ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗಿ


Team Udayavani, Jul 3, 2019, 5:00 AM IST

12

ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸಿನ ಜೀವನ ಪ್ರತಿಯೊಬ್ಬರ ಕನಸು. ಅದನ್ನು ಸಾಕಾರಗೊಳಿಸಲು ಒಂದು ಉತ್ತಮ ಉದ್ಯೋಗವನ್ನು ಆಯ್ಕೆ ಮಾಡುವುದು ಮತ್ತು ಸೇರಿಕೊಳ್ಳುವುದು ಬಹಳ ಮುಖ್ಯ. ಅದರಲ್ಲಿಯೂ ಸರಕಾರಿ ಉದ್ಯೋಗ ಒಂದು ಉತ್ತಮ ಆಯ್ಕೆ. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಹೆಚ್ಚುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿ ಅತ್ಯಗತ್ಯ. ಇವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದಾದರೆ ಐಎಎಸ್‌ ವಿಷಯವನ್ನು ಮೊದಲು ಅರಿಯೋಣ.

ಐಎಎಸ್‌: ಕೇಂದ್ರ ಲೋಕಸೇವಾ ಆಯೋಗವು ನಡೆಸುವ ನಾಗರಿಕ ಸೇವಾ ಪರೀಕ್ಷೆಗಳು ಬಹಳ ಮುಖ್ಯ ಹಾಗೂ ಕಠಿನ ಪರೀಕ್ಷೆ. ಅದೇ ರೀತಿ ದೇಶದ ಅತ್ಯುನ್ನತ ಮಟ್ಟದ ಹುದ್ದೆ ಅಲಂಕರಿಸಬೇಕಾದ ಕ್ಷೇತ್ರ ಕೂಡ. ಇದರಲ್ಲಿ 24 ಸೇವೆಗಳಿದ್ದು, (ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಐಆರ್‌ಎಸ್‌, ಐಎಎಎಸ್‌ ಇತ್ಯಾದಿ) ಪ್ರತೀವರ್ಷ 1,000 ಹುದ್ದೆಗಳಿಗೆ ಅಧಿಸೂಚನೆ ನೀಡಲಾಗುತ್ತಿದೆ. ಅಲ್ಲದೆ ಇಂಡಿಯನ್‌ ಎಕಾನೊಮಿಕ್‌ ಸರ್ವಿಸ್‌, ಇಂಡಿಯನ್‌ ಮೆಡಿಕಲ್ ಸರ್ವಿಸ್‌, ಇಂಡಿಯನ್‌ ಎಂಜಿನಿಯರಿಂಗ್‌ ಸರ್ವಿಸ್‌ ಸೇರಿದಂತೆ ಇನ್ನೂ 30ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಕೆಎಸ್‌ಎಸ್‌: ಕರ್ನಾಟಕ ಲೋಕಸೇವಾ ಆಯೋಗದಿಂದ ಹತು ್ತಸಾವಿರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಗಜೆಟೆಡ್‌ ಆಫೀಸರ್, ಎಫ್‌.ಡಿ.ಎ, ಎಸ್‌.ಡಿ.ಎ, ಪಿ.ಡಿ.ಒ, ಪಂಚಾಯತ್‌ ಕಾರ್ಯದರ್ಶಿ, (ಗಜೆಟೆಡ್‌ ಆಫೀಸರ್, ಟೆಕ್ನಿಕಲ್) ಇತ್ಯಾದಿ.

ವಯೋಮಿತಿ ಹೀಗಿರಬೇಕು
ಯುಪಿಎಸ್‌ಸಿ ಪರೀಕ್ಷೆ ಬರೆಯುವುದಾದರೆ ಸಾಮಾನ್ಯ ಕೆಟಗರಿಯಲ್ಲಿ 21 ವರ್ಷದಿಂದ 32 ವರ್ಷದವರೆಗೆ ಒಟ್ಟು 6 ಸಲ ಅವಕಾಶವಿದೆ. ಒಬಿಸಿಯವರಿಗೆ 21 ವರ್ಷದಿಂದ 35 ವರ್ಷದವರೆಗೆ 9 ಸಲ ಅವಕಾಶವಿದೆ. ಎಸ್‌ಸಿ/ಎಸ್‌ಟಿಯವರಿಗೆ 21 ವರ್ಷದಿಂದ 37 ವರ್ಷದವರೆಗೆ 16 ಸಲ ಪರೀಕ್ಷೆ ಬರೆಯಲು ಅವಕಾಶವಿದೆ. ಕೆಪಿಎಸ್‌ಸಿಯಲ್ಲಿ ಸಾಮಾನ್ಯ ಕೆಟಗಿರಿಯಲ್ಲಿ 21 ವರ್ಷದ ಅನಂತರ 35 ವರ್ಷದ ಒಳಗೆ 5 ಸಲ, ಓಬಿಸಿಯವರಿಗೆ 21 ವರ್ಷದಿಂದ 38 ವರ್ಷದವರೆಗೆ 8 ಸಲ ಹಾಗೂ ಎಸ್‌ಸಿ/ಎಸ್‌ಟಿಯವರಿಗೆ 21 ವರ್ಷದಿಂದ 40 ವರ್ಷದವರೆಗೆ 19 ಸಲ ಪರೀಕ್ಷೆ ಬರೆಯಲು ಅವಕಾಶವಿದೆ. ಅಭ್ಯರ್ಥಿಯು ಕಾನೂನು ರೀತಿಯ ಸ್ಥಾಪಿತವಾದ ಯಾವುದೇ ವಿ.ವಿ.ಯ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಪರೀಕ್ಷೆ ಸಂದರ್ಭ ಮೀಸಲಾತಿಗಳು ಲಭ್ಯವಿದೆ. ಜಾತಿ ಮೀಸಲಾತಿಯಡಿಯಲ್ಲಿ ಪ.ಜಾ/ಪ.ಪಂ. ಸೇರಿದ ಅಭ್ಯರ್ಥಿಗಳಿಗೆ, ಹಿಂದುಳಿದ ವರ್ಗಗಳ ಪ್ರವರ್ಗ-2 (ಎ) ಪ್ರವರ್ಗ 2 (ಬಿ), ಪ್ರವರ್ಗ 3 (ಎ) ಮತ್ತು ಪ್ರವರ್ಗ 3(ಬಿ) ಮೀಸಲಾತಿಯ ಅಭ್ಯರ್ಥಿಗಳಿಗೆ ಮೀಸಲಾತಿ ದೊರೆಯಲಿದೆ.

ಮೀಸಲಾತಿಯಿದೆ
ಕೆಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ. ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು ಅರ್ಹರು. ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲಾತಿ ಲಭ್ಯವಿದೆ. ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ, ಮೊಹರು ಮತ್ತು ನಿಗದಿತ ನಮೂನೆಯಲ್ಲಿ ಪಡೆದಿಟ್ಟುಕೊಂಡಿರಬೇಕು. ಮಾಜಿ ಸೈನಿಕರಿಗೆ ಮೀಸಲಾತಿ ಇದೆ. ಅಂದರೆ, ಸಶಸ್ತ್ರ ದಳಗಳಾದ ನಿಯಮಿತ ಭೂದಳ, ನೌಕಾದಳ ಮತ್ತು ವಾಯು ದಳದಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧನಾಗಿಲ್ಲದೇ) ಸೇವೆ ಸಲ್ಲಿಸಿರುವ ವ್ಯಕ್ತಿಯು ಅರ್ಹತೆ ಪಡೆಯುತ್ತಾರೆ. ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾತಿ ಲಭ್ಯವಿದೆ. ಇದರನ್ವಯ ಶೇ.40ಕ್ಕಿಂತ ಕಡಿಮೆ ಇಲ್ಲದಂತಹ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು ಮಾñ್ರ‌ ಈ ಮೀಸಲಾತಿ ಪಡೆಯಬಹುದು.

ಪ್ರತೀ ವರ್ಷ 12ರಿಂದ 15 ಸ್ಪರ್ಧಾತ್ಮಕ ಪರೀಕ್ಷೆ ಅವಕಾಶ
ಸರಕಾರಿ ಉದ್ಯೋಗದ ಕುರಿತಂತೆ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಪಂಪ್‌ವೆಲ್ನ ಸತ್ಯಂ ಆರ್ಕೆಡ್‌ನ‌ಲ್ಲಿರುವ ಸರ್ವಜ್ಞ ಐಎಎಸ್‌ ಅಕಾಡೆಮಿಯ ಸುರೇಶ್‌ ಎಂ.ಎಸ್‌. ಅವರು ಹೇಳುವ ಪ್ರಕಾರ, ಪ್ರತಿ ವರ್ಷ ಸುಮಾರು 12-15 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (ಐ.ಎ.ಎಸ್‌., ಕೆ.ಎ.ಎಸ್‌., ಬ್ಯಾಂಕಿಂಗ್‌., ರೈಲ್ವೇ., ಆರ್‌.ಬಿ.ಐ., ಸರಕಾರದ ಸಾಮಾನ್ಯ ಪರೀಕ್ಷೆಗಳು ಇತ್ಯಾದಿ) ಬರೆಯಲು ಅವಕಾಶಗಳಿವೆ. ನಿರಂತರ ತಯಾರಿ ನಡೆಸಿದರೆ ಯಾವುದಾದರೊಂದು ಪರೀಕ್ಷೆಯಲ್ಲಿ ಯಶಸ್ಸು ನಿಶ್ಚಿತ. ಇಂತಹ ಪರೀಕ್ಷೆಗಳಲ್ಲಿ ಯಶಸ್ಸಿಗೆ ಕನಿಷ್ಠ 2 ವರ್ಷಗಳ ತಯಾರಿ ಅತ್ಯಗತ್ಯ. 500 ದಿನಗಳ ಪ್ರಚಲಿತ ವಿದ್ಯಮಾನಗಳ ನೋಟ್ಸ್‌, ಪ್ರತಿನಿತ್ಯ ಬರೆದಿಡಬೇಕಾಗುತ್ತದೆ. ಎಲ್ಲ ಪುಸ್ತಕಗಳು ಮತ್ತು ಮಾಸಿಕ ಪತ್ರಿಕೆಗಳ ಪಟ್ಟಿ ಮಾಡಿ ಅದನ್ನು 10-12 ತಿಂಗಳುಗಳಲ್ಲಿ ಓದಿಕೊಳ್ಳಬೇಕಾಗುತ್ತದೆ. ಪ್ರತಿನಿತ್ಯ ದಿನಪತ್ರಿಕೆ, ಮತ್ತು ಅಂತರ್ಜಾಲಗಳಲ್ಲಿ ಪ್ರಚಲಿತ ವಿದ್ಯಮಾನ ಮತ್ತು ಪೂರಕ ವಿಷಯಗಳನ್ನು ಸಂಗ್ರಹಿಸಲು ಸಮಯ ನಿಗದಿಮಾಡಿ ನಿರಂತರ ನೋಟ್ಸ್‌ ಮಾಡಬೇಕು. ಒಂದು ವರ್ಷದ ನಿರಂತರ ತಯಾರಿಯಾದ ಮೇಲೆ ಮಾದರಿ ಪರೀಕ್ಷೆಗಳನ್ನು ಬರೆಯಬೇಕು. ಆನ್‌ಲೈನ್‌ ಅಥವಾ ಕೋಚಿಂಗ್‌ ಸೆಂಟರ್‌ಗಳಲ್ಲಿ ಬರೆದರೆ ಒಳ್ಳೆಯದು. ಹೈಸ್ಕೂಲು ಮಟ್ಟದಿಂದ ತಯಾರಿ ಪ್ರಾರಂಭಿಸುವುದು ಉತ್ತಮ ಎನ್ನುತ್ತಾರೆ ಅವರು.

ಪಠ್ಯಕ್ರಮ ಹೀಗಿರಲಿದೆ..
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2 ವಿಷಯದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸಾಮಾನ್ಯಜ್ಞಾನ ಮತ್ತು ಆ್ಯಪ್ಟಿಟ್ಯೂಡ್‌ ಟೆಸ್ಟ್‌. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಿಗೆ ಶೇ.80ರಷ್ಟು ಸಾಮಾನ್ಯಜ್ಞಾನ ಮತ್ತು ಶೇ.20ರಷ್ಟು ಅಪ್ಟಿಟ್ಯೂಡ್‌ ವಿಚಾರಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ. ಬ್ಯಾಂಕಿಂಗ್‌, ರೈಲ್ವೇಸ್‌, ಪೋಸ್ಟಲ್, ಎಸ್‌ಎಸ್‌ಸಿ ಮುಂತಾದ ಪರೀಕ್ಷೆಗಳಿಗೆ ಶೇ.80ರಷ್ಟು ಅಪ್ಟಿಟ್ಯೂಡ್‌, ರೀಸನಿಂಗ್‌, ಮ್ಯಾಥ್ಸ್ ಸಂಬಂಧಿಸಿದ ಪ್ರಶ್ನೆಗಳು ಹಾಗೂ ಶೇ.20ರಷ್ಟು ಸಾಮಾನ್ಯಜ್ಞಾನ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡು ವಿಷಯಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ.
ದಿನೇಶ್ ಇರಾ

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.