ನೀವೂ ಸಂಪರ್ಕಾಧಿಕಾರಿಯಾಗಿ
Team Udayavani, Feb 6, 2019, 7:46 AM IST
ಪ್ರತಿಷ್ಠಿತ ಸಂಸ್ಥೆಯಿಂದ ವೈದ್ಯಕೀಯ ಅಥವಾ ಆರೋಗ್ಯ ಶಿಬಿರ ಆಗುತ್ತಿದೆ ಹಾಗೂ ಇದರಿಂದ ಸಾರ್ವಜಕನಿಕರಿಗೆ ಉಪಯೋಗವಾಗುವಂತಹ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯಕ್ರಮವನ್ನು ರೂಪಿಸುವ ವ್ಯಕ್ತಿಯ ಪಾತ್ರ ಪ್ರತೀ ಸಂಸ್ಥೆಗೂ ಮುಖ್ಯವಾಗಿರುತ್ತದೆ. ಅಂತಹ ವೃತ್ತಿಯೇ ಪಿಆರ್ಒ.
ಹೌದು, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವುದು ಎಲ್ಲರ ಕಾರ್ಯ. ಮಾತ್ರವಲ್ಲದೆ ಅದೊಂದು ಸಾಮಾಜಿಕ ಹೊಣೆಗಾರಿಕೆಯೂ ಹೌದು. ಹಾಗಾಗಿ ಈ ಕೆಲಸವನ್ನು ನಿರ್ವಹಿಸುವ ಹಾಗೂ ಸಾರ್ವಜನಿಕರಿಗೆ ಮತ್ತು ಒಂದು ಸಂಸ್ಥೆಯ ಮಧ್ಯೆ ಕೊಂಡಿಯಾಗಿರುವ ವ್ಯಕ್ತಿಯೇ ಸಾರ್ವಜನಿಕ ಸಂಪರ್ಕಾಧಿಕಾರಿ.
ಸಂಸ್ಥೆಯಿಂದ ನಡೆಯುವ ಸಾಮಾಜಿಕ ಕಾರ್ಯಕ್ರಮ, ಹೆಲ್ತ್ ಕ್ಯಾಂಪೇನ್, ಸಂಸ್ಥೆಯ ಹೆಸರನ್ನು ಪ್ರಚಲಿತಗೊಳಿಸಲು ಮಾಡಬೇಕಾದ ಕಾರ್ಯತಂತ್ರಗಳನ್ನು ರೂಪಿಸುವುದು ಈತನ ಹೊಣೆಗಾರಿಕೆಯಾಗಿರುತ್ತದೆ.
ಮಾಧ್ಯಮ ಸ್ನೇಹಿ
ಈತ ಮಾಧ್ಯಮಗಳ ಸ್ನೇಹಿತನಾಗಿ ತನ್ನ ಸಂಸ್ಥೆಯ ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆ, ಜಾಹೀರಾತು, ಪ್ರಚಾರ, ಸಾಮಾಜಿಕ ಕಾರ್ಯಕ್ರಮಗಳು, ಜನಪರ ಕಾಳಜಿ ಹೀಗೆ ಸಂಸ್ಥೆ ನಡೆಸುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಮಾಧ್ಯಮಗಳ ಮುಖಾಂತರ ಸಾರ್ವಜನಿಕರಿಗೆ ಹತ್ತಿರವಾಗುವಂತೆ ಸುದ್ದಿಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಾನೆ.
ಶಿಕ್ಷಣ
ಮಾತುಗಾರಿಕೆ, ಚಾಣಾಕ್ಷತನ, ಆಲೋಚನ ಶಕ್ತಿ, ಕ್ರಿಯಾಶೀಲತೆ ಜತೆಗೆ ಉತ್ತಮ ಸಂವಹನ ಕಲೆಯನ್ನು ಹೊಂದಿದ್ದರೆ ಈ ಕ್ಷೇತ್ರದಲ್ಲೇ ಉನ್ನತ ಶಿಕ್ಷಣವನ್ನು ಮಾಡಬಹುದು. ಪದವಿಯನ್ನು ಜರ್ನಲಿಸಂ, ಮಾರ್ಕೆಟಿಂಗ್ ಆ್ಯಂಡ್ ಕಮ್ಯುನಿಕೇಶನ್ ಅಥವಾ ಮೇಜರ್ ಲ್ಯಾಂಗ್ವೇಜ್ನಲ್ಲಿ ಪಡೆದು ಸ್ನಾತಕೋತ್ತರ ಪದವಿಯನ್ನು ಮಾಡಬಹುದು ಅಥವಾ ಪಾರ್ಟ್ಟೈಮ್ ಶಿಕ್ಷಣವನ್ನು, ಶಾರ್ಟ್ಟೈಮ್ ಕೋರ್ಸ್, ಡಿಪ್ಲೊಮಾ ಕೋರ್ಸ್ಗಳನ್ನು ಅನೇಕ ಶಿಕ್ಷಣ ಸಂಸ್ಥೆಗಳು ನೀಡುತ್ತವೆ. ಹೀಗೆ ಶಿಕ್ಷಣದ ಜತೆಗೆ ಹವ್ಯಾಸವಾಗಿ ಇದನ್ನು ಕಲಿಯಬಹುದು.
ಉದ್ಯೋಗಾವಕಾಶ
ಪಬ್ಲಿಕ್ ರಿಲೇಶನ್ ಆಫೀಸರ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಮಾರ್ಕೆಟಿಂಗ್ ಮ್ಯಾನೇಜರ್, ರೈಟಿಂಗ್ ಈವೆಂಟ್ ಕೋ ಆರ್ಡಿನೇಟರ್, ಪ್ರಸ್ ಸೆಕ್ರೇಟರಿ, ಮೀಡಿಯಾ ಪ್ಲಾನರ್, ನ್ಪೋಕ್ಸ್ಪರ್ಸನ್ ಹೀಗೆ ಹಲವು ರೀತಿಯಲ್ಲಿ ಸಂಸ್ಥೆಯ ಪರವಾಗಿ ಕೆಲಸವನ್ನು ನಿರ್ವಹಿಸಬಹುದು. ಅಥವಾ ಪಾರ್ಟ್ ಟೈಮ್ ಕೆಲಸವನ್ನೂ ನಿರ್ವಹಿಸಬಹುದು. ಆಸಕ್ತ, ಕ್ರಿಯಾಶೀಲ ಯುವಕರಿಗೆ ಮಾಧ್ಯಮ, ಸಂಸ್ಥೆಯ ಮಧ್ಯೆ ಸಂಬಂಧ ಏರ್ಪಡಿಸುವ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುವ ಹೊಣೆಗಾರಿಕೆಯೊಂದಿಗೆ ಉತ್ತಮ ಸಂಭಾವನೆಯನ್ನು ಪಡೆಯುವ ವೃತ್ತಿ ಇದಾಗಿದೆ.
ಸಂಸ್ಥೆಯ ಸಂಪರ್ಕ ಕೊಂಡಿ
ಸಂಸ್ಥೆಗೆ ಸಮಾಜದ ಮಧ್ಯೆ ಸಂಪರ್ಕ ಕೊಂಡಿಯಾಗಿ ಸಂಸ್ಥೆಯ ಪ್ರತಿಯೊಂದು ಹೊಸ ಯೋಜನೆಗೆ ಪ್ರಚಾರ, ಯಶಸ್ಸಿಗೆ ಬೇಕಾದ ಕಾರ್ಯಯೋಜನೆಗಳ ರಚನೆ, ಮಾಧ್ಯಮಗಳ ಮಧ್ಯೆ ಉತ್ತಮ ಬಾಂಧವ್ಯವನ್ನು ಸೃಷ್ಟಿಸಿ ಸಂಸ್ಥೆಯ ಕುರಿತು ಸಮಾಜಕ್ಕೆ ಮಾಹಿತಿ ನೀಡುವ ಕೆಲಸವನ್ನು ಪಿಆರ್ಒ ಮಾಡುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ