ಲೈಬ್ರರಿ ಸೈನ್ಸ್‌ ಅವಕಾಶಗಳ ಅಗರ


Team Udayavani, Oct 23, 2019, 4:49 AM IST

t-5

ಲೈಬ್ರರಿ ಕೇವಲ ಗ್ರಂಥ ಸಂಗ್ರಹಾಲಯದ ಕೋಣೆಯಲ್ಲ. ಅದೊಂದು ಜ್ಞಾನದ ಆಗರಗಳನ್ನು ಹೊತ್ತ ದೇವಾಲಯ. ಮಾಹಿತಿ ಕೊಡುವ, ಮಾಹಿತಿ ಹೊತ್ತ ಗ್ರಂಥಗಳನ್ನು ಸೂಕ್ತವಾಗಿ ಒದಗಿಸಿಕೊಡುವ ಮತ್ತು ಮಾಹಿತಿ ತಾಣಗಳ ಬಗ್ಗೆ ಖುದ್ದು ಮಾಹಿತಿ ಹೊಂದಿದ ವೃತ್ತಿಪರರೂ ಪ್ರತಿ ಗ್ರಂಥಾಲಯದ ಜ್ಞಾನ ಪ್ರಸರಣೆಯ ಕೊಂಡಿಗಳಾಗಿರುತ್ತಾರೆ. ಅದಕ್ಕಾಗಿ ಗ್ರಂಥಾಲಯ ನಿರ್ವಹಣೆಯೂ ಒಂದು ಕಲೆಯಾಗಿದೆ ಎಂಬುದು ಸರ್ವ ವಿಧಿತ.

ಗ್ರಂಥಾಲಯವೆಂದರೆ ಕೇವಲ ಪುಸ್ತಕ ಹೊತ್ತ ಕಪಾಟುಗಳಲ್ಲ. ಅದೊಂದು ಮಾಹಿತಿ ವಿನಿಮಯದ ತಾಣವಿದ್ದಂತೆ. ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದಷ್ಟು ದೇಶದ ಭವಿಷ್ಯ ಸುಭದ್ರವಾಗುತ್ತದೆ. ಮನಸ್ಸುಗಳಲ್ಲಿ ಓದಿನ ಹರಿವು ಹೆಚ್ಚಿ, ಜ್ಞಾನವರ್ಧನೆಯೊಂದಿಗೆ ದೇಶದ ವಿಕಾಸವೂ ಆಗುತ್ತದೆ. ಅದಕ್ಕಾಗಿಯೇ ಗ್ರಂಥಾಲಯಗಳನ್ನು ಜ್ಞಾನ ದೇವರ ಕೋಣೆ ಎನ್ನುತ್ತಾರೆ.

ಗ್ರಂಥಾಲಯಗಳ ನಿರ್ವಹಣೆಯೂ ಒಂದು ಕಲೆ. ಶಿಕ್ಷಣದ ಚೌಕಟ್ಟಿನಲ್ಲಿ ಅಧ್ಯಯನಿಸಿದರೆ ಮಾತ್ರ ಗ್ರಂಥಾಲಯಗಳನ್ನು ಸುಸೂತ್ರವಾಗಿ ನಿರ್ವಹಿಸಬಹುದು. ಅದಕ್ಕಾಗಿಯೇ ಗ್ರಂಥಾಲಯಗಳ ನಿರ್ವಹಣೆಗಾಗಿಯೇ ತರಬೇತಿಗಳಿವೆ. ಅದೆಂದರೆ ಲೈಬ್ರರಿ ಸೈನ್ಸ್‌.

ವೃತ್ತಿಪರ ಶಿಕ್ಷಣ
ಗ್ರಂಥಪಾಲಕರಾಗಬೇಕಾದರೆ ಸುಲಭದ ಕೆಲಸವಲ್ಲ. ಪಿಯುಸಿ ಬಳಿಕ ಇದನ್ನೂ ವೃತ್ತಿಪರ ಶಿಕ್ಷಣವನ್ನಾಗಿ ಅಧ್ಯಯನ ಮಾಡಬೇಕಾಗುತ್ತದೆ. ಪಿಯುಸಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಯಾವುದೇ ವಿಭಾಗದಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾದವರು ಈ ಕೋರ್ಸ್‌ನ್ನು ಆಯ್ಕೆ ಮಾಡಿಕೊಳ್ಳಬಹುದು.

ಗ್ರಂಥಾಲಯ ವಿಜ್ಞಾನದಲ್ಲಿ ಗ್ರಂಥಾಲಯ ಆಡಳಿತ ಮತ್ತು ನಿರ್ವಹಣೆ, ವರ್ಗೀಕರಣ, ಸೂಚೀಕರಣ, ಗ್ರಂಥಾಲಯದ ಇತರ ಕೆಲಸ ಕಾರ್ಯ, ಕಂಪ್ಯೂಟರ್‌ ಕೇಂದ್ರಿತ ಕೆಲಸಗಳ ಬಗ್ಗೆ ಅಧ್ಯಯನ ನಡೆಸಲು ಅವಕಾಶವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಮಾಧ್ಯಮದಿಂದ ಪುಸ್ತಕ ಓದುವಿಕೆ ಮೂಲಕ ಜ್ಞಾನ ವಿಸ್ತಾರಣೆಯ ಯುಗ ಕಳೆದು ಹೋಗಿದ್ದರೂ, ಗ್ರಂಥಾಲಯಗಳಲ್ಲಿ ಓದುವವರು ಮತ್ತು ಗ್ರಂಥಾಲಯಗಳಿಂದ ಪುಸ್ತಕ ಪಡೆದುಕೊಳ್ಳುವವರ ಸಂಖ್ಯೆ ಕುಸಿದಿಲ್ಲ. ಹಾಗಾಗಿ ಗ್ರಂಥಪಾಲಕರಿಗೆ ಬೇಡಿಕೆಯೂ ಕುಸಿದಿಲ್ಲ ಎಂಬುದು ಖುಷಿ ವಿಷಯವೇ.

ವಿಸ್ತಾರ ಅವಕಾಶ
ಗ್ರಂಥಾಲಯ ವಿಜ್ಞಾನ ಕಲಿತವರಿಗೆ ಉದ್ಯೋಗಾವಕಾಶದ ವ್ಯಾಪ್ತಿ ವಿಸ್ತಾರವಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಒಂದೊಂದು ಗ್ರಂಥಾಲಯ ಇರುತ್ತದೆ. ದೊಡ್ಡ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಎರಡರಿಂದ ಮೂರು ಮಂದಿ ಗ್ರಂಥಪಾಲಕರು ಅಗತ್ಯ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಪುಲ ಉದ್ಯೋಗಾವಕಾಶಗಳು ಗ್ರಂಥ ಪಾಲಕರಿಗೆ ತೆರೆದಿರುತ್ತದೆ. ಸಾರ್ವಜನಿಕ ಉದ್ದಿಮೆಗಳು, ಸರಕಾರಿ, ಅರೆ ಸರಕಾರಿ ಸಂಸ್ಥೆಗಳು, ತಾಂತ್ರಿಕ ಮಾಹಿತಿ ಕೇಂದ್ರಗಳಲ್ಲಿ ಗ್ರಂಥಾಲಯ ಸಹಾಯಕರಾಗಿ, ಗ್ರಂಥಪಾಲಕರಾಗಿ, ಸಹ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸಬಹುದು.

ಕಲಿಕೆಯೂ ಭಿನ್ನ
ಗ್ರಂಥಾಲಯ ವಿಜ್ಞಾನ ಕಲಿಕೆ ಇತರ ಕಲಿಕೆಗಳಿಂತ ತುಸು ಭಿನ್ನ. ಇಲ್ಲಿ ವಿವಿಧ ಭಾಷಾ ಸಾಹಿತ್ಯ ಕಲಿಕೆಯಂತೆಯೇ ಸಾಹಿತ್ಯದ ಒಳಹೊರಗುಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಕನ್ನಡ, ಇಂಗ್ಲಿಷ್‌, ಹಿಂದಿ ಸಾಹಿತ್ಯದ ವಿಸ್ತೃತ ಅಧ್ಯಯನ ಅಗತ್ಯ. ಅದರಲ್ಲೂ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ತುಸು ಹೆಚ್ಚೇ ಜ್ಞಾನ ಇದ್ದರೊಳ್ಳೆಯದು. ಗ್ರಂಥಾಲಯ ವಿಜ್ಞಾನ ಕಲಿಯುತ್ತಲೇ ಪುಸ್ತಕ ಪ್ರೇಮ ಬೆಳೆಸಿಕೊಳ್ಳಲು, ಓದುವಿಕೆಯ ಮೂಲಕ ಜ್ಞಾನ ವರ್ಧನೆ ಮಾಡಿಕೊಳ್ಳಲು ಹಲವಾರು ಅವಕಾಶಗಳಿರುತ್ತವೆ. ನೆಚ್ಚಿದ ಉದ್ಯೋಗವನ್ನು ಪ್ರೀತಿಯಿಂದಲೇ ನಿರ್ವಹಿಸಿದ್ದಲ್ಲಿ ಉತ್ತಮ ಗ್ರಂಥಪಾಲಕರಾಗಿ ಗುರುತಿಸಿಕೊಳ್ಳಲು ಈ ಕ್ಷೇತ್ರದಲ್ಲಿ ಅವಕಾಶಗಳಿವೆ.

ಕಲಿಕಾ ಹಂತ
ಯಾವುದೇ ವಿಷಯದಲ್ಲಿ ಪಿಯಸಿ ಪಡೆದವರು ಮೂರು ವರ್ಷದ ಲೈಬ್ರರಿ ಸೈನ್ಸ್‌ ಪದವಿ ಕೋರ್ಸ್‌ ಮಾಡಬಹುದು. ಪದವೀಧ ರರಿಗೆ ಎರಡು ವರ್ಷ ಸ್ನಾತಕೋತ್ತರ ಗ್ರಂಥಾಲಯ ವಿಜ್ಞಾನ ಕೋರ್ಸ್‌ ಇರುತ್ತದೆ. ಲೈಬ್ರರಿ ಸೈನ್ಸ್‌ನಲ್ಲಿ ಡಿಪ್ಲೊಮಾ ಕೋರ್ಸ್‌ಗಳೂ ಇವೆ. ಡಿಪ್ಲೊಮಾ ಇನ್‌ ಲೈಬ್ರರಿ ಸೈನ್ಸ್‌, ಬಿಲಿಬ್‌, ಎಂ.ಲಿಬ್‌, ಎಂ.ಫಿಲ್‌. ವಿಷಯದಲ್ಲಿ ಕೋರ್ಸ್‌ಗಳು ದೊರೆಯುತ್ತವೆ. ಬಿಎಲ್‌ಐಎಸ್‌ಸಿ, ಎಂಎಲ್‌ಐಎಸ್‌ಸಿ, ಎಂಫಿಲ್‌, ಪಿಎಚ್‌ಡಿ ಅಧ್ಯಯನಕ್ಕೂ ಈ ಕ್ಷೇತ್ರ ಪೂರಕ ತಾಣ ಒದಗಿಸಿಕೊಡುತ್ತದೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕೋರ್ಸ್‌ ಲಭ್ಯವಿದೆ.

-  ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.