ಕಠಿನವಾಗಿರುತ್ತದೋ ಅದಕ್ಕಿಂತ ಕಠಿನವಾಗುವುದು ಆ ರೈತ ಕುಟುಂಬ ಸಾವು ತಂದ ನೋವಿಬಾಧೆಯನ್ನು ಸಹಿಸಿಕೊಂಡು ಕೊರಗುವ ವ್ಯಥೆಯನ್ನು ಕೇಳಿದಾಗ. ಐಟಿ ಕಂಪೆನಿಯ ಕೆಲಸವನ್ನು ಬಿಟ್ಟು ರೈತರ ಮನೆಯಲ್ಲಿ ಕೂತು ಸಮಸ್ಯೆ ಆಲಿಸುವ ನೀತು ಇಲ್ಲಿ ಓದುಗರಿಗೆ ರೈತ ಬಂಧುವಿನ ದುಸ್ಥಿತಿಯನ್ನು ಹೊರ ಜಗತ್ತಿಗೆ ದಾಟಿಸುವ ಸೇತುವೆಯಾಗಿದ್ದಾಳೆ.

ಅಂಶ 2: ಹಳ್ಳಿ ಬದುಕಿನ ವ್ಯಥೆಯನ್ನು ಆಧುನಿಕ ಶೈಲಿಗೆ ಒಗ್ಗಿಕೊಂಡಿರುವ ಜೀವವೊಂದು ಕಿವಿಯಾಗಿಕೊಂಡು ಸಾಗುವುದರ ಬಗೆ. ಕಾದಂಬರಿಯಲ್ಲಿ ಸಂಬಂಧ ಮತ್ತು ಮುಕ್ತವಾದ ಆಯ್ಕೆಯನ್ನು ಆಯ್ದುಕೊಳ್ಳುವ ಅವಕಾಶವನ್ನು ತೆರೆದಿಟ್ಟು ಬಾಳ್ವೆ ನಡೆಸುವ ಪಾತ್ರಗಳಿದ್ದು,ರೈತರ ಜಲ್ವಂತ ಸಮಸ್ಯೆಯನ್ನು ಹೊರಹಾಕುವ ಒಂದಿಷ್ಟು ಪ್ರಯತ್ನವನ್ನು ಮನದಟ್ಟು ಆಗುವ ರೀತಿಯಲ್ಲಿ ಚಿತ್ರಿತವಾಗಿದೆ.

ಅಂಶ 3: ಪರಿಸ್ಥಿತಿ, ಪಾತ್ರ ಹಾಗೂ ಪರಿಸರಕ್ಕೆ ಅನುಗುಣವಾಗಿ ಬಳಕೆಯಾದ ಭಾಷೆಯಿಂದ ಈ ಕಾದಂಬರಿ ನಮ್ಮ ಮನಕ್ಕೆ ಆತ್ಮೀಯವಾಗುತ್ತದೆ. ಇನ್ನೂ ಒಂದು ಸೊಬಗು ಅಂದ್ರೆ ಧಾರವಾಡ ಕನ್ನಡ , ಮಲೆನಾಡು ಸೀಮೆಯ ಭಾಷೆಯಲ್ಲಿ ಸಾಗುವ ಸಂಭಾಷಣೆಗಳು.ಕಡಿಮೆ ಅವಧಿಯಲ್ಲಿ ಒಂದೊಳ್ಳೆ ಪುಸ್ತಕ ಓದಿ ಮುಗಿಸ್ಬೇಕು ಅನ್ನುವವರ ಸಾಲಿಗೆ ಈ ಕಾದಂಬರಿ ಸೇರುತ್ತದೆ.

ಈ ಕಾದಂಬರಿಯಲ್ಲಿ ನೀಡಲಾದ ಈ ಮೂರು ಅಂಶಗಳೇ ಸಾಕು, ದೇಶದ ರೈತನ ಸ್ಥಿತಿ-ಗತಿ ಸಹಿತ ಹಲವಾರು ಸಮಕಾಲೀನ ಚರ್ಚೆ ಮಾಡುತ್ತದೆ ಎಂಬುದಕ್ಕೆ. ಎಲ್ಲ ಬಗೆಯ ಓದುಗರನ್ನು ಸೆಳೆಯುವ ಕೃತಿ ಇದಾಗಿದೆ.

- ಸುಹಾನ್‌ ಶೇಕ್‌

ಟಾಪ್ ನ್ಯೂಸ್

1-sdsadsad

Sugar factory; ಎಥೆನಾಲ್‌ಗೆ ಕಬ್ಬಿನ ರಸ ಬಳಸದಿರಿ: ಕೇಂದ್ರ ಸರಕಾರ ನಿರ್ದೇಶನ 

1-sadsdsa-d

BJP ಜನರ ಆಯ್ಕೆ ಎನ್ನುವುದು ಸಾಬೀತು: 3 ರಾಜ್ಯಗಳ ಗೆಲುವಿನ ಬಗ್ಗೆ ಮೋದಿ ಬಣ್ಣನೆ

1-sadasdd

Pro Kabaddi-10; ಗುಜರಾತ್‌ಗೆ ಆಘಾತ: ಪಾಟ್ನಾ ಜಯಭೇರಿ

1-sadasd

Painkiller ‘ಮೆಫ್ತಾಲ್’ ಮಾತ್ರೆ ಅಡ್ಡಪರಿಣಾಮ ಬೀರುತ್ತದೆ: ಸರಕಾರದ ಎಚ್ಚರಿಕೆ

ARINDAM BAGCHI

PoK ಭಾರತದ ಭಾಗ; ಯಾವುದೇ ಕಾರಣಕ್ಕೂ ಹೇಳಿಕೆಯನ್ನು ಬದಲಿಸುವುದಿಲ್ಲ: MEA

ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು

Vijayapura; ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು

pinarayi

Dowry ಬೇಡಿಕೆ ಪ್ರಸ್ತಾಪಗಳನ್ನು ತಿರಸ್ಕರಿಸಲು ಯುವತಿಯರಿಗೆ ಪ್ರೋತ್ಸಾಹ ನೀಡಬೇಕು:ಕೇರಳ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

ವಿದೇಶಕ್ಕೆ ಹೋಗುವ ಮುನ್ನ…

ವಿದೇಶಕ್ಕೆ ಹೋಗುವ ಮುನ್ನ…

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

cen

Politics: ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌,ಅರ್ಜುನ್‌ ಮುಂಡಾಗೆ ಹೆಚ್ಚುವರಿ ಖಾತೆ

vijayendra R Ashok

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್‌, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

china pnuemonia

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್‌

kempanna

ಕೆಂಪಣ್ಣ ಹೊಸ ಕಮಿಷನ್‌ ಬಾಂಬ್‌ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

pro

Mangaluru: ಅತಿಥಿ ಉಪನ್ಯಾಸಕರ ಖಾಯಮಾತಿ ಆಗ್ರಹಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.