- Saturday 14 Dec 2019
ಶಿಕ್ಷಣದ ಜತೆ ಇರಲಿ ಕೌಶಲ
Team Udayavani, Jun 26, 2019, 5:00 AM IST
ವಿದ್ಯಾರ್ಥಿ ಜೀವನ ಎನ್ನುವುದು ಪ್ರತಿಯೊಬ್ಬರ ಪಾಲಿಗೆ ಸ್ಮರಣೀಯವಾಗಿರುತ್ತದೆ. ಭವಿಷ್ಯ ನಿರ್ಧಾರವಾಗುವುದೂ ಈ ದಿನಗಳಲ್ಲೇ. ಸರಿಯಾದ ಮಾರ್ಗದಲ್ಲಿ ಹೆಜ್ಜೆ ಇಟ್ಟರೆ ಉತ್ತಮ ಬದುಕು ನಿಮ್ಮದಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮಾತ್ರವಲ್ಲ ಅದರೊಂದಿಗೆ ಕೆಲವೊಂದು ಕೌಶಲಗಳನ್ನು ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಹೀಗಾಗಿ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ಶಿಕ್ಷಣ ತಜ್ಞರು. ಶಿಕ್ಷಣ ಮುಗಿಸಿ ವಿದ್ಯಾಸಂಸ್ಥೆಯಿಂದ ಹೊರ ಬರುವಾಗ ಯಾವುದಾದರೊಂದು ಮಾರ್ಗದ ಮೂಲಕ ಜೀವನ ಸಾಗಿಸುವಂತಿರಬೇಕು.
ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ
ಶಿಕ್ಷಣ ಜತೆಗೆ ಪ್ರಾಯೋಗಿಕ ಅನುಭವವೂ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. ಆಗ ಮಾತ್ರ ಶಿಕ್ಷಣದ ಉದ್ದೇಶ ಸಾರ್ಥಕವಾದಂತಾಗುತ್ತದೆ. ಉದಾಹರಣೆಗೆ ಕಾಮರ್ಸ್ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಬಗ್ಗೆ ನಾವು ಥಿಯರಿ ಪಾಠ ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ಅವರನ್ನು ಬ್ಯಾಂಕ್ಗೆ ಕೆರದುಕೊಂಡು ಹೋಗಿ ಅಲ್ಲಿನ ಕಾರ್ಯ ವಿಧಾನಗಳ ಪರಿಚಯ ಮಾಡಿಕೊಡಬೇಕು ಎನ್ನುತ್ತಾರೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ. ಈಗ ಮಂಗಳೂರು ವಿ.ವಿ. 50 ಮಾರ್ಕ್ಸ್ ನ ಹೆಚ್ಚು ವರಿ ಚಟುವಟಿಕೆಗಳನ್ನು ಪಠ್ಯದಲ್ಲಿ ಅಳವಡಿಸಿಕೊಂಡಿದೆ. ವಾರಕ್ಕೆ ಒಂದೆರಡು ಗಂಟೆ ಇದರ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ವಿದ್ಯಾರ್ಥಿ ಎನ್ನೆಸ್ಸೆಸ್, ಎನ್ಸಿಸಿ ಅಥವಾ ಅವರ ಅಭಿರುಚಿಗೆ ತಕ್ಕಂತ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಇದರಿಂದ ಅವರಿಗೆ ಬದುಕಿನ ಪರಿಚಯ ಆಗುವುದರ ಜತೆಗೆ ಪ್ರಾಯೋಗಿಕ ಅನುಭವ ಸಿಗುತ್ತದೆ ಎಂದು ಅವರು ವಿವರಿಸುತ್ತಾರೆ.
ಇಂದಿನ ಅಗತ್ಯ
ವಿದ್ಯಾರ್ಥಿಗಳಲ್ಲಿ ಛಲ, ಕೌಶಲ ಮತ್ತು ಸಂವಹನ ಶಕ್ತಿಯನ್ನು ಹೆಚ್ಚಿಸಬೇಕು. ನಾನು ಸಾಧಿಸಬಲ್ಲೆ ಎನ್ನುವ ಛಲ ಬೆಳೆಸುವ ಶಿಕ್ಷಣ ಇಂದಿನ ಅಗತ್ಯ. ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯೂ ಇತ್ತ ಗಮನ ಹರಿಸಿ ರುವುದು ಉತ್ತಮ ಬೆಳವಣಿಗೆ.
– ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಎಂ.ಜಿ.ಎಂ. ಕಾಲೇಜು, ಉಡುಪಿ
ಪಠ್ಯೇತರ ಚಟುವಟಿಕೆಗಳಿಗೆ ಸಮಯ ಮೀಸಲಿಡಿ
ವಿದ್ಯಾರ್ಥಿಗಳು ಓದಿನೊಂದಿಗೆ ಕೆಲವು ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಬಿಡುವಿನ ಸಮಯವನ್ನು ಇದಕ್ಕಾಗಿ ಬಳಸಬಹುದು. ಅವುಗಳೆಂದರೆ:
1 ಕಂಪ್ಯೂಟರ್ ಶಿಕ್ಷಣ: ಪ್ರಸ್ತುತ ಕಂಪ್ಯೂಟರ್ನ ಪ್ರಾಥಮಿಕ ಜ್ಞಾನ ಎಲ್ಲರಲ್ಲೂ ಇದೆ. ಇದರ ಜತೆಗೆ ಅದರಲ್ಲಿನ ಕೆಲವು ವಿಶೇಷ ಕೋರ್ಸ್ ಗಳನ್ನು ನೀವು ಅಧ್ಯಯನ ಮಾಡಬಹುದು. ನಿಮ್ಮ ಆಸಕ್ತಿ, ಬೇಡಿಕೆಗೆ ಅನುಗುಣವಾಗಿ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
2 ಸಂವಹನ ಕಲೆ: ಜಗತ್ತು ನಿಂತಿರುವುದು ಮಾತಿನ ಮೇಲೆ. ಹೀಗಾಗಿ ನೀವು ಉತ್ತಮ ಸಂವಹನ ಕಲೆಯನ್ನು ರೂಢಿಸಿಕೊಳ್ಳಬೇಕು. ಇನ್ನೊಬ್ಬರೊಂದಿಗೆ ಹೇಗೆ ವರ್ತಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಯಾವ ರೀತಿ ವರ್ತಿಸಬೇಕು ಎನ್ನುವುದರ ಕುರಿತು ಮಾಹಿತಿ ಹೊಂದುವುದು ಅವಶ್ಯ.
3 ಭಾಷಾ ಸಾಮರ್ಥ್ಯ: ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯಲು ಶ್ರಮಿಸಿ. ಅದರಲ್ಲೂ ಮಾತೃಭಾಷೆ ಜತೆಗೆ ಇಂಗ್ಲಿಷ್, ಹಿಂದಿಯಲ್ಲಿ ಪರಿಣತಿ ಹೊಂದುವುದು ಅನಿವಾರ್ಯ.
4 ಆಸಕ್ತಿಯೇ ಹವ್ಯಾಸವಾಗಲಿ: ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ತೊಡಗಿಸಿಕೊಳ್ಳಿ. ಉದಾಹರಣೆಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಇದ್ದರೆ ಅದರಲ್ಲಿ ತೊಡಗಿಸಿಕೊಳ್ಳಿ, ಅದರ ಬಗೆಗಿನ ಹೆಚ್ಚಿನ ಮಾಹಿತಿ ಕಲೆ ಹಾಕಿ.
5 ಅಪ್ಡೇಟ್ ಆಗಿರಿ: ಜಗತ್ತಿನ ಆಗು-ಹೋಗುಗಳ ಬಗ್ಗೆ ನಿಗಾ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರ ಮಾತ್ರವಲ್ಲ ಎಲ್ಲ ರಂಗಗಳಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಮಾಹಿತಿ ಇರಬೇಕು.
– ರಮೇಶ್ ಬಳ್ಳಮೂಲೆ
ಈ ವಿಭಾಗದಿಂದ ಇನ್ನಷ್ಟು
-
ಇಂದು ವೈದ್ಯಕೀಯ ಕ್ಷೇತ್ರವು ವಿಪುಲ ಅವಕಾಶ, ಉದ್ಯೋಗವನ್ನು ತಂದುಕೊಡುವ ಕ್ಷೇತ್ರವಾಗಿದೆ. ಹಾಗಾಗಿ ಶೈಕ್ಷಣಿಕವಾಗಿ ಕೂಡ ವೈದೈಕೀಯ ಕೋರ್ಸ್ಗಳಿಗೆ ಹೆಚ್ಚಿನ...
-
ಇಂದಿನ ಸ್ಪರ್ಧಾತ್ಮಕ ಮತ್ತು ವಾಣಿಜ್ಯ ಕೇಂದ್ರೀಕೃತ ಯುಗದಲ್ಲಿ ವಿಭಿನ್ನವಾದ ಕೌಶಲ ನಿಮ್ಮಲ್ಲಿದ್ದರೆ ಉದ್ಯೋಗ ಪಡೆಯಲು ಯಾವುದೇ ತೊಡಕಿಲ್ಲ. ಅಂತಹ ವಿಭಿನ್ನ...
-
ವಿದ್ಯಾರ್ಥಿಗಳಿಗೆ ಪದವಿ ಅಂತಿಮ ವರ್ಷದಲ್ಲಿ ಇರುವಾಗಲೇ ಭವಿಷ್ಯದ ಬಗ್ಗೆ ಯೋಚನೆ ಶುರುವಾಗುತ್ತದೆ. ಕೈಯಲ್ಲಿ ಒಂದು ನೌಕರಿ ಇಟ್ಟುಕೊಂಡೆ ಕಾಲೇಜಿನಿಂದ ಹೊರಬೀಳಬೇಕು...
-
ಈಗ ಮಾನವ ಸಂಪನ್ಮೂಲ (ಎಚ್ಆರ್) ಪದವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಯುವ ಜನತೆಯ ನೆಚ್ಚಿನ ಉದ್ಯೋಗಗಳಲ್ಲಿ ಒಂದಾಗಿದೆ. ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ...
-
ನಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಓದಿನೊಂದಿಗೆ ಉದ್ಯೋಗ ಪಡೆಯುವುದೆಂದರೆ ಭವಿಷ್ಯದ ಉದ್ಯೋಗಕ್ಕೆ ಮೊದಲೇ ಸಿದ್ಧತೆ ನಡೆಸಿದಂತೆ. ಅಂತಹ ಉದ್ಯೋಗಗಳಲ್ಲಿ...
ಹೊಸ ಸೇರ್ಪಡೆ
-
ಬೆಂಗಳೂರು: ಸರ್ಕಾರದ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ...
-
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಠ ಹಿಡಿದು ಸರ್ಕಾರ ರಚಿಸಿ, ಬಹುಮತಕ್ಕೆ ಅಗತ್ಯವಿರುವ ಶಾಸಕರನ್ನು ಗೆಲ್ಲಿಸಿಕೊಂಡು ನೆಮ್ಮದಿಯ ನಿಟ್ಟುಸಿರು...
-
ಬೆಂಗಳೂರು: ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ ಆಟದ ಮೈದಾನಗಳಿದ್ದಂತೆ ವಾತಾವರಣ ಸೃಷ್ಟಿಸಿ, ಭಯ, ಖನ್ನತೆ, ಹಿಂಜರಿಕೆಗಳಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ...
-
ಬೆಳಗಾವಿ: ಕಡೋಲಿ ಗ್ರಾಮದಲ್ಲಿ ಬುಧ ವಾರ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ (ಗಲ್ಲು) ಶಿಕ್ಷೆ ವಿ ಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು...
-
ಬೆಂಗಳೂರು: ಹೊಸ ಶಾಸಕರ ಬೆಂಬಲಿ ಗರಿಗೆ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಉಪಚುನಾವಣೆ ಕಾರ್ಯ...